ಗಲಾಟೆ ರಾಜಿ: ಗಣೇಶ್ ವಿರುದ್ಧ ಯೂಟರ್ನ್ ಹೊಡೆದ್ರಾ ಆನಂದ್ ಸಿಂಗ್..?

Published : Jan 22, 2020, 09:13 PM ISTUpdated : Jan 22, 2020, 09:16 PM IST
ಗಲಾಟೆ ರಾಜಿ: ಗಣೇಶ್ ವಿರುದ್ಧ ಯೂಟರ್ನ್ ಹೊಡೆದ್ರಾ ಆನಂದ್ ಸಿಂಗ್..?

ಸಾರಾಂಶ

ಬಿಡದಿ ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ | ಪ್ರಕರಣ ರದ್ದು ಕೋರಿ ಶಾಸಕ ಜೆ.ಎನ್. ಗಣೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ| ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, [ಜ.22]: ಶಾಸಕರಾದ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 3ಕ್ಕೆ ಮುಂದೂಡಿದೆ. 

ಕಂಪ್ಲಿ ಶಾಸಕ ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಬಿಡದಿ ರೆಸಾರ್ಟ್ ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದೀಗ ಪರಸ್ಪರ ರಾಜಿ-ಸಂಧಾನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಶಾಸಕ ಗಣೇಶ್‌ ಜತೆ ರಾಜಿಗೆ ಆನಂದ್‌ ಸಿಂಗ್‌ ಒಪ್ಪಿಗೆ

ಆದ್ರೆ, ಮೊನ್ನೆ ಹೈಕೋರ್ಟ್ ಖುದ್ದು ಬುಧವಾರ ಇಬ್ಬರು ನ್ಯಾಯಾಲಕ್ಕೆ ಹಾಜರಾಗಬೇಕೆಂದು ಹೇಳಿತ್ತು. ಅದರಂತೆ ಇಂದು [ಬುಧವಾರ] ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ರಾಜಿಸಂಧಾನ ಮೂಲಕ ಬಗೆಹರಿಸಿಕೊಳ್ಳುವ ಸಂಬಂಧ  ನ್ಯಾಯಾಲಯಕ್ಕೆ ಹೇಳಿಕೆ ನೀಡಬೇಕಿದ್ದ ದೂರುದಾರ ಆನಂದ್ ಸಿಂಗ್ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕೋರ್ಟ್ ಈ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.

ಆನಂದ್ ಸಿಂಗ್  ಕೋರ್ಟ್ ಗೆ ಹಾಜರಾಗಲು ಅವರ ಪರ ವಕೀಲ 10 ದಿನ ಕಾಲಾವಕಾಶ ಕೋರಿದ್ದರು. ಆ ಮನವಿ ಮೇರೆಗೆ  ಹೈಕೋರ್ಟ್ 10 ದಿನಗಳ ಕಾಲಾವಕಾಶ ‌ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ