
ಕಲಬುರಗಿ(ಮಾ.17): ಕಲಬುರಗಿಯಿಂದಲೇ ಲೋಕ ಕದನದ ಪ್ರಚಾರ ಮಾಡಿ 2019ರಲ್ಲಿ 26 ಸ್ಥಾನ ಗೆದ್ದಿರುವ ಬಿಜೆಪಿ ಈ ಬಾರಿಯೂ ಮತ್ತೆ ಕಲಬುರಗಿಯಿಂದಲೇ ಪ್ರಚಾರ ಶುರು ಮಾಡಿದ್ದು ಎಲ್ಲಾ 28 ಸ್ಥಾನ ಗೆಲ್ಲಲಿದೆ. ಬಿಜೆಪಿಗೆ, ಕಮಲಕ್ಕೆ ಕಲಬುರಗಿ ತುಂಬಾ ಲಕ್ಕಿ ಇದೆ. ಕಲಬುರಗಿಯ ವಾಸ್ತು ಬಹಳ ಚೆನ್ನಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು ಎಂಬ ಸಂಕಲ್ಪವಿದೆ, ನನಗೆ ಗೆಲ್ಲುವ ಪೂರ್ತಿ ವಿಶ್ವಾಸವಿದೆ. ಈ ಪ್ರಚಾರದ ಶುಭ ಮಹೂರ್ತ ಬಹಳ ಚೆನ್ನಾಗಿದೆ. ನಾವು ಅತ್ಯಂತ ಐತಿಹಾಸಿಕ ದಾಖಲೆಯ ವಿಜಯವನ್ನು ಸಾಧಿಸಲಿದ್ದೇವೆ ಎಂದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ: ಆರ್ ಅಶೋಕ್ ವಾಗ್ದಾಳಿ
28ಕ್ಕೆ 28 ಸ್ಥಾನಗಳನ್ನು ಇತ್ತೀಚಿನ ದಶಕಗಳಲ್ಲಿ ಗೆದ್ದಿಲ್ಲ. ಎಲ್ಲಾ ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಲಿದ್ದೇವೆ. ಔಟ್ ಆಫ್ ಔಟ್ ನ್ನು ಮೋದಿ ಅವ್ರಗೆ ತೀರ್ಮಾನ ಮಾಡಿದ್ದೇವೆ ಎಂದು ಜೋಶಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.