ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು

Published : Nov 03, 2022, 02:29 AM IST
ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು

ಸಾರಾಂಶ

ಕಾಂಗ್ರೆಸ್‌, ಜೆಡಿಎಸ್‌ ಚಕಮಕಿ, ಮಾಜಿ ಶಾಸಕ ಬಾಲಕೃಷ್ಣ ಕಾರಿಗೆ ಕಲ್ಲು ಮಾಜಿ ಶಾಸಕ ಮತ್ತು ಬಮೂಲ್‌ ಅಧ್ಯ​ಕ್ಷರ ಕಾರಿನ ಮೇಲೆ ಕಲ್ಲು ತೂರಾಟ  ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ ವೇಳೆ ಕಲ್ಲೆಸೆತ

ಕುದೂರು(ರಾಮನಗರ) (ನ.3) ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ವಿಚಾ​ರವಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕ​ಮಕಿ ನಡೆದು ಉದ್ರಿಕ್ತ ಗುಂಪೊಂದು ಮಾಜಿ ಶಾಸಕ ಎಚ್‌.ಸಿ.ಬಾಲ​ಕೃಷ್ಣ ಮತ್ತು ಬಮೂಲ್‌ ಅಧ್ಯಕ್ಷ ನರ​ಸಿಂಹ​ಮೂ​ರ್ತಿ​ ಅ​ವರ ಕಾರು​ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕಾಮಸಾಗರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬಾಲ​ಕೃಷ್ಣ ಅವರು ಕಟ್ಟ​ಡ ಉದ್ಘಾ​ಟ​ನೆ​ಗಾಗಿ ಆ​ಗ​​ಮಿ​​ಸಿದ್ದರು. ಶಾಸಕ ಎ.ಮಂಜುನಾಥ್‌ ಕೋರ್ಚ್‌ ಕೆಲಸದ ಕಾರಣ ಬರಲು ತಡವಾಗಿದ್ದು, ಅಷ್ಟರಲ್ಲಿ ಬಮೂಲ… ಅಧ್ಯಕ್ಷ ನರಸಿಂಹಮೂರ್ತಿ ನಮಗೆ ಬೇರೆ ಕೆಲಸವಿದೆ ಎಂದು ನೂತನ ಕಟ್ಟಡದ ಉದ್ಘಾಟನೆಗೆ ಟೇಪ್‌ ಕತ್ತರಿಸಲು ಮಾಜಿ ಶಾಸಕರೊಂದಿಗೆ ಹೋದಾಗ ಜೆಡಿಎಸ್‌ ಕಾರ್ಯಕರ್ತರು ಅಡ್ಡಿಪಡಿ​ಸಿ​ದ್ದಾ​ರೆ. ಟೇಪ್‌ ಕಿತ್ತುಹಾಕಿದ್ದಾರೆ. ಇದ​ರಿಂದ ಕೆರ​ಳಿದ ಕಾಂಗ್ರೆಸ್‌ ಕಾರ್ಯ​ಕರ್ತರು ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಕೆಲ ಕಾರ್ಯ​ಕ​ರ್ತರು ಪರ​ಸ್ಪರ ಕಲ್ಲು ತೂರಾ​ಟ ನಡೆ​ಸಿ​ದ್ದಾರೆ. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.

ನಂತರ ಬಾಲಕೃಷ್ಣ ವೇದಿಕೆ ಕಾರ್ಯಕ್ರಮ ಮುಗಿಸಿ ಹೊರ ನಡೆ​ದರು. ಆಗ ಆಕ್ರೋಶಗೊಂಡ ಜೆಡಿ​ಎಸ್‌ ಕಾರ್ಯ​ಕ​ರ್ತರು ಬಾಲಕೃಷ್ಣ ಮತ್ತು ನರ​ಸಿಂಹ​ಮೂ​ರ್ತಿ ಅವ​ರಿದ್ದ ಕಾರು​ಗ​ಳತ್ತ ಕಲ್ಲು ತೂರಿ​ದರು. ಕಲ್ಲು ತೂರಾ​ಟ​ದಲ್ಲಿ ಯಾವುದೇ ಹಾನಿ ಸಂಭ​ವಿ​ಸಿಲ್ಲ.

ಮತ್ತೊಮ್ಮೆ ಉದ್ಘಾಟನೆ: ಇದಾದ ಬಳಿಕ ಆಗಮಿಸಿದ ಶಾಸಕ ಎ.ಮಂಜುನಾಥ್‌ ಮತ್ತೊಮ್ಮೆ ಡೇರಿಯ ಟೇಪ್‌ ಕತ್ತರಿಸಿ ಉದ್ಘಾಟನೆ ಮಾಡಿ ಪಕ್ಕದಲ್ಲೇ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ