70 ವರ್ಷ ದಾಟಿರುವ ನನಗೇಕೆ ಲಸಿಕೆ ಎಂದ ಖರ್ಗೆಗೆ ಬಿಜೆಪಿ ಚುಚ್ಚುಮದ್ದು!

Published : Mar 01, 2021, 04:18 PM ISTUpdated : Mar 01, 2021, 04:50 PM IST
70 ವರ್ಷ ದಾಟಿರುವ ನನಗೇಕೆ ಲಸಿಕೆ ಎಂದ ಖರ್ಗೆಗೆ ಬಿಜೆಪಿ ಚುಚ್ಚುಮದ್ದು!

ಸಾರಾಂಶ

70 ವರ್ಷ ದಾಟಿರುವ ನನಗೇಕೆ ಕೋವಿಡ್ ಲಸಿಕೆ? ಯುವಕರಿಗೆ ಕೊಡಿ ಎಂದ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಸಖತ್ ಟಾಂಗ್ ಕೊಟ್ಟಿದೆ.

ಬೆಂಗಳೂರು, (ಮಾ.01):  ದೇಶದ 27 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ, ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ 2.0 ಇಂದಿನಿಂದ ( ಮಾ.1) ಆರಂಭವಾಗಿದೆ. 

 ದ್ವಿತೀಯ ಹಂತದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು. ಇನ್ನು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 70 ವರ್ಷ ದಾಟಿರುವ ನನಗೇಕೆ ಕೋವಿಡ್ ಲಸಿಕೆ? ಯುವಕರಿಗೆ ಕೊಡಿ ಎಂದಿದ್ದಾರೆ. 

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಹೌದು... ನನಗೇಕೆ ಕೊರೋನಾ ವೈರಸ್ ಲಸಿಕೆ..? ನನಗೆ ಈಗಾಗಲೇ 70 ವರ್ಷ ದಾಟಿದೆ. ಇನ್ನು 10 ರಿಂದ 15 ವರ್ಷ ಬದುಕಬಹುದು. ನನ್ನ ಬದಲು ಯುವಕರಿಗೆ ಲಸಿಕೆ ಕೊಡಿ, ಅವರ ದೀರ್ಘಾಯುಷ್ಯಕ್ಕೆ ನೆರವಾಗಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕೊಟ್ಟಿದ್ದರು.

ಖರ್ಗೆ ಅವರ ಈ ಹೇಳಿಕೆಗೆ ರಾಜ್ಯ ಬಿಜೆಪಿ ಟಾಂಗ್ ಕೊಟ್ಟಿದ್ದು, ಲಸಿಕೆ ಪಡೆದು ದೇಶದ ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಬದಲು ಹೀಗೆ ಜಾರಿಕೊಳ್ಳುವುದು ಶೋಭೆ ತರುವುದಿಲ್ಲ ಎಂದು ಟ್ವೀಟ್ ಮೂಲಕ ತಿವಿದಿದೆ.

2019 ರ ಲೋಕಸಭೆಗೆ ಸ್ಪರ್ಧಿಸುವಾಗ, ರಾಜ್ಯ ಸಭಾ ವಿಪಕ್ಷ ನಾಯಕನ ಸ್ಥಾನ ಪಡೆದುಕೊಳ್ಳುವಾಗ ನೆನಪಾಗದ ವಯಸ್ಸು ಈಗ ನೆನಪಾಗಿದ್ದು ವಿಪರ್ಯಾಸವೇ ಸರಿ! ಇಲ್ಲೂ ನಿಮ್ಮ ರಾಜಕೀಯ ಬುದ್ಧಿ ತೋರ್ಪಡಿಸುವ ಅಗತ್ಯವೇನಿತ್ತು? ಪ್ರಶ್ನಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!