Mar 25, 2025, 11:02 PM IST
Karnataka News Live 25th March: DeepSeek V3: AI ಕೋಡಿಂಗ್ನಲ್ಲಿ ಹೊಸ ಕ್ರಾಂತಿ! ChatGPT ಗೆ ನೇರ ಸವಾಲು!


ಬೆಂಗಳೂರು ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ, ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ-ಸಂವಿಧಾನ ಕುರಿತು ತಾವು ನೀಡಿದ ಹೇಳಿಕೆ ಸಂಸತ್ತಿನಲ್ಲಿ ಭಾರೀ ಗದ್ದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸದಾಶಿವ ನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯನ್ನು ಬಿಜೆಪಿ ತಿರುಚಿದೆ. 36 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ ಎಂದು ಹೇಳಿದ್ದಾರೆ.
11:03 PM
DeepSeek V3: AI ಕೋಡಿಂಗ್ನಲ್ಲಿ ಹೊಸ ಕ್ರಾಂತಿ! ChatGPT ಗೆ ನೇರ ಸವಾಲು!
ಡೀಪ್ಸೀಕ್ V3 ಮಾದರಿಗೆ ಹೊಸ ನವೀಕರಣವನ್ನು ಬಿಡುಗಡೆ ಮಾಡಿದೆ. ಇದು ಮುಂದುವರಿದ ಕೋಡಿಂಗ್ ಕೌಶಲ್ಯಗಳನ್ನು ಒದಗಿಸುವ ಭರವಸೆ ನೀಡುತ್ತದೆ. ಈ ನವೀಕರಣದ ಕುರಿತು ವಿವರಗಳನ್ನು ತಿಳಿದುಕೊಳ್ಳಿ, ಇದು ChatGPT ಗೆ ಕಠಿಣ ಪ್ರತಿಸ್ಪರ್ಧಿಯಾಗಲಿದೆ.
ಪೂರ್ತಿ ಓದಿ10:33 PM
ಪೊಲೀಸ್ ಠಾಣೆಯಲ್ಲೇ ಪತಿ PKL ಪ್ಲೇಯರ್ ದೀಪಕ್ ಹೂಡಾ ಮೇಲೆ ಹಲ್ಲೆ ಮಾಡಿದ ಪತ್ನಿ, ಬಾಕ್ಸರ್ ಸ್ವೀಟಿ ಬೋರಾ!
ಕಬಡ್ಡಿ ಆಟಗಾರ ದೀಪಕ್ ಹೂಡಾ ಮತ್ತು ಬಾಕ್ಸರ್ ಸ್ವೀಟಿ ಬೋರಾ ನಡುವೆ ವಿಚ್ಛೇದನ ನಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸ್ವೀಟಿ ಬೋರಾ, ದೀಪಕ್ ಹೂಡಾ ಮೇಲೆ ಹಲ್ಲೆ ನಡೆಸಿದ್ದಾರೆ.
ಪೂರ್ತಿ ಓದಿ9:44 PM
Breaking news: ಜೈಸಲ್ಮೇರ್ದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿ ಗೂಢಚಾರ! ಏನಿತ್ತು ಸಂಚು?
ರಾಜಸ್ಥಾನದ ಜೈಸಲ್ಮೇರ್ನಲ್ಲಿ ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಗೂಢಚಾರನನ್ನು ಬಂಧಿಸಲಾಗಿದೆ. ಆರೋಪಿ ಪಠಾಣ್ ಖಾನ್ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದನೆಂದು ತಿಳಿದುಬಂದಿದೆ.
ಪೂರ್ತಿ ಓದಿ9:14 PM
ಪ್ರಧಾನಿ ಮೋದಿಯಿಂದ ರಂಜಾನ್ ಗಿಫ್ಟ್, 32 ಲಕ್ಷ ಬಡ ಮುಸ್ಲಿಮರಿಗೆ ಸಿಗುವ 'Saugat-e-Modi' ಕಿಟ್ನಲ್ಲಿ ಏನೆಲ್ಲಾ ಇರಲಿದೆ?
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ, 'ಸೌಗತ್-ಎ-ಮೋದಿ' ಕಿಟ್ ವಿತರಣೆಯು ಮಂಗಳವಾರ ರಾಜಧಾನಿ ದೆಹಲಿಯ ನಿಜಾಮುದ್ದೀನ್ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಪ್ರಾರಂಭವಾಗಿದೆ.
ಪೂರ್ತಿ ಓದಿ8:50 PM
ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ ಕಲ್ಲು, ಬಾಟಲಿ ತೂರಿದ ಕಿಡಿಗೇಡಿಗಳು!
ದೆಹಲಿ ವಿವಿಯಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ ನಡೆದಿದೆ. ಉದ್ರಿಕ್ತ ಗುಂಪೊಂದು ವೇದಿಕೆಯತ್ತ ಬಾಟಲಿ, ಕಲ್ಲುಗಳನ್ನು ಎಸೆದಿದೆ.
ಪೂರ್ತಿ ಓದಿ8:10 PM
ಕೆಪಿಎಸ್ಸಿ 1122 ಎಸ್ಡಿಎ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!
ಕರ್ನಾಟಕ ಲೋಕಸೇವಾ ಆಯೋಗವು ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. 134 ಹುದ್ದೆಗಳಿಗೆ 11 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಪೂರ್ತಿ ಓದಿ7:55 PM
ರಾಹುಲ್ ಗಾಂಧಿ ಯಾವ ದೇಶದ ಪ್ರಜೆ? ವಿವರಣೆಗೆ ಗೃಹ ಸಚಿವಾಲಯಕ್ಕೆ ಹೈಕೋರ್ಟ್ 4 ವಾರ ಗಡುವು!
Rahul gandhi citizenship case: ರಾಹುಲ್ ಗಾಂಧಿ (Rahul Gandhi) ಅವರ ಪೌರತ್ವದ ಬಗ್ಗೆ ಹೈಕೋರ್ಟ್ (Allahabad HC) ವಿಚಾರಣೆ. ಗೃಹ ಸಚಿವಾಲಯಕ್ಕೆ (MHA) 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸೂಚನೆ. ದೆಹಲಿ ಹೈಕೋರ್ಟ್ನಲ್ಲಿಯೂ (Delhi HC) ಅರ್ಜಿ ಬಾಕಿ ಇದೆ. ಸಂಪೂರ್ಣ ವಿಷಯ ತಿಳಿಯಿರಿ.
ಪೂರ್ತಿ ಓದಿ
7:40 PM
ಹನಿಟ್ರ್ಯಾಪ್, ಫೋನ್ ಟ್ಯಾಪ್ ಎಲ್ಲವೂ ಅಧಿಕಾರ ಉಳಿಸಿಕೊಳ್ಳುವ ಕುತಂತ್ರ: ಶಾಸಕ ಕೃಷ್ಣನಾಯ್ಕ!
ಶಾಸಕ ಕೃಷ್ಣನಾಯ್ಕ ಅವರು ಫೋನ್ ಟ್ಯಾಪಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಗಳನ್ನು ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪೂರ್ತಿ ಓದಿ6:57 PM
'ಇನ್ಶಾ ಅಲ್ಲಾ.. ನಾವು ಹಿಂದೂಗಳನ್ನ ಕೊಂದ್ರೆ ಸ್ವರ್ಗ ಸಿಗುತ್ತೆ'; ಪಾಕಿಸ್ತಾನ ಸ್ವರ್ಗ ಎನ್ನುವವರು ಈ ವಿಡಿಯೋ ನೋಡಿ!
ಪಾಕಿಸ್ತಾನದಲ್ಲಿ ಕಾಶ್ಮೀರಕ್ಕೆ ಹೋಗಿ ಹಿಂದೂಗಳನ್ನು ಕೊಲ್ಲುವುದರಿಂದ ಸ್ವರ್ಗ ಸಿಗುತ್ತದೆ ಎಂದು ಯುವಕನೊಬ್ಬ ಹೇಳಿಕೆ ನೀಡಿದ್ದಾನೆ. ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನದ ಪರಿಸ್ಥಿತಿ ಬಗ್ಗೆಯೂ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ6:54 PM
ವಿಚ್ಛೇದನ ನೀಡಿದ್ದಕ್ಕೆ ಗಂಡನಿಗೆ ಜೀವನಾಂಶ ನೀಡಿದ ಪ್ರಖ್ಯಾತ ಕಿರುತೆರೆ ನಟಿ, ಆಕೆಯ ಆಸ್ತಿ ಎಷ್ಟು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಜುವೇಂದ್ರ ಚಾಹಲ್ ಪತ್ನಿಗೆ ಪರಿಹಾರ ನೀಡಿದ್ದಾರೆ. ಆದರೆ, ಕಿರುತೆರೆ ನಟಿ ಶ್ವೇತಾ ತಿವಾರಿ ವಿಚ್ಛೇದನದಲ್ಲಿ ಪತಿಗೆ ಜೀವನಾಂಶ ನೀಡಿ ಸುದ್ದಿಯಾಗಿದ್ದರು.
ಪೂರ್ತಿ ಓದಿ6:50 PM
'ಕೊನೆಯ ಅಡುಗೆ ಮಾಡಿದ್ದೇನೆ, ಊಟ ಮಾಡಿ, ಜೀವನ ಸಾಕಾಗಿದೆ' ಎಂದು ಪತಿಗೆ ಹೇಳಿ ಜೀವಕ್ಕೆ ವಿದಾಯ ಹೇಳಿದ ಶಿಕ್ಷಕಿ!
ಮದುವೆಯಾದ ಮೇಲೆ ಅನುಭವಿಸಿದ ನೋವುಗಳ ಸರಮಾಲೆಯನ್ನೇ ತೆರೆದಿಟ್ಟು ಪಾಲಕರಿಗೆ ವಾಟ್ಸ್ಆ್ಯಪ್ ಸಂದೇಶ ಮಾಡಿ, ಶಿಕ್ಷಕಿಯೊಬ್ಬರು ಬದುಕನ್ನು ಅಂತ್ಯಗೊಳಿಸಿದ್ದಾರೆ!
6:22 PM
ಸಿಟ್ಟಿನಲ್ಲಿ ಮಲಗುವ ಮಂಚಕ್ಕೆ ಒದ್ದ ಮಯಾಂಕ್; ಐಪಿಎಲ್ ಆಡೋದು ಮತ್ತಷ್ಟು ತಡ!
ಲಖನೌ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಗಾಯಗೊಂಡಿದ್ದಾರೆ. ಸಿಟ್ಟಿನಲ್ಲಿ ಮಂಚಕ್ಕೆ ಒದ್ದು ಕಾಲುಬೆರಳು ಮುರಿದುಕೊಂಡಿದ್ದಾರೆ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗಿದೆ.
ಪೂರ್ತಿ ಓದಿ6:20 PM
ಮುಂದಿನ 2 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ 40-50km ವೇಗದ ಗಾಳಿ ಜೊತೆ ಮಳೆ ಎಚ್ಚರಿಕೆ
ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರಿಸುತ್ತಿದ್ದು, ಹಲವೆಡೆ ಮಳೆಯಾಗಿದೆ. ಇದರಿಂದ ರೈತರಿಗೆ ಮಾವು ಬೆಳೆ ನಾಶವಾಗುವ ಆತಂಕ ಎದುರಾಗಿದೆ.
ಪೂರ್ತಿ ಓದಿ6:07 PM
ಸಂಬಂಧ ಹಾಳಾಗ್ಬಾರ್ದಾ? ಹಾಗಿದ್ರೆ ಇವ್ರನ್ನ ಮದ್ವೆಯಾಗಿ ಎಂದ ಟೆಕ್ಕಿ: ಏನ್ ತಲೆ ಗುರೂ ಅಂತಿರೋ ನೆಟ್ಟಿಗರು!
ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕು ಎಂದರೆ, ಒಬ್ಬರ ಮೇಲೆ ಒಬ್ಬರು ಡೌಟ್ ಪಡಬಾರದು ಎಂದರೆ ಯಾರನ್ನು ಮದುವೆಯಾಗಬೇಕು ಎಂದಿರುವ ಟೆಕ್ಕಿಯ ಮಾತೀಗ ಭಾರಿ ಚರ್ಚೆ ಹುಟ್ಟುಹಾಕಿದೆ.
5:38 PM
ಡಿಕೆ ಶಿವಕುಮಾರ ಕಾಂಗ್ರೆಸ್ನ ಹಿರಿಯ ನಾಯಕರು, ಸಂವಿಧಾನ ವಿರುದ್ಧ ಮಾತನಾಡಲು ಸಾಧ್ಯವೇ ಇಲ್ಲ: ಸಚಿವ ಬೋಸರಾಜು
ಕೊಡಗಿನಲ್ಲಿ ಸಚಿವ ಭೋಸರಾಜ್ ಅವರು ಆರ್. ಅಶೋಕ್ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. ಹನಿಟ್ರ್ಯಾಪ್ ವಿಷಯದಲ್ಲಿ ಅಶೋಕ್ ಮತ್ತು ವಿಜಯೇಂದ್ರ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ, ಹಾಗೂ ಡಿಕೆಶಿ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಪೂರ್ತಿ ಓದಿ5:37 PM
ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡ್ಕೊಂಡು ಗಂಟೆ ಅಲ್ಲಾಡಿಸಿದ್ರೆ ಆಗಲ್ಲ: ನಿಖಿಲ್ ಕುಮಾರಸ್ವಾಮಿ!
ಸ್ಮಾರ್ಟ್ ಮೀಟರ್ ಅಡಿಯಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡ್ತಿದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಪೂರ್ತಿ ಓದಿ4:56 PM
ಎಲ್ಲರನ್ನೂ ಬಿಟ್ಟು ಋತುರಾಜ್ರನ್ನೇ ಸಿಎಸ್ಕೆ ಕ್ಯಾಪ್ಟನ್ ಮಾಡಿದ್ದೇಕೆ? ಮೌನ ಮುರಿದ ಧೋನಿ!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಎಂ.ಎಸ್.ಧೋನಿ ಮೌನ ಮುರಿದಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರ ಶಾಂತ ಸ್ವಭಾವ ಮತ್ತು ಸಾಮರ್ಥ್ಯದ ಬಗ್ಗೆ ತಂಡಕ್ಕೆ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ4:55 PM
'ನಮ್ಮ ಮನೆಗೆ ಸಿಸಿಟಿವಿ ಇದೆ, ಸರ್ಕಾರಿ ನಿವಾಸಕ್ಕೆ ಇಲ್ಲ..' ಎಂದ ರಾಜಣ್ಣ, ಸರ್ಕಾರ ಏಕೆ ಅಳವಡಿಸಿಲ್ಲ? ಇಲ್ಲೇ ಏನೋ ಸಮಸ್ಯೆ ಇದೆ?
ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಕುರಿತು ಗೃಹ ಸಚಿವರಿಗೆ ದೂರು ನೀಡಲು ಸಿದ್ಧರಾಗಿದ್ದಾರೆ. ತನಿಖೆಯ ಸ್ವರೂಪ ಮತ್ತು ಹೈಕಮಾಂಡ್ನ ಪ್ರತಿಕ್ರಿಯೆಯ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಪೂರ್ತಿ ಓದಿ4:53 PM
ಬ್ಲ್ಯೂ ಜೀನ್ಸ್ ಹಾಕೋ ಎಲ್ಲ ಹುಡುಗೀರು ಹನಿಟ್ರ್ಯಾಪ್ ಮಾಡ್ತಾರಾ? ಕೆಎನ್ ರಾಜಣ್ಣಗೆ ಚೇತನ್ ಅಹಿಂಸ ಪ್ರಶ್ನೆ!
ಹನಿಟ್ರ್ಯಾಪ್ ಬಗ್ಗೆ ಸಚಿವ ಕೆಎನ್ ರಾಜಣ್ಣ ಅವರು ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆ ಆಗ್ತಿದೆ. ನಟ ಚೇತನ್ ಅಹಿಂಸ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
4:44 PM
ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ, ಸಿಗಲಿದೆ ಭರ್ಜರಿ ವಿನಾಯಿತಿ
ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಜಾರಿಯಾಗುತ್ತಿದೆ. ನೂತನ ಟೋಲ್ ಪಾಲಿಸಿ ವಾಹನ ಮಾಲೀಕರಿಗೆ ಹೆಚ್ಚಿನ ವಿನಾಯಿತಿ ಸಿಗಲಿದೆ. ನಿತಿನ್ ಗಡ್ಕರ್ ಘೋಷಿಸಿದ ಹೊಸ ಟೋಲ್ ಪಾಲಿಸಿ ಏನು?
ಪೂರ್ತಿ ಓದಿ4:20 PM
ಎಣ್ಣೆ ಕೊಟ್ಟಿಲ್ಲ ಎಂದು ಜೆಸ್ಸಿಕಾ ಲಾಲ್ನ ಶೂಟ್ ಮಾಡಿದ್ದ ವ್ಯಕ್ತಿ ಇಂದು ಮದ್ಯ ಸಾಮ್ರಾಜ್ಯದ ಅಧಿಪತಿ!
ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಮನು ಶರ್ಮ ಈಗ ಸಿದ್ಧಾರ್ಥ್ ಶರ್ಮ ಆಗಿ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕರಾಗಿದ್ದಾರೆ. ಈ ವಿಸ್ಕಿ ಹಲವು ಪ್ರಶಸ್ತಿಗಳನ್ನು ಗೆದ್ದಿದೆ, ಆದರೆ ಇದರ ಮಾಲೀಕನ ಹಿನ್ನೆಲೆ ಆಶ್ಚರ್ಯಕರವಾಗಿದೆ.
ಪೂರ್ತಿ ಓದಿ4:06 PM
ತಿರುಚೆಂಡೂರ್ ದೇವಸ್ಥಾನದ ಶೌಚಾಲಯದ ವಿಡಿಯೋ; ಬಿಜೆಪಿ ಕಾರ್ಯಕರ್ತರಿಗೆ DMK ಸರ್ಕಾರ ಬೆದರಿಕೆ! ಅಣ್ಣಾಮಲೈ ಖಡಕ್ ವಾರ್ನ್!
ರುಚೆಂದೂರಿನ ಮುರುಗನ್ ದೇವಸ್ಥಾನದಲ್ಲಿನ ಶೌಚಾಲಯಗಳ ಗುಣಮಟ್ಟದ ಬಗ್ಗೆ ಬಿಜೆಪಿ ನಾಯಕರೊಬ್ಬರು ವಿಡಿಯೋ ಬಿಡುಗಡೆ ಮಾಡಿದ ನಂತರ, ಡಿಎಂಕೆ ಸರ್ಕಾರ ಬೆಳಿಗ್ಗೆ 4 ಗಂಟೆಗೆ ಪೊಲೀಸರ ಮೂಲಕ ಅವರಿಗೆ ಬೆದರಿಕೆ ಹಾಕಿರುವ ಹಿನ್ನೆಲೆ ಅಣ್ಣಾಮಲೈ ಡಿಎಂಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿ3:47 PM
Bhagyalakshmi Serial: ಫಸ್ಟ್ ಟೈಮ್ ಒಳ್ಳೇ ಕೆಲಸ ಮಾಡಿದ ತಾಂಡವ್; ಪ್ರಳಯ ಆಗದೇ ಇದ್ದರೆ ಸಾಕಪ್ಪಾ!
ಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಹೊಸ ಹೆಜ್ಜೆ ಇಟ್ಟರೆ, ತಾಂಡವ್ ಮಾತ್ರ ಒಳ್ಳೆಯ ಕೆಲಸ ಮಾಡಿದ್ದಾನೆ. ಏನದು?
ಪೂರ್ತಿ ಓದಿ3:38 PM
Uyghur Muslims: ರಂಜಾನ್ ಪ್ರಾರ್ಥನೆಗಳ ಮೇಲೆ ನಿಷೇಧ ಹೇರಿದ ಚೀನಾ! ಬಲವಂತವಾಗಿ ಕೆಲಸ ಮಾಡಿಸುತ್ತಿರುವುದಕ್ಕೆ ಸಮುದಾಯ ಕಿಡಿ!
Uyghur Muslims : ಚೀನಾದ ವಾಯುವ್ಯ ಪ್ರದೇಶದ ಕ್ಸಿನ್ಜಿಯಾಂಗ್ನಲ್ಲಿ, ಉಯಿಘರ್ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಉಪವಾಸ ಮತ್ತು ಪ್ರಾರ್ಥನೆ ಮಾಡದಂತೆ ಅಧಿಕಾರಿಗಳು ಬಲವಂತವಾಗಿ ಕೆಲಸ ಮಾಡಿಸುತ್ತಿದ್ದಾರೆ ಎಂದು ರೇಡಿಯೋ ಫ್ರೀ ಏಷ್ಯಾ (RFA) ವರದಿ ಮಾಡಿದೆ. ಈ ವಿಷಯ ಈಗ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಚೀನಾದಲ್ಲಿ ಏನಾಗುತ್ತಿದೆ ಗೊತ್ತಾ?
ಪೂರ್ತಿ ಓದಿ3:10 PM
ರಾಜಸ್ಥಾನದಲ್ಲಿ ಭಾರಿ ಪೊಲೀಸ್ ಭದ್ರತೆಯಲ್ಲಿ ನಡೆಯಿತು ಶಿಕ್ಷಕಿ ಮದ್ವೆ: ಕಾರಣ ಇಲ್ಲಿದೆ
ಇಲ್ಲೊಂದು ಕಡೆ ವಧು ಮದುವೆಗೆ ಮೊದಲೇ ಹೈಕೋರ್ಟ್ ಕದ ತಟ್ಟಿ ಭಾರಿ ಭದ್ರತೆಯ ಮಧ್ಯೆ ಮದ್ವೆಯಾಗಿದ್ದಾರೆ. ಈ ಮದುವೆಯಲ್ಲಿ ನೆಂಟರು ಬಂಧುಗಳಿಗಿಂತ ಹೆಚ್ಚು ಪೊಲೀಸರೇ ಇದ್ದರಂತೆ. ಅದು ಏಕೆ ಅಂತ ಇಲ್ಲಿದೆ ನೋಡಿ ಸ್ಟೋರಿ..
ಪೂರ್ತಿ ಓದಿ3:07 PM
ಕೊಹ್ಲಿ ಶತಕಕ್ಕೆ ಹಾತೊರೆಯುತ್ತಾರೆ: ಅಚ್ಚರಿ ಹೇಳಿಕೆ ಕೊಟ್ಟ ಎಂ ಎಸ್ ಧೋನಿ!
ಧೋನಿ ಮತ್ತು ಕೊಹ್ಲಿ ನಡುವಿನ ಸ್ನೇಹದ ಬಗ್ಗೆ ಧೋನಿ ಮಾತನಾಡಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್ ಕೌಶಲ್ಯ ಮತ್ತು ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್ ಅವರ ಕಮ್ಬ್ಯಾಕ್ ಕುರಿತು ವರದಿಯಿದೆ.
ಪೂರ್ತಿ ಓದಿ3:05 PM
ರವಿ ಬುಧನಿಂದ ದೊಡ್ಡ ರಾಜಯೋಗ, 3 ರಾಶಿಗೆ ಅದೃಷ್ಟ, ಯಶಸ್ಸು, ಖ್ಯಾತಿ
ಸೂರ್ಯ ಮತ್ತು ಬುಧ ಪರಸ್ಪರ ಶೂನ್ಯ ಡಿಗ್ರಿಯಲ್ಲಿ ಇರುವುದರಿಂದ ಸಂಪೂರ್ಣ ಯುತಿ ಯೋಗವನ್ನು ರೂಪಿಸಿಕೊಂಡಿದ್ದಾರೆ, ಇದರಿಂದಾಗಿ 3 ರಾಶಿಚಕ್ರ ಚಿಹ್ನೆಗಳ ಜನರ ಅದೃಷ್ಟವು ಬೆಳಗಬಹುದು.
2:58 PM
ಬೋಟ್ಮ್ಯಾನ್ ಜೊತೆ ಮದುಮಗನ ಪ್ರೀ ವೆಡ್ಡಿಂಗ್ ಶೂಟ್... ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್!
ಅರೆರೆ... ಇದೇನಿದು? ಬೋಟ್ಮ್ಯಾನ್ ಜೊತೆ ಮದುಮಗನ ಪ್ರೀ ವೆಡ್ಡಿಂಗ್ ಶೂಟ್ ನಡೀತಿದೆ... ವೇಟ್.. ವೇಟ್.. ಅಸಲಿಯತ್ತು ಏನೆಂದು ಇಲ್ಲಿದೆ ನೋಡಿ...
2:07 PM
ಹೆಚ್ಚು ಮೈಲೇಜ್, ಉತ್ತಮ ಗುಣಮಟ್ಟ ಬಯಸುವವರಿಗೆ ಟಿವಿಎಸ್ ಐಕ್ಯೂಬ್ ಎಸ್ಟಿ
ಎಲೆಕ್ಟ್ರಿಕ್ ಸ್ಕೂಟರ್ ಬೇಕು, ಜಾಸ್ತಿ ರೇಂಜ್ ಇರಬೇಕು ಅಂತ ಆಶಿಸುವರಿಗೆ ಅಂತಲೇ ಟಿವಿಎಸ್ನವರು ಬಿಟ್ಟಿರುವ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ಟಿವಿಎಸ್ ಐಕ್ಯೂಬ್ ಎಸ್ಟಿ.
ಪೂರ್ತಿ ಓದಿ2:01 PM
ಡಿಕೆಶಿ ‘ಸಂವಿಧಾನ ಬದಲು’ ಹೇಳಿಕೆಗೆ ಬಿಜೆಪಿ ಕೆಂಡ: ಬದಲಾವಣೆಗೆ ಪ್ರಧಾನಿ ಮೋದಿ ಬಿಡಲ್ಲ!
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಸ್ಲಿಂ ಮೀಸಲು ವಿಚಾರವಾಗಿ ‘ಸಂವಿಧಾನ ಬದಲು’ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ1:40 PM
ಅರ್ಹರ ಮನೆ ಬಾಗಿಲಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸದೆ, ಅರ್ಹರ ಸಾಧನೆ ಗುರುತಿಸಿ ಪ್ರಶಸ್ತಿಯನ್ನು ಮನೆಬಾಗಿಲಿಗೆ ಕೊಂಡೊಯ್ದು ನೀಡುವಂತಹ ಹೊಸ ಅಧ್ಯಾಯ ಆರಂಭಿಸುವ ಚಿಂತನೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
1:35 PM
ಯುಗಾದಿ ಬಂಪರ್: ಚಿನ್ನ-ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್- ಬೆಲೆಯಲ್ಲಿ ಕುಸಿತ; ಎಲ್ಲೆಲ್ಲಿ ಎಷ್ಟಿದೆ ರೇಟ್?
ಯುಗಾದಿ ಹಬ್ಬ ಹೊಸ್ತಿಲಲ್ಲಿಯೇ ಇರುವ ಹೊತ್ತಲ್ಲೇ ಚಿನ್ನ-ಬೆಳ್ಳಿ ದರದಲ್ಲಿ ಕುಸಿತವಾಗಿದ್ದು, ಎಲ್ಲೆಲ್ಲಿ ದರ ಎಷ್ಟೆಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ...
12:50 PM
ಪತ್ನಿ ಮಗನನ್ನು ಬಸ್ ಹತ್ತಿಸಿದ ರೀತಿಗೆ ಫಿದಾ ಆದ ಭಾರತ, ವಿಡಿಯೋ
ಪತ್ನಿ ಹಾಗೂ ಮಗನನ್ನು ಬಸ್ ಹತ್ತಿಸಿದ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರ ಪ್ರಯತ್ನ ಹಾಗೂ ಶೈಲಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಇಲ್ಲಿದೆ.
ಪೂರ್ತಿ ಓದಿ12:46 PM
ರಜತ್ ಮತ್ತು ವಿನಯ್ಗೌಡ ಬಳಸಿದ ಕಾಟೇರ ಮಚ್ಚು ತಾಳೆಯಾಗುತ್ತಿಲ್ಲ; ಸಾಕ್ಷ್ಯನಾಶದ ಕೇಸಲ್ಲಿ ಬಂಧನಕ್ಕೆ ಹೆದರಿ ಪರಾರಿ!
ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ.
ಪೂರ್ತಿ ಓದಿ12:31 PM
CSK ಕ್ಯಾಪ್ಟನ್ ಗಾಯಕ್ವಾಡ್ ಬಾಲ್ ಟ್ಯಾಂಪರಿಂಗ್ ಮಾಡಿದ್ರಾ? ಅಷ್ಟಕ್ಕೂ ಆಗಿದ್ದೇನು?
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಖಲೀಲ್ ಅಹಮದ್ ಜೊತೆಗೂಡಿ ಚೆಂಡಿನ ವಿರೂಪಕ್ಕೆ ಯತ್ನಿಸಿದ್ದಾರೆಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಪೂರ್ತಿ ಓದಿ12:26 PM
ಇದು ಕೋಳಿಯಲ್ಲ, ಕೊಕ್ಕೊಕ್ಕೋ ಎನ್ನೋ ಗಿಳಿ... ನಿಜಾರೀ... ಆನ್ಲೈನ್ನಲ್ಲೂ ಲಭ್ಯ! ಇಲ್ಲೇ ಟೆಸ್ಟ್ ಮಾಡಿ ನೋಡಿ...
ಇದು ಕೋಳಿಯಂತೆ ಕಾಣುವ ಗಿಳಿ. ಬೆಳಿಗ್ಗೆ ಚಿಂವ್ ಚಿಂವ್ ಎನ್ನೋ ಬದಲು ಕೊಕ್ಕೊಕ್ಕೋ ಎನ್ನುತ್ತೆ. ಬೆಲೆ ಕೇವಲ 6,500 ರೂಪಾಯಿ! ಆಫರ್ ಇದೆ... ಹೀಗೊಂದು ಜಾಹೀರಾತು ಕಾಣಿಸಿಕೊಳ್ತಿದೆ. ಏನಿದರ ವಿಶೇಷತೆ?
12:06 PM
ಡ್ರಿಂಕ್ಸ್ ಮಾಡುವ ಮೊದಲು ಕುಡುಕರು ಕೆಲ ಹನಿ ಮದ್ಯ ನೆಲಕ್ಕೆ ಚೆಲ್ತಾರೆ ಏಕೆ ಗೊತ್ತಾ?
ಮದ್ಯ ಕುಡಿಯೋಕೆ ಶುರು ಮಾಡೋ ಮುಂಚೆ ಕೆಲವರು ಎರಡ್ಮೂರು ಹನಿ ಮದ್ಯ ನೆಲಕ್ಕೆ ಚೆಲ್ತಾರೆ. ಯಾಕೆ ಅಂತ ಗೊತ್ತಾ?
ಪೂರ್ತಿ ಓದಿ12:04 PM
ಹನಿಟ್ರ್ಯಾಪ್ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ; ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಬಂದಿದ್ದರು!
ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದ ಬಗ್ಗೆ ಗೃಹ ಸಚಿವರಿಗೆ ದೂರು ನೀಡಲಿದ್ದಾರೆ. ಒಬ್ಬನೇ ವ್ಯಕ್ತಿ ಎರಡು ಬಾರಿ ಬೇರೆ ಬೇರೆ ಹುಡುಗಿಯರೊಂದಿಗೆ ಬಂದಿದ್ದನು ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ.
ಪೂರ್ತಿ ಓದಿ11:58 AM
ತಂದೆ ಮಗಳಂತಿದೆ ಕೆಮೆಸ್ಟ್ರಿ, ಸಲ್ಮಾನ್ ರಶ್ಮಿಕಾ ಜೋಡಿ ವಿರುದ್ದ ರೆಡ್ಡಿಟ್ ಬಳಕೆದಾರರ ಟೀಕೆ
ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಲಿಪ್ ಸಿಂಕ್ ಒಂದಿಷ್ಟು ಸರಿಯಾಗಿಲ್ಲ, ಇನ್ನು ಸ್ಕ್ರೀನ್ ಮೇಲೆ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಜೋಡಿ ತಂದೆ ಮಗಳಂತಿದೆ ಎಂದು ರೆಡ್ಡಿಟ್ ಬಕೆದಾರರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಪೂರ್ತಿ ಓದಿ11:08 AM
ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ಗೆ ಅಂಬಾನಿ ಸೆಡ್ಡು, ಜಿಯೋ ಗ್ರಾಹಕರಿಗೆ ಉಚಿತ ಕೊಡುಗೆ ಘೋಷಣೆ
ಮುಕೇಶ್ ಅಂಬಾನಿ ಘೋಷಣೆಗೆ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್ ನಡುಗಿದೆ. ಕಾರಣ ಇದೀಗ ಮುಕೇಶ್ ಅಂಬಾನಿ ಜಿಯೋ ಗ್ರಾಹಕರಿಗೆ ಬರೋಬ್ಬರಿ 50 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಘೋಷಿಸಿದೆ.
10:50 AM
ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಗಾಡಿ: ಡಿ.ಕೆ.ಶಿವಕುಮಾರ್
ಈ ವರ್ಷ ಬಿಬಿಎಂಪಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲಾಗುವುದು. ಇವು ಆಟೋ, ಬೈಸಿಕಲ್, ಬೈಕ್ ಹಾಗೂ ಸಾಂಪ್ರದಾಯಿಕ ತಳ್ಳುವ ಗಾಡಿ ಮಾದರಿಯಲ್ಲಿ ಇರಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಪೂರ್ತಿ ಓದಿ10:40 AM
ಏಪ್ರಿಲ್ 12 ರಿಂದ 3 ರಾಶಿ ಜಾಗರೂಕರಾಗಿರಬೇಕು, ಮಂಗಳ ಶನಿ ನಕ್ಷತ್ರದಲ್ಲಿ
ಪುಷ್ಯ ನಕ್ಷತ್ರದಲ್ಲಿ ಮಂಗಳ ಗ್ರಹದ ಸಂಚಾರವು 3 ರಾಶಿಚಕ್ರ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
10:26 AM
IPL 2025: ಗುಜರಾತ್ ಟೈಟಾನ್ಸ್ ಚಾಲೆಂಜ್ಗೆ ಪಂಜಾಬ್ ಕಿಂಗ್ಸ್ ಸಜ್ಜು!
ಅಹಮದಾಬಾದ್ನಲ್ಲಿಂದು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನಾಯಕ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದು, ಶುಭ್ಮನ್ ಗಿಲ್ ಗುಜರಾತ್ ತಂಡದ ನಾಯಕತ್ವ ವಹಿಸಲಿದ್ದಾರೆ.
ಪೂರ್ತಿ ಓದಿ10:26 AM
ದಾವಣಗೆರೆ ವಿವಿಯಲ್ಲಿ ದುಡ್ಡಿದೆ, ವಿದ್ಯಾರ್ಥಿಗಳಿಲ್ಲ! ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿ
ನ್ಯಾಕ್ ಮಾನ್ಯತೆ ಭ್ರಷ್ಟಾಚಾರದಲ್ಲಿ ಪ್ರಾಧ್ಯಾಪಕಿ ಅಮಾನತು ಹೀಗೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಒಂಬತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳದ್ದೇ ಕೊರತೆ.
ಪೂರ್ತಿ ಓದಿ10:19 AM
ರಾಜ್ಯದ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ, ಏಪ್ರಿಲ್ನಿಂದ ವಾಹನ ಖರೀದಿ ದುಬಾರಿ
ಕರ್ನಾಟಕದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾಗುತ್ತಿದೆ. ಇದೀಗ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಏಪ್ರಿಲ್ ತಿಂಗಳಿನಿಂದ ವಾಹನ ಖರೀದಿ ಬಲು ದುಬಾರಿಯಾಗುತ್ತಿದೆ. ರಾಜ್ಯ ಸರ್ಕಾರದ ಸೆಸ್, ಮತ್ತೊಂದೆಡೆ ಬಿಡಿ ಭಾಗ ಆಮದು ಸುಂಕ ಹೆಚ್ಚಳದಿಂದ ವಾಹನ ಕೈಗೆಟುಕದ ದ್ರಾಕ್ಷಿಯಾಗಲಿದೆ.
ಪೂರ್ತಿ ಓದಿ10:04 AM
ಭ್ರಷ್ಟಾಚಾರ ಆರೋಪಿ ನ್ಯಾಯಮೂರ್ತಿ ವರ್ಮಾ ವಿರುದ್ಧ ಎಫ್ಐಆರ್ಗೆ ಆಗ್ರಹ: ವಕೀಲರ ಮುಷ್ಕರ
ಭ್ರಷ್ಟಾಚಾರ ಆರೋಪದ ಮೇಲೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದಿಲ್ಲಿ ಹೈಕೋರ್ಟ್ನಿಂದ ಅಲಹಾಬಾದ್ಗೆ ವರ್ಗಾಯಿಸಿದ್ದನ್ನು ಖಂಡಿಸಿ ಅಲಹಾಬಾದ್ ಬಾರ್ ಕೌನ್ಸಿಲ್ ಮುಷ್ಕರಕ್ಕೆ ಕರೆ ನೀಡಿದೆ. ವರ್ಮಾ ವಿರುದ್ಧ ಸಿಬಿಐ, ಇ.ಡಿ. ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಪೂರ್ತಿ ಓದಿ9:56 AM
ಬೆಂಗಳೂರು: ಕನಕಗಿರಿ ಉತ್ಸವ ನಡೆಸಿದ್ದ ಸಂಸ್ಥೆ ಮಾಲೀಕನಿಗೆ ₹3 ಕೋಟಿ ವಂಚನೆ
ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ‘ಕನಕಗಿರಿ ಉತ್ಸವ’ ನಡೆಸಿಕೊಟ್ಟಿದ್ದ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮಾಲೀಕನಿಗೆ ₹3 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದಡಿ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ತಿ ಓದಿ9:42 AM
ಡಿ.ಕೆ.ಶಿವಕುಮಾರ್ ಹೇಳಿಕೆ ಪ್ರಸ್ತಾಪಿಸಿದ ಕೇಂದ್ರ ಸಚಿವ ರಿಜಿಜು ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ
ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಯ ಈ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಆಗದು’ ಎಂದು ರಾಜ್ಯಸಭೆಯಲ್ಲಿ ಹೇಳಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ಕಾಂಗ್ರೆಸ್ ಪಕ್ಷ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಹೇಳಿದೆ.
9:40 AM
ತಿರುಮಲ: ₹5258 ಕೋಟಿ ಬಜೆಟ್, ₹1729 ಕೋಟಿ ಆದಾಯ ನಿರೀಕ್ಷೆ!
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಿನ ಆರ್ಥಿಕ ವರ್ಷಕ್ಕೆ ₹5258 ಕೋಟಿ ಬಜೆಟ್ ಮಂಡಿಸಿದೆ. ಹುಂಡಿಯಿಂದ ₹1729 ಕೋಟಿ ಆದಾಯದ ನಿರೀಕ್ಷೆಯಿದೆ.
ಪೂರ್ತಿ ಓದಿ9:34 AM
2 ವರ್ಷದಿಂದ ನನ್ನ, ಎಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ: ಆರ್.ಅಶೋಕ್ ಗಂಭೀರ ಆರೋಪ
ಹನಿಟ್ರ್ಯಾಪ್ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಫೋನ್ ಕದ್ದಾಲಿಕೆ ವಿಚಾರದ ಚರ್ಚೆ ಮುನ್ನಲೆಗೆ ಬಂದಿದ್ದು, ತಮ್ಮ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಪೂರ್ತಿ ಓದಿ9:27 AM
ಸ್ಮಾರ್ಟ್ಮೀಟರ್ ಶುಲ್ಕ ಹೆಚ್ಚಳಕ್ಕೆ ಆರ್ಡಿಎಸ್ಎಸ್ ನಿಯಮ ಕಾರಣ: ಗೌರವ್ ಗುಪ್ತಾ ಸ್ಪಷ್ಟನೆ
ಕೇಂದ್ರದ ಆರ್ಡಿಎಸ್ಎಸ್ ಯೋಜನೆಯಡಿ ರಾಜ್ಯವು ಸೇರದ ಕಾರಣ ಸ್ಮಾರ್ಟ್ ಮೀಟರ್ಗೆ ದೊರೆಯುವ ಶೇ.15 ಸಬ್ಸಿಡಿ ಗ್ರಾಹಕರಿಗೆ ದೊರೆಯುತ್ತಿಲ್ಲ. ಜತೆಗೆ ಕೆಇಆರ್ಸಿ ನಿಯಮದ ಪ್ರಕಾರ ರಾಜ್ಯದಲ್ಲಿ ಗ್ರಾಹಕರೇ ಸ್ಮಾರ್ಟ್ ಮೀಟರ್ ಖರೀದಿಸಬೇಕು.
ಪೂರ್ತಿ ಓದಿ9:27 AM
IPL 2025: ಡೆಲ್ಲಿಯನ್ನು ಗೆಲ್ಲಿಸಿದ ಅಶುತೋಷ್ ಶರ್ಮಾ ಸಾಹಸ!
ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿದೆ. ಅಶುತೋಷ್ ಶರ್ಮಾ ಅವರ ಅಬ್ಬರದ ಆಟವು ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಪೂರ್ತಿ ಓದಿ9:22 AM
ಹೊಟೆಲ್ ರೂಂಗೆ ನುಗ್ಗಿ ಬಾಲಿವುಡ್ ನಟಿ ಮೇಲೆ ಹಲ್ಲೆ, ಕೈಕಾಲು ಕಟ್ಟಿ ಭೀಕರ ದಾಳಿ
ಹೈದರಾಬಾದ್ ಹೊಟೆಲ್ನಲ್ಲಿ ಅಘಾತಕಾರಿ ಘಟನೆ ನಡೆದಿದೆ. ಬಾಲಿವುಡ್ ನಟಿ ಮೇಲೆ ದಾಳಿ ನಡೆದಿದೆ. ನಟಿ ಮಲಗಿದ್ದ ವೇಳೆ ದಾಳಿ ನಡೆದಿದ್ದು, ನಟಿಯ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಒಡೆವೆ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪೂರ್ತಿ ಓದಿ9:17 AM
ನಾಗ್ಪುರ ಹಿಂಸಾಚಾರದ ರೂವಾರಿ ಫಹೀಮ್ ಖಾನ್ 2 ಅಂತಸ್ತಿನ ಮನೆ ಧ್ವಂಸ
ನಾಗ್ಪುರ ಹಿಂಸಾಚಾರದ ರೂವಾರಿ ಫಹೀಮ್ ಖಾನ್ನ ಮನೆಯನ್ನು ಅನಧಿಕೃತ ನಿರ್ಮಾಣದ ಆರೋಪದ ಮೇಲೆ ಧ್ವಂಸ ಮಾಡಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಯೂಸುಫ್ ಶೇಖ್ನ ಮನೆಯ ಅಕ್ರಮ ಭಾಗವನ್ನೂ ತೆರವು ಮಾಡಲಾಗಿದೆ.
ಪೂರ್ತಿ ಓದಿ8:58 AM
ಶಿಕ್ಷಣ ಆರೆಸ್ಸೆಸ್ ನಿಯಂತ್ರಣಕ್ಕೆ ಬಂದರೆ ಭಾರತ ನಾಶ : ರಾಹುಲ್ ಗಾಂಧಿ
ರಾಹುಲ್ ಗಾಂಧಿ ಅವರು ಶಿಕ್ಷಣ ವ್ಯವಸ್ಥೆಯ ಮೇಲೆ ಆರ್ಎಸ್ಎಸ್ ನಿಯಂತ್ರಣ ಸಾಧಿಸಿದರೆ ದೇಶಕ್ಕೆ ಉದ್ಯೋಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಆರ್ಎಸ್ಎಸ್ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ8:58 AM
ಏಕಾಂಗಿಯಾಗಿ ರೋವಿಂಗ್ ಮಾಡಿ ಅಟ್ಲಾಂಟಿಕ್ ಮಹಾಸಾಗರ ದಾಟಿ ದಾಖಲೆ ಬರೆದ ಜಿಎಸ್ಸೆಸ್ ಮೊಮ್ಮಗಳು ದೀನಬಂಧು ಆಶ್ರಮಕ್ಕೆ ಭೇಟಿ!
ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ದಾಖಲೆಗೈದವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್.
8:56 AM
ಯುಗಾದಿ ಹಬ್ಬಕ್ಕೆ ಊರಿಗೆ ತೆರಳುತ್ತಿರುವವರಿಗೆ ಶಾಕ್, ನಿಮ್ಮೂರಿಗೆ ಬಸ್ ದರ ಎಷ್ಟಾಗಿದೆ?
ಯುಗಾದಿ ಹಬ್ಬಕ್ಕೆ ಊರಿಗೆ ತೆರಳಲು ಮುಂದಾಗಿರುವ ಜನರಿಗೆ ಬಿಗ್ ಶಾಕ್ ಎದರಾಗಿದೆ. ಬಸ್ ಬುಕ್ ಮಾಡಲು ಮುಂದಾಗುತ್ತಿರುವ ಜನರು ದುಬಾರಿ ದರದಿಂದ ಹೈರಾಣುಗುತ್ತಿದ್ದಾರೆ. ಸದ್ಯ ನಿಮ್ಮ ಊರಿಗೆ ಬಸ್ ದರ ಎಷ್ಟಾಗಿದೆ ಗೊತ್ತಾ?
8:34 AM
ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ರಾಜೀವ್ ಚಂದ್ರಶೇಖರ್ ಅವರು ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಕೇರಳದಲ್ಲಿ ಎನ್ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ಘೋಷಿಸಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಪೂರ್ತಿ ಓದಿ8:30 AM
ಸಂವಿಧಾನ ಬದಲಾವಣೆ ಬಗ್ಗೆ ನಾನು ಹೇಳಿಕೆ ನೀಡಿಲ್ಲ: ಡಿ.ಕೆ.ಶಿವಕುಮಾರ್
ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ. ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
8:18 AM
ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಕಾಮಿಡಿಗೆ ಗರಂ ಆದ ಶಿವಸೇನೆ ಕಾರ್ಯಕರ್ತರು: ಸಭಾಂಗಣ ಪುಡಿ ಪುಡಿ
ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಏಕನಾಥ್ ಶಿಂಧೆ ಅವರನ್ನು 'ದ್ರೋಹಿ' ಎಂದು ಕರೆದಿದ್ದಕ್ಕೆ ಶಿವಸೇನಾ ಕಾರ್ಯಕರ್ತರು ಸಭಾಂಗಣವನ್ನು ಧ್ವಂಸ ಮಾಡಿದ್ದಾರೆ. ಈ ಸಂಬಂಧ 12 ಕಾರ್ಯಕರ್ತರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಾಮ್ರಾ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪೂರ್ತಿ ಓದಿ