ಕಾಂಗ್ರೆಸ್‌- ಸುಳ್ಳು ಒಂದೇ ನಾಣ್ಯದ ಎರಡು ಮುಖ: ಸಿ.ಟಿ.ರವಿ ಟೀಕೆ

By Kannadaprabha NewsFirst Published Apr 30, 2023, 2:00 AM IST
Highlights

ದೇಶದ ಸದೃಢ ಬೆಳವಣಿಗೆಗೆ ಬಿಜೆಪಿ ಕಂಕಣಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಾಬ್‌ ಕಾ ಸಾಥ್‌, ಸಾಬ್‌ ಕಾ ವಿಕಾಸ್‌, ಮತ್ತು ಸಾಬ್‌ ಕಾ ವಿಶ್ವಾಸ್‌ ಮೂಲಕ ದೇಶವನ್ನು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

ಚಿಂತಾಮಣಿ (ಏ.30): ದೇಶದ ಸದೃಢ ಬೆಳವಣಿಗೆಗೆ ಬಿಜೆಪಿ ಕಂಕಣಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಾಬ್‌ ಕಾ ಸಾಥ್‌, ಸಾಬ್‌ ಕಾ ವಿಕಾಸ್‌, ಮತ್ತು ಸಾಬ್‌ ಕಾ ವಿಶ್ವಾಸ್‌ ಮೂಲಕ ದೇಶವನ್ನು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ತಾಲೂಕಿನ ಬೂರಗಮಾಕಲಹಳ್ಳಿಯ ಶ್ರೀಸೀತಾರಾಮ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೊರೋನಾ ಸಮಯದಲ್ಲಿ ವಿವಿಧ ದೇಶಗಳು ಹಣ ಪಡೆದು ವ್ಯಾಕಿನ್ಸ್‌ ನೀಡಿದರೆ, ಭಾರತದಲ್ಲಿ ಬಿಜೆಪಿ ಸರ್ಕಾರ ಉಚಿತವಾಗಿ ವ್ಯಾಕಿನ್ಸ್‌ ನೀಡಿತು. ಕಾಂಗ್ರೆಸ್‌ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೇಸ್‌ ಎಂದರೆ ಸುಳ್ಳು, ಸುಳ್ಳು ಎಂದರೆ ಕಾಂಗ್ರೇಸ್‌ ಎಂದು ಬಣ್ಣಿಸಿದರು.

ಉಚಿತ ಅಕ್ಕಿ ಕೇಂದ್ರದ ಕೊಡುಗೆ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾನು ಉಚಿತವಾಗಿ ಅಕ್ಕಿ ನೀಡುತ್ತೇನೆಂದು ಬೊಬ್ಬೆ ಹೊಡೆಯುತ್ತಿದ್ದು ಅದರಲ್ಲಿ 3 ರು.ಗಳು ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿದ್ದರೆ 37 ರು.ಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ರೈತರಿಗೆ ಕೃಷಿ ಸನ್ಮಾನ ಯೋಜನೆ, ಆಯುಷ್ಮಾನ್‌ ಕಾರ್ಡ್‌, ಜನ್‌ ದನ್‌ ಯೋಜನೆ ನೇರವಾಗಿ ಹಣಕಾಸು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಬರುವಂತೆ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

Latest Videos

ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್‌ ಮಾತನಾಡಿ, ಸರ್ವರ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳನ್ನು ಕೈಗೊಂಡು ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಶೌಚಾಲಯ ನಿರ್ಮಾಣ, ವಸತಿ ನಿರ್ಮಾಣ, ಉದ್ಯೋಗ ಸೃಷ್ಟಿ, ನದಿ ಜೋಡಣೆ, ಸಮರ್ಪಕ ರಸ್ತೆ, ಗ್ರಾಮೀಣ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಮೂಲಕ ರಸ್ತೆ ಸಂಪರ್ಕ, ಬೀದಿ ದೀಪಗಳು, ಜನ ಔಷಧಿ, ಶಿಕ್ಷಣ ಇತ್ಯಾದಿಗಳಿಗೆ ಹೆಚ್ಚಿನ ಅದ್ಯತೆ ನೀಡುವುದರ ಜೊತೆಗೆ ಸ್ಕಿಲ್‌ ಇಂಡಿಯಾದ ಮೂಲಕ ಕೈಗಾರಿಕೆಗಳು ಸ್ಥಳೀಯ ಪ್ರದೇಶದಲ್ಲಿ ಸ್ಥಾಪನೆಯಾಗುವಂತೆ ಮಾಡಿ ಉದ್ಯೋಗ ಸೃಷ್ಟಿಗೆ ಕಾರಣೀಭೂತರಾಗಿರುವ ಏಕೈಕ ಸರ್ಕಾರ ಬಿಜೆಪಿ ಸರ್ಕಾರವೆಂದರು.

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

ಈ ಸಂದರ್ಭದಲ್ಲಿ ಆಂದ್ರ ಪ್ರದೇಶದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣವರ್ಧನ್‌ ರೆಡ್ಡಿ, ನಿರ್ಮಲಾಕಿಶೋರ್‌, ಸತ್ಯನಾರಾಯಣ ಮಹೇಶ್‌, ಓಂ ಶಕ್ತಿ ಚಲಪತಿ, ವಾಣಿಕೃಷ್ಣಾರೆಡ್ಡಿ, ನಗರ ಮಂಡಲದ ಅಧ್ಯಕ್ಷ ಮಹೇಶ್‌ ಬೈ, ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವಾರೆಡ್ಡಿ, ನಾಮನಿರ್ದೇಶಿತ ಸದಸ್ಯ ದೇವರಾಜ್‌, ಪ್ರತಾಪ್‌, ನಾರಾಯಣರೆಡ್ಡಿ, ಭಾಗ್ಯಮ್ಮ, ಮಹಿಳಾ ಘಟಕದ ಪರಿಮಳ, ಪಂಕಜಾ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!