ರಾಯಚೂರು ವಿಧಾನಸಭಾ ಚುನಾವಣೆ : ಎಸ್‌ ಎಸ್ ರಾಜಮೌಳಿ ಚುನಾವಣಾ ಐಕಾನ್!

Published : Mar 10, 2023, 12:55 PM ISTUpdated : Mar 10, 2023, 12:59 PM IST
ರಾಯಚೂರು ವಿಧಾನಸಭಾ ಚುನಾವಣೆ : ಎಸ್‌ ಎಸ್ ರಾಜಮೌಳಿ ಚುನಾವಣಾ ಐಕಾನ್!

ಸಾರಾಂಶ

ವಿಧಾ​ನ​ಸಭಾ ಸಾರ್ವ​ತ್ರಿಕ ಚುನಾ​ವ​ಣೆ ಹಿನ್ನೆ​ಲೆ​ಯಲ್ಲಿ ರಾಯ​ಚೂರು ಜಿಲ್ಲೆಗೆ ಚುನಾ​ವಣಾ ಐಕಾನ್‌ ಆಗಿ ತೆಲುಗು ನಿರ್ದೇ​ಶಕ ಎಸ್‌.​ಎ​ಸ್‌.​ರಾ​ಜ​ಮೌಳಿ(SS Rajamouli) ಅವ​ರನ್ನು ನೇಮಕ ಮಾಡ​ಲಾ​ಗಿದೆ.

ರಾಯ​ಚೂ​ರು (ಮಾ.10) : ವಿಧಾ​ನ​ಸಭಾ ಸಾರ್ವ​ತ್ರಿಕ ಚುನಾ​ವ​ಣೆ ಹಿನ್ನೆ​ಲೆ​ಯಲ್ಲಿ ರಾಯ​ಚೂರು ಜಿಲ್ಲೆಗೆ ಚುನಾ​ವಣಾ ಐಕಾನ್‌ ಆಗಿ ತೆಲುಗು ನಿರ್ದೇ​ಶಕ(tollywood-director) ಎಸ್‌.​ಎ​ಸ್‌.​ರಾ​ಜ​ಮೌಳಿ(SS Rajamouli) ಅವ​ರನ್ನು ನೇಮಕ ಮಾಡ​ಲಾ​ಗಿದೆ. ರಾಯ​ಚೂರು(Raichur) ಸೇರಿ​ದಂತೆ ರಾಜ್ಯದ 10 ಜಿಲ್ಲೆ​ಗ​ಳಿಗೆ ಚುನಾ​ವಣಾ ಐಕಾನ್‌ ಆಗಿ ವಿವಿಧ ಕ್ಷೇತ್ರ​ಗಳ ಗಣ್ಯ​ರನ್ನು ನೇಮಕ ಮಾಡಿ​ರು​ವ ರಾಜ್ಯ ಚುನಾ​ವಣಾ ಆಯೋ​ಗ​(Karnataka State Election Commission )ವು ಆಯಾ ಜಿಲ್ಲೆ​ಗಳ ಜಿಲ್ಲಾ​ ಚುನಾ​ವ​ಣಾ​ಧಿ​ಕಾ​ರಿ​ಗ​ಳಿಗೆ ಮತ್ತು ಜಿಲ್ಲಾ ಪಂಚಾ​ಯ್ತಿಯ ಮುಖ್ಯ​ಕಾ​ರ್ಯ​ನಿ​ರ್ವಾ​ಹಕ ಅಧಿ​ಕಾ​ರಿ​ಗ​ಳಿಗೆ ಆದೇ​ಶ​ದ ಪ್ರತಿ​ಯನ್ನು ರವಾ​ನಿ​ಸಿದೆ.

ಸಾರ್ವತ್ರಿಕ ಚುನಾ​ವ​ಣೆ​ಯಲ್ಲಿ ಜನ​ರಲ್ಲಿ ಮತ​ದಾ​ನದ ಜಾಗೃ​ತಿ ಮೂಡಿ​ಸು​ವು​ದ​ಕ್ಕಾಗಿ ರಾಜ​ಮೌಳಿ ಅವ​ರನ್ನು ಚುನಾವಣಾ ಐಕಾನ್‌ ಆಗಿ ನೇಮಕಾತಿ ಆದೇಶವನ್ನು ಆಯೋ​ಗದ ಹೆಚ್ಚು​ವರಿ ಮುಖ್ಯ ಅಧಿ​ಕಾ​ರಿ ರಾಜೇಂದ್ರ ಚೋಳ​ನ್‌.ಪಿ ಹೊರಡಿಸಿದ್ದಾರೆ.

ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

ರಾಜಮೌಳಿಗೆ ಜಿಲ್ಲೆ ನಂಟು​:

ಸೋಲಿಲ್ಲದ ನಿರ್ದೇ​ಶಕರಾಗಿ ಬಾಹು​ಬ​ಲಿ 1-2(Bahubali Movie) ಮತ್ತು ಆರ್‌ಆರ್‌ಆರ್‌(RRR) ಮುಖಾಂತರ ಇಡಿ ಪ್ರಪಂಚ​ ಪ್ರಖ್ಯಾತಿ ಪಡೆ​ದಿ​ರುವ ಎಸ್‌.​ಎ​ಸ್‌.​ರಾ​ಜ​ಮೌಳಿ ಹಾಗೂ ಅವರ ಕುಟುಂಬ​ಸ್ಥರಿಗೆ ರಾಯ​ಚೂರು ಜಿಲ್ಲೆಯ ನಂಟಿದೆ. ರಾಜಮೌಳಿ ಅವರ ತಂದೆ ಹಾಗೂ ಚಿತ್ರ​ಕ​ಥೆ​ಗಾರ, ನಿರ್ದೇ​ಶಕ ವೈ.ವಿ​ಜ​ಯೇಂದ್ರ ಪ್ರಸಾದ(Y Vijayendra Prasad) ಕುಟುಂಬ​ವು ಕೆಲ ಕಾಲ ಜಿಲ್ಲೆಯ ಮಾನ್ವಿ ತಾಲೂ​ಕಿನ ಅಮ​ರೇ​ಶ್ವರ ಕ್ಯಾಂಪಿ​(Amareshwar camp)ನಲ್ಲಿ ನೆಲೆ​ಸಿ​ದ್ದ​ರು.

ಇಲ್ಲಿಂದ​ ಸಮೀ​ಪದ ಹೈದ​ರಾ​ಬಾ​ದ್‌ಗೆ ತೆರಳಿ ಸಿನಿಮಾ ರಂಗ​ವನ್ನು ಪ್ರವೇ​ಶಿಸಿದ ​ರಾ​ಜ​ಮೌಳಿ ಜ್ಯೂ. ಎ​ನ್‌​ಟಿ​ಆರ್‌ ನಟಿ​ಸಿದ ಸ್ಟೂಡೆಂಟ್‌ ನಂ.1 ಮುಖಾಂತರ ನಿರ್ದೇ​ಶ​ನವನ್ನು ಆರಂಭಿ​ಸಿ ಸಿಂಹಾದ್ರಿ, ಸೈ, ವಿ​ಕ್ರ​ಮಾ​ರ್ಕುಡು, ಛತ್ರ​ಪತಿ, ಮಗ​ಧೀರ, ಮರಾರ‍ಯ​ದ​ ರಾ​ಮನ್ನ, ಯಮ ​ದೊಂಗ, ಈಗ, ಬಾಬು​ಬಲಿ 1 ಮತ್ತು 2 ಹಾಗೂ ಕಳೆದ ವರ್ಷ ತೆರೆ ಕಂಡ ಆರ್‌ಆರ್‌ಆರ್‌ ಹೀಗೆ ತಾವು ನಿರ್ದೇ​ಶಿ​ಸಿದ ಎಲ್ಲ ಚಿತ್ರ​ಗ​ಳನ್ನು ಸೂಪ​ರ್‌ ಡೂಪರ್‌ ಹಿಟ್‌ ಆ್ಟ​ಗಿದೆ. ಇಂದು ಸ್ಟಾರ್‌ ನಟ​ರಿ​ಗಿ​ರು​ವಷ್ಟೇ ಕ್ರೇಜನ್ನೇ ರಾಜ​ಮೌಳಿ ಸಹ ಹೊಂದಿ​ದ್ದಾ​ರೆ. ರಾಯ​ಚೂರು ಜಿಲ್ಲೆ ತೆಲಂಗಾಣ ಹಾಗೂ ಆಂಧ್ರ​ಪ್ರ​ದೇ​ಶಕ್ಕೆ ಹೊಂದಿ​ಕೊಂಡಿ​ರು​ವು​ದ​ರಿಂದ ​ರಾ​ಜ​ಮೌಳಿ ಹಾಗೂ ಅವರ ಕುಟುಂಬದ ಸದ​ಸ್ಯರು ಹಾಗಾಗ ಜಿಲ್ಲೆಗೆ ಬಂದು ಹೋಗು​ತ್ತಾರೆ. ಆದ್ದ​ರಿಂದ ಎಸ್‌.​ಎ​ಸ್‌.​ರಾ​ಜ​ಮೌಳಿ ಅವ​ರನ್ನು ಚುನಾ​ವಣಾ ಐಕಾನ್‌ ಮಾಡು​ವಂತೆ ಜಿಲ್ಲಾ​ಡ​ಳಿ​ತ ಆಯೋ​ಗಕ್ಕೆ ಪ್ರಸ್ತಾ​ವ ಸಲ್ಲಿ​ಸಿತ್ತು. ಇದನ್ನು ಪರಿ​ಗ​ಣಿ​ಸಿದ ಚುನಾ​ವಣಾ ಆಯೋ​ಗದ ಹೆಚ್ಚು​ವರಿ ಮುಖ್ಯ ಅಧಿ​ಕಾ​ರಿ ರಾಜೇಂದ್ರ ಚೋಳ​ನ್‌.ಪಿ ನೇಮ​ಕಾ​ತಿ ಆದೇ​ಶ​ ಹೊರ​ಡಿ​ಸಿ​ದ್ದಾರೆ.

'ಮಸ್ಕಿಗೆ ಬರು​ವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಪ್ಪು ಬಾವುಟ ಪ್ರದರ್ಶನ'

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ