
ಆಳಂದ(ಜ.21): ಹೀರೋಳಿ ಗ್ರಾಮದ ಅನೇಕ ಜನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕ ಸುಭಾಷ್ ಗುತ್ತೇದಾರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಹೀರೋಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸೋಮಲಿಂಗ ಕವಲಗಿ, ಶಿವಲಿಂಗಪ್ಪ ಗುಡ್ಡದ, ಗಜಾನಂದ ಕವಲಗಿ, ಶರಣಬಸಪ್ಪ ವಾಡೇದ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಅಪ್ಪಾಶಾ (ಶಿವಶರಣಪ್ಪ ಮಾಳಿ), ರಾಮಚಂದ್ರ ಮಾಳಿ, ರಾಚಯ್ಯ ಸ್ವಾಮಿ, ಹಣಮಂತ ಸರಸಂಬಿ, ಶರಣಬಸಪ್ಪ ರಾಯಿನುರೆ, ಸೋಮನಾಥ ತೊರಣಗಿ, ಸಿದ್ದರಾಮ ವಾಡೆದ, ಸೋಮನಾಥ ದಿಂಡುರಗಿ, ಸೋಮಲಿಂಗ ತೋರಣಗಿ, ಮಲ್ಲಯ್ಯ ತೀರ್ಥ, ಶ್ರೀಶೈಲ ಪರಿಟ, ಸೋಮನಾಥ ಕಾಮನಳ್ಳಿ , ಚಂದ್ರಶ್ಯಾ ಸುತಾರ, ರಾಮಣ್ಣ ಮಣ್ಣೆ, ವಾಗೇಶ ಹಣಮಶೆಟ್ಟಿ, ಶಾಂತಕುಮಾರ ಮಣ್ಣೇ, ನಾಗೇಶ ಚಿಣಮಗೆರಿ, ದಿಗಂಬರ ಭಿಮಗೊಳ, ಕಲ್ಯಾಣಿ ವಾಡೆದ, ಶಿವರಾಜ ವಾಡೆದ ಮತ್ತು ಪಂಡಿತ ವಾಡೆದ ಇವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನಾನು ದಿಲ್ಲಿಯಲ್ಲಿರುವ ನಿಮ್ಮ ಮಗ: ಪ್ರಧಾನಿ ನರೇಂದ್ರ ಮೋದಿ
ಸೇರ್ಪಡೆಯಾದ ಮುಖಂಡರನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಪಕ್ಷದ ಬಾವುಟ, ಶಾಲು ನೀಡಿ ಸ್ವಾಗತಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ, ಚೆನ್ನು ಪಾಟೀಲ, ಶಿವಪುತ್ರಪ್ಪ ಚಲಗೆರಿ, ಶರಣಬಸಪ್ಪ ಡುಮ್ಮಾ, ಮಲ್ಲಿನಾಥ ಮಾನಾಜಿ, ಗ್ರಾಪಂ ಸದಸ್ಯ ಕಾಶಿನಾಥ ವಾಡೆದ, ಶಿವಶರಣ ಚೌಡೇಶ್ವರಿ, ಶಿವಲಿಂಗಪ್ಪ ಗುಡ್ಡದ, ವಿಶ್ವನಾಥ ಇಕ್ಕಳಕಿ, ಹಟಗಾರ ಸಮಾಜದ ಮುಖ್ಯಸ್ಥರಾದ ನಾಗೇಂದ್ರ ಬಳೂರ್ಗಿ, ವಿಶ್ವನಾಥ ಮಣುರ, ಬಸವರಾಜ ಹುಲಗೆರಿ, ಶಿವಪುತ್ರ ಸನಗುಂದಿ, ಕಲ್ಲಪ್ಪ ಜಟ್ಟೇಪಗೊಳ, ಮಹಾಂತು ಜಗದೇ, ಸೂರ್ಯಕಾಂತ ಪೊಲೀಸ್ ಪಾಟೀಲ, ರಾಜೇಂದ್ರ ಖಾನಾಪೂರೆ, ಮಲ್ಲಿಕಾರ್ಜುನ ಕುಂಬಾರ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.