ಹನಿಟ್ರ್ಯಾಪ್, ಫೋನ್ ಟ್ಯಾಪ್ ಎಲ್ಲವೂ ಅಧಿಕಾರ ಉಳಿಸಿಕೊಳ್ಳುವ ಕುತಂತ್ರ: ಶಾಸಕ ಕೃಷ್ಣನಾಯ್ಕ!

Published : Mar 25, 2025, 07:40 PM ISTUpdated : Mar 25, 2025, 08:04 PM IST
ಹನಿಟ್ರ್ಯಾಪ್, ಫೋನ್ ಟ್ಯಾಪ್ ಎಲ್ಲವೂ ಅಧಿಕಾರ ಉಳಿಸಿಕೊಳ್ಳುವ ಕುತಂತ್ರ: ಶಾಸಕ ಕೃಷ್ಣನಾಯ್ಕ!

ಸಾರಾಂಶ

ಹಡಗಲಿ ಶಾಸಕ ಕೃಷ್ಣನಾಯ್ಕ, ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಫೋನ್ ಟ್ಯಾಪಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದೆ, ಆಡಳಿತದಲ್ಲಿ ವಿಫಲವಾಗಿದೆ. ಬಡವರ ಪರ ಚರ್ಚೆ ನಡೆಸುವ ಬದಲು, ಬೇಡದ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಶಾಸಕರಿಗೆ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಅವರು ವಿಷಾದಿಸಿದರು.

ಬಳ್ಳಾರಿ/ವಿಜಯನಗರ (ಮಾ.25): ಸರ್ಕಾರದಲ್ಲಿ ಅವರವರ ಅಧಿಕಾರ ಉಳಿಸಿಕೊಳ್ಳಲು ಪೋನ್ ಟ್ಯಾಪಿಂಗ್ ಹಾಗೂ ಹನಿಟ್ರ್ಯಾಪ್ ವಿಚಾರವನ್ನು ಮುಂದೆ ತರುತ್ತಿದ್ದಾರೆ ಎಂದು ಹಡಗಲಿ ಶಾಸಕ ಕೃಷ್ಣನಾಯ್ಕ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೂ- ಯಾರಿಗೋ ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಹೀಗಾಗಿ ಸದನದಲ್ಲಿ ಏನೆಲ್ಲಾ ಮಾಡಬಾರದೋ ಅದನ್ನು ಚರ್ಚೆ ಸಮಯ ಕಳೆದಿದ್ದಾರೆ. ‌ಯಾರು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುತ್ತಾರೋ ಅವರನ್ನು ಹೊರ ಹಾಕೋ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಸ್ವಾರ್ಥ ನಿರ್ಧಾರದಿಂದಾಗಿ ಕಾಂಗ್ರೆಸ್ ಸರ್ಕಾರ 18 ಶಾಸಕರ ಅಮಾನತ್ತು ಮಾಡಿದೆ. ಈ ಹಿಂದೆ ಸಭಾಪತಿಗಳನ್ನು  ಸ್ಥಾನದಿಂದ ಕೆಳಗೆಳೆದು ಹಾಕಿದ್ದರು. ಅಗ ಯಾಕೆ ಎಲ್ಲರೂ ಸೈಲೆಂಟ್ ಆಗಿದ್ದರು. ಆದರೆ, ಈಗ ಸ್ಪೀಕರ್ ಪೀಠದ ಬಳಿಗೆ ಹೋಗಿದ್ದಕ್ಕೆ ಅಮಾನತ್ತು ಮಾಡಿರುವುದಲ್ಲಿ ಯಾವ ನ್ಯಾಯ ಎಂದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಿಂಗಟಾಲೂರ ಯೋಜನೆಯ ಹರಿಕಾರ!

ಅಲ್ಲದೇ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ರಾಜ್ಯದ ಬಡಜನರ ಪರ ಚರ್ಚೆ ಮಾಡಬೇಕಾಗಿತ್ತು.  ಆದರ ಚರ್ಚೆಯಾಗಬಾರದ ವಿಚಾರಗಳೆಲ್ಲಯೂ ಅಧಿವೇಶನದಲ್ಲಿ ಚರ್ಚೆಯಾಗಿದೆ. ಶಾಸಕರಿಗೆ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೆ ಹೆಚ್ಚಿಗೆ ಅವಕಾಶ ಸಿಗಲಿಲ್ಲ  ಎಂದು ಬೇಸರ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!