ಎಚ್‌.ಡಿ.ಕುಮಾರಸ್ವಾಮಿ‘ಬ್ರಾಹ್ಮಣ ಸಿಎಂ ಬಾಂಬ್‌’ ಹಿಂದಿದೆ ಲೆಕ್ಕಾಚಾರ!

Published : Feb 10, 2023, 10:16 AM IST
ಎಚ್‌.ಡಿ.ಕುಮಾರಸ್ವಾಮಿ‘ಬ್ರಾಹ್ಮಣ ಸಿಎಂ ಬಾಂಬ್‌’ ಹಿಂದಿದೆ ಲೆಕ್ಕಾಚಾರ!

ಸಾರಾಂಶ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಜಾತಿ ಮೂಲ ಕೆದಕಿ ಏಕಾಏಕಿ ವಾಗ್ದಾಳಿ ಆರಂಭಿಸಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.

ಬೆಂಗಳೂರು (ಫೆ.10): ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಜಾತಿ ಮೂಲ ಕೆದಕಿ ಏಕಾಏಕಿ ವಾಗ್ದಾಳಿ ಆರಂಭಿಸಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.

ಕುಮಾರಸ್ವಾಮಿ ಯಾವುದೇ ಪ್ರಬಲ ಕಾರಣಗಳಿಲ್ಲದೆ ಕೇವಲ ಪ್ರಹ್ಲಾದ್‌ ಜೋಶಿ ಅವರು ತಮ್ಮ ಕುಟುಂಬವನ್ನು ಉದಾಹರಿಸಿ ಪಕ್ಷದ ಪಂಚತಂತ್ರ ಯಾತ್ರೆಯನ್ನು ನವಗ್ರಹ ಯಾತ್ರೆ ಎಂಬ ಟೀಕೆ ಮಾಡಿದರು ಎಂಬ ಏಕೈಕ ಕಾರಣಕ್ಕೆ ಈ ಮಟ್ಟದ ವಾಗ್ದಾಳಿ ನಡೆಸುತ್ತಿರಲಿಕ್ಕಿಲ್ಲ. ಇದರ ಹಿಂದೆ ಅವರದೇ ಆದ ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಮಾತು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

1- ತಮ್ಮ ಮೊದಲ ದಿನದ ಹೇಳಿಕೆಯಲ್ಲೇ ಕುಮಾರಸ್ವಾಮಿ ಅವರು ಸಂಘ ಪರಿವಾರ ಮತ್ತು ಬಿಜೆಪಿ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಹ್ಲಾದ್‌ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆಸಿದೆ. ಈ ಬಗ್ಗೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ-ದಲಿತ ವರ್ಗದವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೇ ಇದೊಂದು ರಾಜಕೀಯ ತಂತ್ರ ಎಂಬುದು ಸ್ಪಷ್ಟವಾಗಿತ್ತು. ಅಂದರೆ, ಬ್ರಾಹ್ಮಣೇತರ ಸಮುದಾಯಗಳ ಮತದಾರರನ್ನು ಬಿಜೆಪಿಯಿಂದ ಚದುರಿಸಬೇಕು ಎಂಬ ಉದ್ದೇಶ ಇರಬಹುದು.

2- ವಿಶೇಷವಾಗಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಅವರ ಬಗ್ಗೆ ಸಹಾನುಭೂತಿ ತೋರಿಸಿದ್ದಲ್ಲದೆ ಯಡಿಯೂರಪ್ಪ ಅವರ ಸರ್ಕಾರವನ್ನು ಉರುಳಿಸಿದ್ದು ಬ್ರಾಹ್ಮಣರು ಎನ್ನುವ ಮೂಲಕ ಬಿಜೆಪಿಗೆ ಗಟ್ಟಿಯಾಗಿ ನಿಂತಿರುವ ಲಿಂಗಾಯತ ಮತದಾರರ ಮನಸ್ಸು ಕದಲಿಸುವ ಪ್ರಯತ್ನ ಮಾಡುತ್ತಿರಬಹುದು.

ನಾನೆಲ್ಲೂ ರಾಜ್ಯದ ಬ್ರಾಹ್ಮಣ ಜಾತಿ ನಿಂದಿಸಿಲ್ಲ: ಎಚ್‌.ಡಿ.ಕುಮಾರಸ್ವಾಮಿ

3-ಕುಮಾರಸ್ವಾಮಿ ಅವರ ಈ ಮಟ್ಟದ ಆಕ್ರೋಶ ಭರಿತ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ನವಗ್ರಹ ಯಾತ್ರೆ ಎಂಬ ಹೇಳಿಕೆ ಕೇವಲ ನೆಪವಾಗಿರಬಹುದು. ಆಡಳಿತಾರೂಢ ಬಿಜೆಪಿಯು ಇತ್ತೀಚೆಗೆ ಹಳೆ ಮೈಸೂರು ಭಾಗದಲ್ಲಿ ತನ್ನ ಸಂಘಟನೆ ಬಲಗೊಳಿಸುವುದಕ್ಕೆ ಮುಂದಾದ ಬೆನ್ನಲ್ಲೇ ಜೆಡಿಎಸ್‌ ಪಾಳೆಯದಲ್ಲಿ ಆತಂಕ ಕಾಣಿಸಿಕೊಂಡಿತು. ಜೆಡಿಎಸ್‌ನ ಪ್ರಾಬಲ್ಯ ಇರುವುದೇ ಹಳೆ ಮೈಸೂರು ಭಾಗದಲ್ಲಿ. ಅಲ್ಲಿಯೇ ಬಿಜೆಪಿ ಬೇರು ಬಿಡಲು ಆರಂಭಿಸಿದರೆ ಅದರ ನೇರ ಹಾಗೂ ಮೊದಲ ಪರಿಣಾಮ ಆಗುವುದೇ ಜೆಡಿಎಸ್‌ ಮೇಲೆ. ಹೀಗಾಗಿ, ಕುಮಾರಸ್ವಾಮಿ ಜೋಶಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ಆರಂಭಿಸಿರಬಹುದು. ಇದರಿಂದ ಕನಿಷ್ಠ ಬ್ರಾಹ್ಮಣೇತರ ವರ್ಗದ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮತದಾರರಾದರೂ ಬಿಜೆಪಿ ಕಡೆ ಹೋಗದಿರಲಿ ಎಂಬ ತಂತ್ರ ಇರಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ