ಕಾಂಗ್ರೆಸ್‌ನಿಂದ ತಳಸಮುದಾಯದ ಅಭಿವೃದ್ಧಿಯಾಗಿಲ್ಲ: ಸಿಎಂ ಬೊಮ್ಮಾಯಿ

Published : Apr 17, 2023, 03:00 AM IST
ಕಾಂಗ್ರೆಸ್‌ನಿಂದ ತಳಸಮುದಾಯದ ಅಭಿವೃದ್ಧಿಯಾಗಿಲ್ಲ: ಸಿಎಂ ಬೊಮ್ಮಾಯಿ

ಸಾರಾಂಶ

ಪರಿ​ಶಿಷ್ಟ ಜಾತಿ-ಜನಾಂಗವನ್ನು ಬರೀ ವೋಟ್‌ ಬ್ಯಾಂಕ​ನ್ನಾ​ಗಿ​ಸಿ​ಕೊಂಡಿದ್ದ ಕಾಂಗ್ರೆಸ್‌, ಆ ಸಮಾ​ಜದ ಮತವನ್ನು ಗಿಟ್ಟಿ​ಸಿ​ಕೊಂಡು ತಾವೆ ಮುಂದೆ ಹೋಗಿ​ದ್ದಾ​ರೆ​ ಹೊರತು ತಳ​ಸ​ಮು​ದಾ​ಯ​ಗಳ ಅಭಿ​ವೃ​ದ್ಧಿ​ಯನ್ನು ಮಾಡಿ​ಲ್ಲ ಎಂದು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಆರೋ​ಪಿ​ಸಿ​ದರು.

ರಾಯಚೂರು (ಏ.17): ಪರಿ​ಶಿಷ್ಟ ಜಾತಿ-ಜನಾಂಗವನ್ನು ಬರೀ ವೋಟ್‌ ಬ್ಯಾಂಕ​ನ್ನಾ​ಗಿ​ಸಿ​ಕೊಂಡಿದ್ದ ಕಾಂಗ್ರೆಸ್‌, ಆ ಸಮಾ​ಜದ ಮತವನ್ನು ಗಿಟ್ಟಿ​ಸಿ​ಕೊಂಡು ತಾವೆ ಮುಂದೆ ಹೋಗಿ​ದ್ದಾ​ರೆ​ ಹೊರತು ತಳ​ಸ​ಮು​ದಾ​ಯ​ಗಳ ಅಭಿ​ವೃ​ದ್ಧಿ​ಯನ್ನು ಮಾಡಿ​ಲ್ಲ ಎಂದು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಆರೋ​ಪಿ​ಸಿ​ದರು. ಸ್ಥಳೀಯ ಕೃಷಿ ವಿಜ್ಞಾ​ನ​ಗಳ ವಿಶ್ವ​ವಿ​ದ್ಯಾ​ಲ​ಯದ ಆವ​ರ​ಣ​ದಲ್ಲಿ ಮೀಸ​ಲಾತಿ ಹೆಚ್ಚಿಸಿ ಮತ್ತು ಒಳ ಮೀಸ​ಲಾತಿ ಜಾರಿ​ಗೊ​ಳಿ​ಸಿದ್ದಾಗಿ ಪರಿ​ಶಿಷ್ಟಸಮು​ದಾ​ಯ​ಗಳ ಒಕ್ಕೂ​ಟ​ದಿಂದ ಭಾನು​ವಾರ ಹಮ್ಮಿ​ಕೊಂಡಿದ್ದ ಅಭಿ​ನಂದನಾ ಸಮಾ​ರಂಭ​ ಉದ್ಘಾ​ಟಿಸಿ ಮಾತ​ನಾ​ಡಿ​ದರು.

ಕಾಂಗ್ರೆಸ್‌ ಮಾಜಿ ಸಿಎಂ ಸಿದ್ದ​ರಾ​ಮಯ್ಯ ಭಾಷ​ಣ​ದಲ್ಲಷ್ಟೇ ಸಾಮಾ​ಜಿಕ ನ್ಯಾಯ ಕಲ್ಪಿ​ಸಿ​ದ್ದಾರೆ ಹೊರತು ಆ ಸಮು​ದಾ​ಗಳ ಬಹು​ದಿ​ನ​ಗಳ ಬೇಡಿ​ಕೆ​ಯಾ​ಗಿದ್ದ ಒಳ ಮೀಸ​ಲಾ​ತಿ ಕಲ್ಪಿ​ಸುವ ಕೆಲ​ಸ ಮಾಡಿಲ್ಲ. ಕಾಂಗ್ರೆಸ್‌ ಹಿಂದಿನಿಂದಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳನ್ನು ವೋಟ್‌ ಬ್ಯಾಂಕ್‌ನ್ನಾಗಿ ನೋಡುತ್ತಾ ಬಂದಿವೆ. ಬರಿ ಮಾತಿನಲ್ಲಿಯೇ ಸಾಮಾಜಿಕ ನ್ಯಾಯವೆಂದು ಹೇಳುವ ಮೂಲಕ ಎಲ್ಲ ಸಮುದಾಯಗಳಿಗೆ ಮೋಸ ಮಾಡಿವೆ. ಆದರೆ, ಈಗ ಜನರನ್ನು ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ದೂರಿದರು. ಕಾಂಗ್ರೆಸ್‌ ತಾವು ಅಧಿಕಾರಕ್ಕೆ ಬಂದರೆ, ಒಳಮೀಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. 

ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ

ಆದರೆ, ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಕೈ ಹಾಕಿದರೆ ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನವರು ಅಧಿಕಾರ ಯಾರಿಗೂ ಶಾಶ್ವತವಾಗಿ ಉಳಿಯುವುದಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ದೊರಕಿದಾಗ ದೇಶದಲ್ಲಿ ಕೇವಲ 33 ಕೋಟಿ ಜನಸಂಖ್ಯೆ ಇತ್ತು. ಆಗ ಪರಿಶಿಷ್ಟಜಾತಿಯಲ್ಲಿ 6 ಜಾತಿಗಳು ಹಾಗೂ ಪರಿಶಿಷ್ಟಪಂಗಡದಲ್ಲಿ 6 ಜಾತಿಗಳು ಮಾತ್ರ ಇದ್ದವು. ಎಲ್ಲ ಜಾತಿಗಳನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಕಾಂಗ್ರೆಸ್‌ ಸೇರ್ಪಡೆ ಮಾಡುತ್ತಾ ಬಂದಿದೆ ಎಂದು ದೂರಿದರು. ಡಾ.ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ಜನಸಂಖ್ಯೆ ಹಾಗೂ ಜಾತಿಯ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬುವುದು ಇದೆ. ಕೆಲ ರಾಜ್ಯಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಶೇ.50ಕ್ಕೂ ಮೀಸಲಾತಿ ಕಲ್ಪಿಸಿದೆ. 

ಕಾಂಗ್ರೆಸ್‌ನವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರನ್ನು ದಿಕ್ಕು ತಪ್ಪಿಸುತ್ತಾ ಬರುತ್ತಿದೆ. ರಾಜ್ಯದಲ್ಲಿ ನಿಜವಾದ ಸಾಮಾಜಿಕ ನ್ಯಾಯವನ್ನು ಬಿಜೆಪಿ ಕಲ್ಪಿಸಿದೆ. ಪರಿಶಿಷ್ಟಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕಂಬ ಉದ್ದೇಶದಿಂದ ರಾಜ್ಯ ಬಿಜೆಪಿ ಸರ್ಕಾ​ರ ಒಳಮೀಸಲಾತಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕಾಂಗ್ರೆಸ್‌ ಕಾಲ ಮುಗಿದಿದೆ. ಇಷ್ಟುದಿನ ವೋಟ್‌ ಬ್ಯಾಂಕ್‌ಗೆ ತುತ್ತಾ​ಗಿದ್ದ ಸಮು​ದಾ​ಯ​ಗಳು ಚಿಂತ​ನೆ​ಯಲ್ಲಿ ಬಿದಿದ್ದು, ಇನ್ನು ಯಾರ ಪರವಾಗಿ ನಿಲ್ಲಬೇಕು ಎನ್ನುವ ತೀರ್ಮಾ​ನ​ವನ್ನು ಅವರೇ ಮಾಡ​ಲಿ​ದ್ದಾರೆ ಎಂದು ಹೇಳಿ​ದರು. 

ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ

ಕಾರ್ಯ​ಕ್ರ​ಮ​ದಲ್ಲಿ ಕೇಂದ್ರ ಸಚಿವ ಎ.ನಾ​ರಾ​ಯಣ ಸ್ವಾಮಿ, ಸಚಿವ ಗೋವಿಂದ ಕಾರ​ಜೋಳ, ಸಂಸದ ರಾಜಾ ಅಮ​ರೇ​ಶ್ವರ ನಾಯಕ, ಎಂಎಲ್ಸಿ ಎನ್‌.​ರವಿ ಕುಮಾರ, ಶಾಸಕ ಡಾ.ಶಿ​ವ​ರಾಜ ಪಾಟೀಲ್‌, ಮಾಜಿ ಶಾಸಕ ತಿಪ್ಪ​ರಾಜು ಹವ​ಲ್ದಾ​ರ್‌,​ಪ್ರ​ತಾ​ಪ​ಗೌಡ ಪಾಟೀಲ್‌ ಮಾತ​ನಾ​ಡಿ​ದರು. ಈ ಸಂದ​ರ್ಭ​ದಲ್ಲಿ ಪಕ್ಷದ ವಿವಿಧ ಮೋರ್ಚಾ​ಗಳ ಪ್ರಮು​ಖರು, ಕಾರ್ಯ​ಕ​ರ್ತರು, ವಿವಿಧ ಸಮಾ​ಜದ ಮುಖಂಡರು, ಸಾರ್ವ​ಜ​ನಿ​ಕರು ಹೆಚ್ಚಿನ ಸಂಖ್ಯೆ​ಯಲ್ಲಿ ಭಾಗ​ವ​ಹಿ​ಸಿ​ದ್ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Delhi Liquor Scam: ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ
Kejriwal Case: ಬಿಜೆಪಿಯ ಆಟ ನಡೆಯಲ್ಲ ಅಂತ ಕೇಜ್ರಿವಾಲ್ ಪ್ರೂವ್ ಮಾಡಿದ್ದಾರೆ: ಆದಿತ್ಯ ಠಾಕ್ರೆ ಮೆಚ್ಚುಗೆ