ವಾಮಮಾರ್ಗದಿಂದ ಡಿಕೆಶಿ ಸ್ಪರ್ಧೆ ತಡೆಯಲು ಬಿಜೆಪಿ ಯತ್ನ: ಸಂಸದ ಡಿ.ಕೆ.​ಸು​ರೇಶ್‌

Published : Apr 21, 2023, 12:16 PM IST
ವಾಮಮಾರ್ಗದಿಂದ ಡಿಕೆಶಿ ಸ್ಪರ್ಧೆ ತಡೆಯಲು ಬಿಜೆಪಿ ಯತ್ನ: ಸಂಸದ ಡಿ.ಕೆ.​ಸು​ರೇಶ್‌

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮೇಲೆ ಸಾಕ​ಷ್ಟು ಕಣ್ಣು​ಗಳು ಬಿದ್ದಿದ್ದು, ಬಿಜೆಪಿ ನಾಯ​ಕರು ವಾಮ​ಮಾ​ರ್ಗ​ದಿಂದ ಅವರ ಸ್ಪರ್ಧೆ ತಡೆ​ಯುವ ಅನು​ಮಾನ ಇರುವುದ​ರಿಂದ ಮುಂಜಾಗ್ರತಾ ಕ್ರಮ​ವಾಗಿ ವರಿ​ಷ್ಠರ ಆದೇ​ಶ​ದಂತೆ ನಾಮಪತ್ರ ಸಲ್ಲಿ​ಸಿ​ರು​ವು​ದಾಗಿ ಸಂಸದ ಡಿ.ಕೆ.​ಸು​ರೇಶ್‌ ತಿಳಿಸಿದರು. 

ಕನಕಪುರ (ಏ.21): ಕಾಂಗ್ರೆಸ್‌ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮೇಲೆ ಸಾಕ​ಷ್ಟು ಕಣ್ಣು​ಗಳು ಬಿದ್ದಿದ್ದು, ಬಿಜೆಪಿ ನಾಯ​ಕರು ವಾಮ​ಮಾ​ರ್ಗ​ದಿಂದ ಅವರ ಸ್ಪರ್ಧೆ ತಡೆ​ಯುವ ಅನು​ಮಾನ ಇರುವುದ​ರಿಂದ ಮುಂಜಾಗ್ರತಾ ಕ್ರಮ​ವಾಗಿ ವರಿ​ಷ್ಠರ ಆದೇ​ಶ​ದಂತೆ ನಾಮಪತ್ರ ಸಲ್ಲಿ​ಸಿ​ರು​ವು​ದಾಗಿ ಸಂಸದ ಡಿ.ಕೆ.​ಸು​ರೇಶ್‌ ತಿಳಿಸಿದರು. ಗುರುವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಡಿ.ಕೆ.​ಶಿ​ವ​ಕು​ಮಾರ್‌ ನಾಮ​ಪತ್ರ ಅನೂ​ರ್ಜಿತಗೊಳಿ​ಸಲು ಕೆಲ ಕುತಂತ್ರ​ಗಳು ನಡೆ​ಯು​ತ್ತಿ​ರು​ವುದು ಗೊತ್ತಾ​ಗಿದೆ. ಅದ​ರಲ್ಲೂ ಬಿಜೆಪಿ ನಾಯ​ಕರು ಡಿ.ಕೆ.ಶಿವಕುಮಾರ್‌ ಅವರನ್ನು ಮಣಿ​ಸಲು ಯೋಜನೆ ಮಾಡುತ್ತಿ​ದ್ದಾರೆ. 

ಕೇಂದ್ರ ಸರ್ಕಾರ ತನ್ನ ಅಧೀ​ನ​ದಲ್ಲಿ ತನಿಖಾ ಸಂಸ್ಥೆ​ಗ​ಳನ್ನು ದುರು​ಪ​ಯೋಗ ಪಡಿ​ಸಿ​ಕೊಂಡು ಶಿವ​ಕು​ಮಾರ್‌ ಅವ​ರಿಗೆ ದಿನನಿತ್ಯ ಕಿರುಕುಳ ನೀಡುತ್ತಿದೆ. ಅವ​ರನ್ನು ಬಂಧಿಸುವುದು, ನೋಟಿಸ್‌ ನೀಡು​ವು​ದನ್ನು ಎಲ್ಲರೂ ನೋಡಿ​ದ್ದಾರೆ. ನಾಮಪತ್ರ ಸಲ್ಲಿಸುವ ಹಿಂದಿನ ದಿನವೂ ಚೆನ್ನೈನಲ್ಲಿರುವ ಆದಾಯ ತೆರಿಗೆ ಇಲಾಖೆಯಿಂದ ಖುದ್ದು ಹಾಜರಾಗುವಂತೆ ನೋಟಿಸ್‌ ನೀಡಿತ್ತು. ನಾವು ಚುನಾವಣೆ ಇರುವುದರಿಂದ ಒಂದು ತಿಂಗಳ ಕಾಲಾವಕಾಶ ಕೇಳಿದ್ದೇವೆ. ಅನವಶ್ಯಕವಾಗಿ ನಾವು ಬರುವುದಿಲ್ಲ ಎಂದು ಹೇಳಿದ್ದೇವೆ. ನಮ್ಮ ಮೇಲಿನ ಕೇಸ್‌ಗಳ ಮೇಲೆ ಎಲ್ಲೆಡೆ ತಡೆಯಾಜ್ಞೆಗಳು ಇದೆ. 

ವರುಣಾದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಸಚಿವ ಅಶ್ವತ್ಥನಾರಾಯಣ ಭವಿಷ್ಯ

ಅಧಿಕಾರ ದುರುಪಯೋಗಪಡಿಸಿಕೊಂಡು ಬಿ​ಜೆ​ಪಿ​ಯ​ವರು ಶಿವ​ಕು​ಮಾರ್‌​ರನ್ನು ಟಾರ್ಗೆರ್ಟ್‌ ಮಾಡುತ್ತಿ​ದ್ದಾರೆ ಎಂದು ಡಿ.ಕೆ.​ಸು​ರೇಶ್‌ ಕಿಡಿ​ಕಾ​ರಿ​ದ​ರು. ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಯನ್ನು ನಮ್ಮ ವಿರುದ್ಧ ಕಣಕ್ಕಿಳಿಸಿರುವುದು, ಕೇಂದ್ರ ಬಿಜೆಪಿ ನಾಯಕರೇ ಈ ಬಾರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕ್ಷೇತ್ರದಲ್ಲಿ ಟಕ್ಕರ್‌ ನೀಡುತ್ತೇವೆಂದು ಹೇಳಿರುವುದು ನೋಡಿದರೆ ಯಾವ ಮಾರ್ಗದಿಂದಾದರೂ ಶಿವಕುಮಾರ್‌ ಸ್ಪರ್ಧೆ ನಡೆಸದಂತೆ ತಡೆವೊಡ್ಡುವ ಅನುಮಾನ ಬಂದ ಹಿನ್ನೆಲೆಯಲ್ಲಿ ವರಿಷ್ಠರ ಸೂಚ​ನೆ​ಯಂತೆ ನಾಮಪತ್ರ ಸಲ್ಲಿಸಿದ್ದಾಗಿ ತಿಳಿಸಿದರು. 

ಆಶೀರ್ವಾದ ಮಾಡಲು ಪ್ರಧಾನಿ ಮೋದಿ ದೇವರಲ್ಲ: ಸಿದ್ದರಾಮಯ್ಯ

ಚುನಾವಣಾ ಆಯೋಗವೂ ಸರ್ಕಾರದ ಅಧೀನದಲ್ಲಿ ಬರಲಿದ್ದು, ಕೆಲ ವರ್ಷಗಳಿಂದ ಸರ್ಕಾರದ ಸಂಸ್ಥೆಗಳಾದ ಸಿಬಿಐ, ಐಟಿ ಯಾವ ರೀತಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ ಎಂದು ದೇಶದ ಜನ ನೋಡುತ್ತಿದ್ದಾರೆ. ನಮ್ಮ ಪಕ್ಷದ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನಾನು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯವರು ಏನೇ ಕುತಂತ್ರ ನಡೆಸಿದರೂ ನಾವು ಎದುರಿಸಲು ಸಿದ್ಧವಿರುವುದಾಗಿ ಸುರೇಶ್‌ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು