
Shashishekhar, Asianet Suvarna News
ರಾಜ್ಯದಲ್ಲಿ ಪಿಎಫ್ಐ ಸಂಘಟನೆ ಬೆಳೆಯೋದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಮಾಡಿದವರಲ್ಲಿ ನಳಿನ್ ಕುಮಾರ್ ಕಟೀಲ್ ಮೊದಲಿಗರೂ ಅಲ್ಲ... ಕೊನೆಯವರೂ ಅಲ್ಲ. ಬಿಜೆಪಿಯ ಹಲವು ನಾಯಕರು ಇಂಥಾ ಆರೋಪವನ್ನ ಪಿಎಫ್ಐ ವಿಷಯ ಬಂದಾಗಲೆಲ್ಲಾ ಪ್ರಸ್ತಾಪಿಸುತ್ತಾರೆ. ಹಾಗಾದ್ರೆ ಈ ಆರೋಪದಲ್ಲಿ ಸತ್ಯಾಂಶ ಇದೆಯಾ..? ಪಿಎಫ್ಐ ಮೇಲೆ ಸಿದ್ದರಾಮಯ್ಯನವರಿಗೆ ಪ್ರೀತಿ ಇತ್ತಾ..? ಮುಸ್ಲಿಂ ಸಂಘಟನೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಪಿಎಫ್ಐ ಪರ ನಿಲುವು ಹೊಂದಿದ್ದರಾ..? ಈ ಆರೋಪದ ಬಗ್ಗೆ ವಾಸ್ತವಾಂಶ ಏನು..?
ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಈ ಆರೋಪಕ್ಕೆ ಕಾರಣ ಇದೆ. ಅದೇನಂದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳ ಮೇಲಿದ್ದ 175 ಕ್ರಿಮಿನಲ್ ಕೇಸ್ಗಳನ್ನ ವಾಪಸ್ ಪಡೆದಿದ್ದರು. ರೈತರ ಮೇಲಿನ ಕೇಸ್ಗಳು.. ಕನ್ನಡ ಪರ ಸಂಘಟನೆಗಳ ಮೇಲಿನ ಕೇಸ್ಗಳನ್ನ ವಾಪಸ್ ಪಡೆಯೋ ಸಂಪ್ರದಾಯ ಹಲವು ವರ್ಷಗಳಿಂದಲೂ ಇದೆ. ಸರ್ಕಾರದ ವಿರುದ್ಧ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸೋ ರೈತರು, ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿದ್ದ ಕೇಸ್ಗಳನ್ನ ಹಲವು ಸರ್ಕಾರಗಳು ವಾಪಸ್ ಪಡೆದಿರೋ ಉದಾಹರಣೆಗಳಿವೆ. ಆದ್ರೆ ಈ ರೀತಿಯ ನಿರ್ಧಾರಗಳಿಗೆ ಯಾರೂ ವಿರೋಧಿಸೋದಿಲ್ಲ.. ಆದ್ರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಗಲಭೆ ಸೃಷ್ಟಿಸಿದ್ದ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನೇ ವಾಪಸ್ ಪಡೆದಿತ್ತು.
ಗಾಂಧಿ-ನೆಹರು ಓಕೆ! ಸಾವರ್ಕರ್ ಯಾಕೆ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾ? ಹೇಡಿನಾ?
2015ರ ಜೂನ್ 2ನೇ ತಾರೀಕು ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳ 1600ಕ್ಕೂ ಹೆಚ್ಚು ಕಾರ್ಯಕರ್ತರ ಮೇಲಿನ 175 ಕೇಸ್ಗಳನ್ನ ವಾಪಸ್ ಪಡೆದಿತ್ತು. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಗಳ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಸಿದ್ದು ಸರ್ಕಾರ ಈ ಕೇಸ್ಗಳನ್ನು ವಾಪಸ್ ಪಡೆದಿತ್ತು. ಹಾಗಂತ ಇವೇನು ಸಣ್ಣಪುಟ್ಟ ಕೇಸ್ ಗಳಲ್ಲ. ಎಲ್ಲವೂ ಗಲಭೆ ಸೃಷ್ಟಿಸಿದ್ದ ಪ್ರಕರಣಗಳೇ... ಕ್ಯಾಬಿನೆಟ್ ಸಬ್ ಕಮಿಟಿ ರಿಪೋರ್ಟ್ ಆಧಾರದ ಮೇಲೆ ಎಲ್ಲ ಕೇಸ್ ಗಳನ್ನ ವಾಪಸ್ ಪಡೆಯಲಾಗಿತ್ತು. ಆಗ ವಿರೋಧ ವ್ಯಕ್ತವಾದಾಗ ಕೇಸ್ ಹಾಕಿದ ಸರ್ಕಾರಕ್ಕೆ ಕೇಸ್ ಗಳನ್ನ ವಾಪಸ್ ಪಡೆಯೋ ಅಧಿಕಾರ ಸರ್ಕಾರಕ್ಕಿದೆ ಎಂದಿದ್ದರು ಆಗಿನ ಕಾನೂನು ಮಂತ್ರಿ ಟಿಬಿ ಜಯಚಂದ್ರ.
2009: ಮೈಸೂರು ಗಲಭೆ, 40 ಕೇಸ್ ವಾಪಸ್
2009ರಲ್ಲಿ ಮೈಸೂರಿನ ಉದಯಗಿರಿ ಮತ್ತು ನರಸಿಂಹರಾಜ ಮತ್ತು ನರಸಿಂಹರಾಜದಲ್ಲಿ ನಡೆದಿದ್ದ ಗಲಭೆಯಲ್ಲಿ ಮೂವರ ಕೊಲೆಯಾಗಿತ್ತು. 250ಕ್ಕೂ ಹೆಚ್ಚು ಪಿಎಫ್ಐ, ಕೆಎಫ್ಡಿ ಗಲಭೆಕೋರರ ಮೇಲೆ ಕೇಸ್ ಗಳನ್ನ ದಾಖಲಿಸಲಾಗಿತ್ತು. ಕೊಲೆ ಕೇಸ್ ಹೊರತುಪಡಿಸಿ 40 ಕೇಸ್ಗಳನ್ನ ಸರ್ಕಾರ ವಾಪಸ್ ಪಡೆದಿತ್ತು.
2010 : ಶಿವಮೊಗ್ಗ, ಹಾಸನ ಗಲಭೆ, 135 ಕೇಸ್ ವಾಪಸ್
2010ರಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆ ಕೇಸ್ಗೆ ಸಂಬಂಧಿಸಿ 114 ಕೇಸ್ಗಳು ದಾಖಲಾಗಿದ್ದವು. ಹಾಸನದಲ್ಲಿ 21 ಕೇಸ್ ಗಳು ದಾಖಲಾಗಿದ್ದವು. 1400ಕ್ಕೂ ಹೆಚ್ಚು ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರ ಮೇಲೆ ದಾಖಲಿಸಲಾಗಿದ್ದ ಕೇಸ್ಗಳು. ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಅವರ ಲೇಖನ ವಿರೋಧಿಸಿ ಗಲಭೆ ಹಾಸನ, ಶಿವಮೊಗ್ಗದಲ್ಲಿ ಗಲಭೆ ನಡೆದಿತ್ತು. ಇಸ್ಲಾಂನಲ್ಲಿ ಪರದೆ ಹಾಕುವುದು ಧರ್ಮದಲ್ಲಿ ಕಡ್ಡಾಯನಾ ಎಂಬ ಬಗ್ಗೆ ಇದ್ದ ಲೇಖನದ ಕನ್ನಡ ಅನುವಾದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಲೇಖನ ವಿರೋಧಿಸಿ ಪಿಎಫ್ಐ ಮತ್ತು ಕೆಎಫ್ಡಿ ಕಾರ್ಯಕರ್ತರು ಗಲಭೆ, ಹಿಂಸಾಚಾರ ನಡೆಸಿದ್ದರು..
ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!
ಇದು ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪಿಎಫ್ಐ ಪರವಾಗಿ ಕೈಗೊಂಡ ನಿರ್ಣಯಗಳು... ಈ ಎರಡು ಗಲಭೆಗಳಾದ ನಂತರ ರಾಜ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲೆ ಅದೆಷ್ಟೋ ಗಲಭೆ, ಹಿಂಸಾಚಾರ, ಕೊಲೆಗಳಿಗೆ ಸಂಬಂಧಿಸಿದ ಕೇಸ್ಗಳು ದಾಖಲಾಗಿವೆ... ಆರಂಭದಲ್ಲೇ ಪಿಎಫ್ಐನ ಹಿಂಸಾತ್ಮಕ ಹೋರಾಟವನ್ನ ಕಾನೂನು ಪ್ರಕಾರ ಮಟ್ಟ ಹಾಕಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.