
ಬಳ್ಳಾರಿ(ಜು.30): ಶ್ರೀರಾಮುಲು ಉಪಮುಖ್ಯಮಂತ್ರಿ ಕನಸಿಗೆ ರಮೇಶ್ ಜಾರಕಿಹೊಳಿ ಅಡ್ಡಗಾಲು ಹಾಕಿದ್ರಾ? ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಎಸ್ಟಿ ಕಮ್ಯುನಿಟಿಯ ಪ್ರಬಲ ನಾಯಕರಾಗಿರುವ ರಾಮುಲು ರಮೇಶ್ ನಡುವೆ ಡಿಸಿಎಂ ಸ್ಥಾನಕ್ಕಾಗಿ ಬಿಗ್ ಫೈಟ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಮತ್ತೆ ರಾಮುಲುಗೆ ಡಿಸಿಎಂ ಮಿಸ್ ಆಗುವ ಸಾಧ್ಯತೆ ಇದೆ. ರಾಮುಲುಗೆ ಡಿಸಿಎಂ ಕೊಟ್ಟರೆ ರಮೇಶ್ ಮುನಿಸು ಮಾಡಿಕೊಳ್ಳತ್ತಾರಂತೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬರೋದಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಈಗ ರಾಮುಲುಗೆ ಡಿಸಿಎಂ ಆಗೋದಕ್ಕೆ ಸಾಹುಕಾರ್ ವಿರೋಧ ಮಾಡ್ತಿದ್ದಾರೆ ಅಂತ ಶ್ರೀರಾಮುಲು ಬೆಂಬಲಿಗರು ಆರೋಪಿಸಿದ್ದಾರೆ.
ಬೊಮ್ಮಾಯಿ ಜತೆ ಮೂವರಿಗೆ ಬಂಪರ್: ಶ್ರೀರಾಮುಲು ಕನಸು ನನಸು!
ಶೀಘ್ರದಲ್ಲೇ ಸಿಡಿ ಪ್ರಕರಣ ಮುಗಿಯುವ ನಿರೀಕ್ಷೆಯಲ್ಲಿರೋ ರಮೇಶ್ ಜಾರಕಿಹೊಳಿ ಒಮ್ಮೆ ರಾಮುಲುಗೆ ಡಿಸಿಎಂ ಕೊಟ್ರೇ ಎಸ್ಪಿ ಸಮುದಾಯದಲ್ಲಿ ಪ್ರಭಲರಾಗುತ್ತಾರೆ. ನಂತರ ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ಮಿಸ್ ಆಗೋ ಸಾಧ್ಯತೆ ಇದೆ. ಒಂದೇ ಕಮ್ಯೂನಿಟಿಯ ಇಬ್ಬರು ನಾಯಕರು ಮುನಿಸಿಕೊಂಡ್ರೆ ಕಷ್ಟ. ಹೀಗಾಗಿ ಬಿಜೆಪಿ ಕೂಡ ಇದೀಗ ಅಂತಾ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಇದೇ ಸನ್ನಿವೇಶ ಎದುರಾದಾಗ ಬಿಜೆಪಿ ಇಬ್ಬರನ್ನೂ ಸಚಿರನ್ನಾಗಿ ಮಾಡಿ, ಡಿಸಿಎಂ ನೀಡಿರಲಿಲ್ಲ ಹೈ ಕಮ್ಯಾಂಡ್. ಆದರೆ ಈ ಬಾರಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.