ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ನೀವು  ಕೈಹಿಡಿದ್ರಿ: ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ: ಸಿದ್ದು ಭಾವನಾತ್ಮಕ ಮಾತು

Published : Mar 25, 2023, 12:26 PM IST
ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ನೀವು  ಕೈಹಿಡಿದ್ರಿ: ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ: ಸಿದ್ದು ಭಾವನಾತ್ಮಕ ಮಾತು

ಸಾರಾಂಶ

ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರೂ ನೀವು  ನನ್ನ ಕೈ ಹಿಡಿದಿದ್ದೀರಿ ನಾನು ಇರೋತನಕ ಬಾದಾಮಿ ಜನರನ್ನ ಮರೆಯೋಲ್ಲ ಎಂದು ಹೇಳಿ ಕೈಮುಗಿದಿದ್ದಾರೆ. ಅಲ್ಲದೇ, ಬಾದಾಮಿ ಕ್ಷೇತ್ರದ ಕೈ ನಾಯಕರು, ಅಧಿಕಾರಿಗಳು, ಸಾರ್ವಜನಿಕರು ಒಳ್ಳೆಯ ಸ್ಫಂದನೆ ನೀಡಿದ್ದೀರಿ ಎಂದು ತಮ್ಮ ಕೊನೆಯ ಭಾಷಣದಲ್ಲಿ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ

ಬಾಗಲಕೋಟೆ (ಮಾ.25) : ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

ವರುಣಾ ಕ್ಷೇತ್ರ(Varuna assembly constituency)ದಿಂದ ಸಿದ್ದರಾಮಯ್ಯ(Siddaramaiah) ಸ್ಫರ್ಧೆ ಬಹುತೇಕ ಫಿಕ್ಸ್ ಆದ ಬೆನ್ನಲ್ಲೆ ಇದೀಗ ಹೊಸದೊಂದು ಕೂಗು ಎದ್ದಿದೆ. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದಾದರೆ ಬಾದಾಮಿಗೆ ಬರಲಿ ಎಂಬ ಕೂಗು ಕೇಳಿಬಂದಿದೆ. 

ರಾಹುಲ್‌ ಗಾಂಧಿ ಅನರ್ಹತೆಯಿಂದ ಮೋದಿ ಹೇಡಿತನ ಸಾಬೀತು: ಸಿದ್ದರಾಮಯ್ಯ

ಹೌದು, ನಿನ್ನೆ ಸಿದ್ದರಾಮಯ್ಯ ಬಾದಾಮಿಯಲ್ಲಿ ರೋಡ್ ಶೋ(Road show)ಬಳಿಕ ವಿದಾಯದ ಭಾಷಣ ಮಾಡಿದ್ದಾರೆ. ಈ ವೇಳೆ ಹೈಕಮಾಂಡ್ ಎಲ್ಲಿ ಸೂಚಿಸುತ್ತದೊ ಅಲ್ಲಿಂದ ಸ್ಪರ್ಧೆ ಮಾಡುವುದಾಗಿ ಹೇಳುವ ಮೂಲಕ ಹೈಕಮಾಂಡ್ ಕಡೆಗೆ ಬೊಟ್ಟು ಮಾಡಿದ್ದಾರೆ. ಅಂದ್ರೆ ಹೈಕಮಾಂಡ್ ಹೇಳಿದ್ರೆ ಬಾದಾಮಿ ಎರಡನೇ ಕ್ಷೇತ್ರ(Badami assembly constituency)ವಾಗಿ ಸಿದ್ದರಾಮಯ್ಯ ನಿಲ್ತಾರೆ ಎಂಬ ಆಶಯ. ಹೀಗಾಗಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಬಾದಾಮಿಯಿಂದಲೂ ಸ್ಪರ್ಧಿಸಿ ಎಂಬ ಕೂಗು ಕೇಳಿಬಂದಿದೆ. 

ಆದರೆ ಬಾದಾಮಿಯಿಂದ ಯಾರೇ ನಿಂತರೂ ಕಾಂಗ್ರೆಸ್(Congress) ಗೆ ಮತ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಗೆ ನೀವು ನೀಡುವ ಮತ ಸಿದ್ದರಾಮಯ್ಯಗೆ ಹಾಕಿದಂತಾಗುತ್ತೆ ಎನ್ನುವ ಮೂಲಕ  ಬಾದಾಮಿಯಿಂದ ಮತ್ತೇ ನಿಲ್ಲದಿರುವ ಬಗ್ಗೆ ಕೊನೆಯ ಭಾಷಣದಲ್ಲಿ ಸೂಚನೆ ನೀಡಿದ್ರಾ ಸಿದ್ದರಾಮಯ್ಯ?

ಆದರೂ ಪಟ್ಟು ಬಿಡದ ಬಾದಾಮಿ ಮತಕ್ಷೇತ್ರದ ಸಿದ್ದು ಅಭಿಮಾನಿಗಳು. ಎರಡನೇ ಕ್ಷೇತ್ರವಾಗಿ ಬಾದಾಮಿಯಲ್ಲಿ ಸ್ಪರ್ಧಿಸುಂತ ಒತ್ತಾಯಿಸಿದ್ದಾರೆ. 

Ticket fight: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬೆಳ್ತಂಗಡಿ ಕ್ಷೇತ್ರದಲ್ಲಿ ಭುಗಿಲೆದ್ದ ಅಸಮಾಧಾನ!

ಬದುಕಿರೋತನಕ ಬಾದಾಮಿ ಜನರನ್ನ ಮರೆಯೊಲ್ಲ:  

ಆಡಳಿತ ಅವಧಿಯ ಕೊನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾದಾಮಿ ಜನರ ಕುರಿತು ಭಾವನಾತ್ಮಕ ಭಾಷಣ ಮಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರೂ ನೀವು  ನನ್ನ ಕೈ ಹಿಡಿದಿದ್ದೀರಿ ನಾನು ಇರೋತನಕ ಬಾದಾಮಿ ಜನರನ್ನ ಮರೆಯೋಲ್ಲ ಎಂದು ಹೇಳಿ ಕೈಮುಗಿದಿದ್ದಾರೆ. ಅಲ್ಲದೇ, ಬಾದಾಮಿ ಕ್ಷೇತ್ರದ ಕೈ ನಾಯಕರು, ಅಧಿಕಾರಿಗಳು, ಸಾರ್ವಜನಿಕರು ಒಳ್ಳೆಯ ಸ್ಫಂದನೆ ನೀಡಿದ್ದೀರಿ. ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ನಾನು ಬಾದಾಮಿ ಜನರಿಗೆ ಸದಾ ಋಣಿಯಾಗಿರುತ್ತೇನೆಂದು ಕೈಮುಗಿದು ಸಿದ್ದರಾಮಯ್ಯನವರು ಭಾವುಕರಾದ ಘಟನೆ ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ