ವರ್ಗಾ​ವ​ಣೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಂಸದ ಡಿ.ಕೆ.​ಸು​ರೇಶ್‌

Published : Aug 06, 2023, 06:09 PM IST
ವರ್ಗಾ​ವ​ಣೆಗೂ ನನಗೂ ಯಾವುದೇ ಸಂಬಂಧ ಇಲ್ಲ: ಸಂಸದ ಡಿ.ಕೆ.​ಸು​ರೇಶ್‌

ಸಾರಾಂಶ

ಪೊಲೀಸ್‌ ಇಲಾ​ಖೆ​ಯ​ಲ್ಲಿನ ವರ್ಗಾ​ವ​ಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ಎಲ್ಲಾ ಕಡೆ ನನ್ನ ಹೆಸರು ಕೇಳಿ ಬರು​ತ್ತಿದೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಕ್ರಿಯೆ ನೀಡಿ​ದರು. 

ರಾಮ​ನ​ಗ​ರ (ಆ.06): ಪೊಲೀಸ್‌ ಇಲಾ​ಖೆ​ಯ​ಲ್ಲಿನ ವರ್ಗಾ​ವ​ಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ಎಲ್ಲಾ ಕಡೆ ನನ್ನ ಹೆಸರು ಕೇಳಿ ಬರು​ತ್ತಿದೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಪ್ರತಿ​ಕ್ರಿಯೆ ನೀಡಿ​ದರು. ಪೊಲೀ​ಸರ ವರ್ಗಾ​ವ​ಣೆ​ಯಲ್ಲಿ ಸಂಸದ ಸುರೇಶ್‌ ಹಸ್ತ​ಕ್ಷೇಪ ಮಾಡು​ತ್ತಿ​ದ್ದಾ​ರೆಂಬ ಆರೋ​ಪ ಕುರಿತು ಸುದ್ದಿ​ಗಾ​ರರು ಕೇಳಿದ ಪ್ರಶ್ನೆಗೆ, ನಾನು ಒಬ್ಬ ಸಂಸದ. ಆಡ​ಳಿತ ವ್ಯವ​ಸ್ಥೆಯಲ್ಲಿ ಮಧ್ಯೆ ಹೋಗೋಕೆ ನಾನೇನು ಸಚಿವ ಅಲ್ಲ. ವರ್ಗಾ​ವ​ಣೆಗೂ ನನಗೂ ಯಾವು​ದೇ​ ಸಂಬಂಧ​ವಿಲ್ಲ. 

ಕಾಂಗ್ರೆಸ್‌ ಸರ್ಕಾರ ಉತ್ತಮ ಆಡ​ಳಿತ ಕೊಡ​ಲೆಂದು ನಾನು ಬೆಂಬಲ ಕೊಟ್ಟಿ​ದ್ದೇನೆ. ಪಕ್ಷ​ದಲ್ಲಿ ಬೇರೆ ಬೇರೆ ವಿಚಾ​ರ​ಗ​ಳಿಗೆ ಸಲಹೆ ಕೊಟ್ಟಿ​ದ್ದೇನೆ. ಸರ್ಕಾ​ರದ ಯಾವುದೇ ವಿಚಾ​ರ​ದ​ಲ್ಲಿಯೂ ನಾನು ಮಧ್ಯ ಪ್ರವೇಶ ಮಾಡು​ವು​ದಿಲ್ಲ. ಆಡ​ಳಿತ ವ್ಯವ​ಸ್ಥೆ​ಯಲ್ಲಿ ಮಧ್ಯೆ ಹೋಗಲು ನಾನೇನು ಸಚಿ​ವ​ನಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಅವರು ಮಾಜಿ ಮುಖ್ಯಮಂತ್ರಿ ಇದ್ದಾರೆ. ಅವರನ್ನೇ ಅದರ ಬಗ್ಗೆ ಕೇಳ​ಬೇಕು. ವರ್ಗಾವಣೆ ರೇಚ್‌ ಕಾರ್ಡ್‌ ಬಗ್ಗೆ ಅವರ ಸರ್ಕಾರದಲ್ಲಿ ಏನಿತ್ತು ನೀವೆ ಬರೆದಿದ್ದರಲ್ಲ ಎಂದು ಹೇಳಿ​ದ​ರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶರತ್‌ ಬಚ್ಚೇಗೌಡ

ಶಕ್ತಿ ಯೋಜ​ನೆ​ಯಿಂದ ಸರ್ಕಾ​ರಕ್ಕೆ 2 ಸಾವಿರ ಕೋಟಿ ಆದಾಯ: ​ಶಕ್ತಿ ಯೋಜನೆಯಿಂದ ರಾಜ್ಯ​ಸ​ರ್ಕಾ​ರಕ್ಕೆ 250 ಕೋಟಿ ರು.ಲ್ ಬಂದಿದೆ. ಆದರೆ, ಈ ಯೋಜನೆ ಜಾರಿಯಾದ ಬಳಿಕ ಸರ್ಕಾ​ರಕ್ಕೆ 2 ಸಾವಿರ ಕೋಟಿ ಆದಾಯ ಲಭಿಸಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿ​ದರು. ನಗರದಲ್ಲಿ ಗೃಹ ಜ್ಯೋತಿ ಯೋಜನೆ ಉದ್ಘಾ​ಟನಾ ಸಮಾ​ರಂಭ​ದಲ್ಲಿ ಮಾತ​ನಾ​ಡಿದ ಅವರು, ದೇವಾಲಯದ ಆದಾಯ ಹಾಗೂ ವಿವಿಧ ಚಟುವಟಿಕೆಗಳಿಂದಾಗಿ ರಾಜ್ಯ ಸರ್ಕಾರಕ್ಕೆ 2 ಸಾವಿರ ಕೋಟಿ ಆದಾಯ ಬಂದಿದೆ. 

ಆರ್ಥಿಕ ಸುಧಾರಣೆಗಾಗಿ ಗ್ಯಾರಂಟಿ ಜಾರಿಗೆ ತರಲಾಯಿತೆ ಹೊರತು ಚುನಾವಣೆ ಗೆಲ್ಲಲು ಅಲ್ಲ. ಬಡವರ ಬಳಿ ಹಣ ಇದ್ದರೆ ಖರ್ಚು ಆಗಲಿದೆ. ಅದೇ ಶ್ರೀಮಂತರು ಖರ್ಚು ಮಾಡುವುದಿಲ್ಲ. ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದ ಟ್ರಿಪ್‌ ಕಡಿಮೆ ಮಾಡಿಲ್ಲ. ಈ ಹಿಂದೆ ಇದ್ದಷ್ಟೆಬಸ್ಸು​ಗಳು ಸಂಚಾರ ಮಾಡುತ್ತಿವೆ. ಚಾಲ​ಕರು, ನಿರ್ವಾ​ಹ​ಕರ ಸಂಖ್ಯೆಯೂ ಅಷ್ಟೇ ಇದೆ. ಆದರೆ, ಜನರ ಪ್ರಯಾಣ ಮಾತ್ರ ಹೆಚ್ಚಾಗಿದೆ. ಯಾರು ಬಸ್ಸಿನಲ್ಲಿ ಸಂಚಾರ ಮಾಡಲು ಭಯ ಪಡುತ್ತಿದ್ದರೊ ಅಂಥವರು ಇಂದು ಧೈರ್ಯದಿಂದ ಪ್ರಯಾಣ ಮಾಡಿ ಖುಷಿ ಪಡುತ್ತಿದ್ದಾರೆ ಎಂದು ಹೇಳಿದರು.

ಸುಳ್ಳು ಆರೋಪಗಳಿಂದ ಕಾಲ ಕಳೆಯುತ್ತಿರುವ ಎಚ್ಡಿಕೆ: ಸಚಿ​ವ ರಾಮ​ಲಿಂಗಾ​ರೆಡ್ಡಿ

ಗೃಹಜ್ಯೋತಿ ಯೋಜನೆ ರೂಪಿ​ಸು​ವಾಗ ಪಕ್ಷದ ಮುಖಂಡರು 300 ಯೂನಿಚ್‌ ಉಚಿತ ನೀಡುವಂತೆ ಸಲಹೆ ನೀಡಿದ್ದರು. ಆದರೆ, ಯೋಜನೆ ಜಾರಿ ಸಂಬಂಧ ರಾಮನಗರ ಜಿಲ್ಲೆಯ ವಿದ್ಯುತ್‌ ಬಳಕೆ ಮಾಹಿತಿ ಪಡೆದು ಸರಾಸರಿ ಅಂದಾಜು ಲೆಕ್ಕ ಮಾಡಿ 200 ಯೂನಿಚ್‌ ಉಚಿತ ನೀಡಲಾಯಿತು. ಇದು ಶೇ.95ರಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಇನ್ನು 86 ಸಾವಿರ ಕುಟುಂಬ ಗೃಹ ಜ್ಯೋತಿ ಯೋಜನೆಗೆ ನೋಂದಣಿಯಾಗಬೇಕಿದ್ದು, ಒಂದು ತಿಂಗಳಲ್ಲಿ ಇದು ಪೂರ್ಣವಾಗಲಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಚುನಾವಣಾ ಪೂರ್ವ ನೀಡಿದ್ದ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ​ಸು​ರೇಶ್‌ ತಿಳಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌