ಆಮ್‌ ಆದ್ಮಿ ಪಕ್ಷದಿಂದ ಮೊದಲ ಪಟ್ಟಿ ಬಿಡುಗಡೆ: 80 ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಇಲ್ಲಿದೆ

Published : Mar 20, 2023, 01:49 PM IST
ಆಮ್‌ ಆದ್ಮಿ ಪಕ್ಷದಿಂದ ಮೊದಲ ಪಟ್ಟಿ ಬಿಡುಗಡೆ: 80 ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಇಲ್ಲಿದೆ

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಸ್ಪರ್ಧೆ ಮಾಡಲು 80 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕುರಿತ ಮೊದಲ ಇಂದು ಬಿಡುಗಡೆ ಮಾಡಲಾಯಿತು.

ಬೆಂಗಳೂರು (ಮಾ.20):  ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಸ್ಪರ್ಧೆ ಮಾಡಲು 80 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕುರಿತ ಮೊದಲ ಇಂದು ಬಿಡುಗಡೆ ಮಾಡಲಾಯಿತು.

ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಕೆಲವೆಡೆ ಘಟಾನುಘಟಿ ನಾಯಕರನ್ನು ಹಾಗೂ ಜನರಿಗೆ ಚಿರಪರಿಚಿತ ಮುಖಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಒಟ್ಟು 80 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‌ಗಳ ಮತಗಳನ್ನು ಕಸಿಯಲು ಸಿದ್ಧವಾಗಿದೆ. ಇದರಲ್ಲಿ ಪ್ರಮುಖವಾಗಿ ಎಎಪಿ ಮೊದಲ ಪಟ್ಟಿಯಲ್ಲಿ 7 ರೈತರು, 7 ಮಹಿಳೆಯರು ಹಾಗೂ 5 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್‌ ನಿಡಲಾಗಿದೆ. 

ಶೂನ್ಯ ಕಮಿಷನ್‌ ಸರ್ಕಾರ ಬೇಕೆಂದರೆ ಕರ್ನಾಟಕದಲ್ಲಿ ಆಪ್‌ ಗೆಲ್ಲಿಸಿ: ಅರವಿಂದ್ ಕೇಜ್ರಿವಾಲ್ 

ತುರುವೇಕೆರೆಯಿಂದ ನಟ‌ ಟೆನ್ನಿಸ್ ಕೃಷ್ಣ, ಚಿಕ್ಕಪೇಟೆಯಿಂದ ಬ್ರಿಜೇಶ್ ಕಾಳಪ್ಪ, ಸಿವಿ ರಾಮನ್ ನಗರದಿಂದ ಮೋಹನ್ ದಾಸರಿ, ಶಾಂತಿನಗರದಿಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ.‌ ಮಥಾಯಿ, ಮಹಾಲಕ್ಷ್ಮಿ ಲೇಔಟ್‌ನಿಂದ ಶಾಂತಲಾ ದಾಮ್ಲೆ ಹಾಗೂ ಚನ್ನಪಟ್ಟಣದಿಂದ ಡಿಕೆ ಶಿವಕುಮಾರ್ ಅವರ ಸಂಬಂಧಿ ಶರತ್ ಚಂದ್ರ ಸ್ಪರ್ಧೆ ಮಾಡಲಿದ್ದಾರೆ.

  1. 20-ತೇರದಾಳ - ಅರ್ಜುನ ಹಲಗಿಗೌಡರ
  2. 23-ಬಾದಾಮಿ - ಶಿವರಾಯಪ್ಪ ಜೋಗಿನ
  3. 24-ಬಾಗಲಕೋಟೆ - ರಮೇಶ ಬದ್ನೂರ
  4. 3-ಅಥಣಿ - ಸಂಪತ್ ಕುಮಾರ ಶೆಟ್ಟಿ
  5. 16-ಬೈಲಹೊಂಗಲ - ಬಿ. ಎಂ. ಚಿಕ್ಕನಗೌಡರ
  6. 18-ರಾಮದುರ್ಗ - ಮಲ್ಲಿಕಜಾನ್‌ ನದಾಫ
  7. 72-ಹುಬ್ಬಳ್ಳಿ-ದಾರವಾಡ ಪೂರ್ವ - ಬಸವರಾಜ ಎಸ್‌ ತೇರದಾಳ
  8. 73-ಹುಬ್ಬಳ್ಳಿ-ದಾರವಾಡ ಕೇಂದ್ರ - ವಿಕಾಸ ಸೊಪ್ಪಿನ
  9. 75-ಕಲಘಟಗಿ - ಮಂಜುನಾಥ ಜಕ್ಕಣ್ಣವರ
  10. 67-ರೋಣ - ಆನೇಕಲ್‌ ದೊಡ್ಡಯ್ಯ
  11. 85-ಬ್ಯಾಡಗಿ - ಎಂ. ಎನ್.‌ ನಾಯಕ
  12. 87-ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ
  13. 47-ಬಸವಕಲ್ಯಾಣ - ದೀಪಕ ಮಲಗಾರ
  14. 48-ಹುಮನಾಬಾದ - ಬ್ಯಾಂಕ್‌ ರೆಡ್ಡಿ
  15. 49-ಬೀದರ ದಕ್ಷಿಣ - ನಸೀಮುದ್ದಿನ್‌ ಪಟೇಲ
  16. 51-ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ
  17. 52-ಔರಾದ - ಬಾಬುರಾವ ಅಡ್ಕೆ
  18. 43-ಗುಲ್ಬರ್ಗ ಗ್ರಾಮೀಣ - ಡಾ. ರಾಘವೇಂದ್ರ ಚಿಂಚನಸೂರ
  19. 44-ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ
  20. 45-ಗುಲ್ಬರ್ಗ ಉತ್ತರ - ಸಯ್ಯದ್‌ ಸಜ್ಜಾದ್‌ ಅಲಿ
  21. 32-ಇಂಡಿ - ಗೋಪಾಲ ಆರ್‌ ಪಾಟೀಲ
  22. 62-ಗಂಗಾವತಿ - ಶರಣಪ್ಪ ಸಜ್ಜಿಹೊಲ
  23. 53-ರಾಯಚೂರು - ಗ್ರಾಮೀಣ    ಡಾ. ಸುಭಾಶಚಂದ್ರ ಸಾಂಭಾಜಿ
  24. 54-ರಾಯಚೂರು - ಡಿ. ವೀರೇಶ ಕುಮಾರ ಯಾದವ
  25. 55-ಮಾನ್ವಿ - ರಾಜಾ ಶಾಮಸುಂದರ ನಾಯಕ
  26. 57-ಲಿಂಗಸುಗೂರು - ಶಿವಪುತ್ರ ಗಾಣದಾಳ
  27. 58-ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ
  28. 90-ವಿಜಯನಗರ - ಡಿ. ಶಂಕರದಾಸ
  29. 96-ಕೂಡ್ಲಿಗಿ - ಶ್ರೀನಿವಾಸ ಎನ್
  30. 104-ಹರಪನಹಳ್ಳಿ - ನಾಗರಾಜ ಎಚ್‌
  31. 99-ಚಿತ್ರಗುರ್ಗ - ಜಗದೀಶ ಬಿ. ಇ
  32. 103-ಜಗಳೂರು - ಗೋವಿಂದರಾಜು
  33. 105-ಹರಿಹರ - ಗಣೇಶಪ್ಪ ದುರ್ಗದ
  34. 106-ದಾವಣಗೆರೆ ಉತ್ತರ - ಶ್ರೀಧರ ಪಾಟೀಲ
  35. 130-ತುರುವೇಕೆರೆ - ಟೆನ್ನಿಸ್‌ ಕೃಷ್ಣ
  36. 131-ಕುಣಿಗಲ್‌ - ಜಯರಾಮಯ್ಯ
  37. 135-ಗುಬ್ಬಿ - ಪ್ರಭುಸ್ವಾಮಿ
  38. 136-ಸಿರಾ - ಶಶಿಕುಮಾರ್
  39. 137-ಪಾವಗಡ - ರಾಮಾಂಜನಪ್ಪ ಎನ್
  40. 123-ಶೃಂಗೇರಿ - ರಾಜನ್‌ ಗೌಡ ಎಚ್.ಎಸ್‌
  41. 196-ಹಾಸನ - ಅಗಿಲೆ ಯೋಗೀಶ್‌
  42. 112-ಭದ್ರಾವತಿ - ಆನಂದ
  43. 113-ಶಿವಮೊಗ್ಗ - ನೇತ್ರಾವತಿ ಟಿ
  44. 117-ಸಾಗರ - ಕೆ. ದಿವಾಕರ
  45. 201-ಮೂಡಬಿದ್ರಿ - ವಿಜಯನಾಥ ವಿಠಲ ಶೆಟ್ಟಿ
  46. 203-ಮಂಗಳೂರು ನಗರ ದಕ್ಷಿಣ - ಸಂತೋಷ್‌ ಕಾಮತ
  47. 207-ಸುಳ್ಯ - ಸುಮನಾ
  48. 122-ಕಾರ್ಕಳ - ಡ್ಯಾನಿಯಲ್
  49. 80-ಶಿರಸಿ - ಹಿತೇಂದ್ರ ನಾಯಕ
  50. 186-ಮಳವಳ್ಳಿ - ಬಿಸಿ ಮಹದೇವಸ್ವಾಮಿ
  51. 189-ಮಂಡ್ಯ - ಬೊಮ್ಮಯ್ಯ
  52. 210-ಪಿರಿಯಾಪಟ್ಟಣ - ರಾಜಶೇಖರ್‌ ದೊಡ್ಡಣ್ಣ
  53. 217-ಚಾಮರಾಜ - ಮಾಲವಿಕಾ ಗುಬ್ಬಿವಾಣಿ
  54. 218-ನರಹಿಂಹರಾಜ - ಧರ್ಮಶ್ರೀ
  55. 220-ಟಿ. ನರಸಿಪುರ - ಸಿದ್ದರಾಜು
  56. 182-ಮಾಗಡಿ - ರವಿಕಿರಣ್‌ ಎಂ.ಎನ್
  57. 183-ರಾಮನಗರ - ನಂಜಪ್ಪ ಕಾಳೇಗೌಡ
  58. 184-ಕನಕಪುರ - ಪುಟ್ಟರಾಜು ಗೌಡ
  59. 185-ಚನ್ನಪಟ್ಟಣ - ಶರತ್ ಚಂದ್ರ
  60. 179-ದೇವನಹಳ್ಳಿ - ಶಿವಪ್ಪ ಬಿ.ಕೆ
  61. 180-ದೊಡ್ಡಬಳ್ಳಾಪುರ - ಪುರುಷೋತ್ತಮ
  62. 181-ನೆಲಮಂಗಲ - ಗಂಗಬೈಲಪ್ಪ ಬಿ.ಎಂ
  63. 140-ಬಾಗೇಪಲ್ಲಿ - ಮಧುಸೀತಪ್ಪ
  64. 143-ಚಿಂತಾಮಣಿ - ಸಿ. ಬೈರೆಡ್ಡಿ
  65. 146-ಕೊಲಾರ್‌ ಗೋಲ್ಡ್‌ ಫೀಲ್ಡ್‌ - ಆರ್.‌ ಗಗನ ಸುಕನ್ಯ
  66. 149-ಮಾಲೂರು - ರವಿಶಂಕರ್‌ ಎಂ
  67. 155-ದಾಸರಹಳ್ಳಿ - ಕೀರ್ತನ್‌ ಕುಮಾರ
  68. 156-ಮಹಾಲಕ್ಷ್ಮಿ ಬಡಾವಣೆ - ಶಾಂತಲಾ ದಾಮ್ಲೆ
  69. 157-ಮಲ್ಲೇಶ್ವರ - ಸುಮನ್ ಪ್ರಶಾಂತ್‌
  70. 158-ಹೆಬ್ಬಾಳ - ಮಂಜುನಾಥ ನಾಯ್ಡು
  71. 159-ಪುಲಕೇಶಿನಗರ - ಸುರೇಶ್‌ ರಾಥೋಡ್‌
  72. 161-ಸಿ.ವಿ. ರಾಮನ್‌ ನಗರ - ಮೋಹನ ದಾಸರಿ
  73. 162-ಶಿವಾಜಿನಗರ - ಪ್ರಕಾಶ್‌ ನೆಡುಂಗಡಿ
  74. 163-ಶಾಂತಿನಗರ - ಕೆ ಮಥಾಯ್
  75. 165-ರಾಜಾಜಿನಗರ - ಬಿಟಿ ನಾಗಣ್ಣ
  76. 167-ವಿಜಯನಗರ - ಡಾ ರಮೇಶ್‌ ಬೆಲ್ಲಂಕೊಂಡ
  77. 169-ಚಿಕ್ಕಪೇಟೆ - ಬ್ರಿಜೇಶ್‌ ಕಾಳಪ್ಪ
  78. 171-ಪದ್ಮನಾಭನಗರ - ಅಜಯ್‌ ಗೌಡ
  79. 172-ಬಿ.ಟಿ.ಎಂ ಬಡಾವಣೆ - ಶ್ರೀನಿವಾಸ್‌ ರೆಡ್ಡಿ
  80. 175-ಬೊಮ್ಮನಹಳ್ಳಿ - ಸೀತಾರಾಮ್‌ ಗುಂಡಪ್ಪ

ಪಾರದರ್ಶಕ ಆಡಳಿತಕ್ಕೆ ಆಮ್‌ ಆದ್ಮಿ ಬೆಂಬಲಿಸಿ: ಮುಖ್ಯಮಂತ್ರಿ ಚಂದ್ರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ