ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಹೊಸ ಪ್ಲಾನ್, 36 ಮಂದಿಯ ಸಮಿತಿ ರಚನೆ!

Published : Dec 14, 2022, 11:17 PM IST
ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಹೊಸ ಪ್ಲಾನ್, 36 ಮಂದಿಯ ಸಮಿತಿ ರಚನೆ!

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಭಾರಿ ರಣತಂತ್ರ ರೂಪಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜೊತೆ ದೆಹಲಿಯಲ್ಲಿ ಮಹತ್ವ ಸಭೆ ನಡೆಸಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್  36 ಮಂದಿಯನ್ನೊಳಗೊಂಡ ಹೊಸ ಸಮಿತಿ ರಚಿಸಿ ಆದೇಶ ನೀಡಿದ್ದಾರೆ.

ಬೆಂಗಳೂರು(ಡಿ.14) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಭಾರಿ ರಣತಂತ್ರ ರೂಪಿಸುತ್ತಿದೆ. ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜೊತೆ ದೆಹಲಿಯಲ್ಲಿ ಮಹತ್ವ ಸಭೆ ನಡೆಸಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್  36 ಮಂದಿಯನ್ನೊಳಗೊಂಡ ಹೊಸ ಸಮಿತಿ ರಚಿಸಿ ಆದೇಶ ನೀಡಿದ್ದಾರೆ. ರಾಜ್ಯ ಚುನಾವಣೆ ಕುರಿತು ಮಹತ್ವದ ನಿರ್ಧಾರಗಳನ್ನು ಹೊಸ ಪ್ರದೇಶ ಚುನಾವಣಾ ಸಮಿತಿ ನೋಡಿಕೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಸೇರಿದಂತೆ ಹಲವು ಮುಖಂಡರು ಈ ಸಮಿತಿಯಲ್ಲಿದ್ದಾರೆ. ವಿನಯ್ ಕುಲಕರ್ಣಿ, ಮಾಜಿ ಮೇಯರ್ ಜಿ ಪದ್ಮಾವತಿ ಶರಣಪ್ಪ ಸುನಗಾರ್, ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ ನಲ್ಲಿ ಮುನಿಸಿಕೊಂಡಿದ್ದ ಎಂ ಆರ್ ಸೀತಾರಾಂ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.

karnataka assembly elections :'ನಮೋ' ಅಶ್ವಮೇಧಕ್ಕೆ ಕಡಿವಾಣ ಹಾಕಲು 'ಖರ್ಗೆ'ಪಡೆ ಸಿದ್ಧ: ದೆಹಲಿಯಿಂದಲೇ ಯುದ್ಧತಂತ್ರ

 ಕಾಂಗ್ರೆಸ್ ನ‌ ಪ್ರದೇಶ ಎಲೆಕ್ಷನ್ ಕಮಿಟಿ ಸದಸ್ಯರು

  • ಡಿ ಕೆ ಶಿವಕುಮಾರ್
  • ಸಿದ್ದರಾಮಯ್ಯ
  • ಬಿ ಕೆ ಹರಿಪ್ರಸಾದ್
  • ಎಂ ಬಿ ಪಾಟೀಲ್
  • ದಿನೇಶ್ ಗುಂಡೂರಾವ್
  • ಹೆಚ್ ಕೆ ಪಾಟೀಲ್
  • ಕೆ ಹೆಚ್ ಮುನಿಯಪ್ಪ
  • ವೀರಪ್ಪ ಮೊಯ್ಲಿ
  • ಡಾ.ಜಿ ಪರಮೇಶ್ವರ್
  • ಆರ್ ವಿ ದೇಶ್ಪಾಂಡೆ
  • ಅಲ್ಲಮ್ ವೀರಬದ್ರಪ್ಪ
  • ರಾಮಲಿಂಗರೆಡ್ಡಿ
  • ಈಶ್ವರ್ ಖಂಡ್ರೆ
  • ಸತೀಶ್ ಜಾರಕಿಹೊಳಿ
  • ದೃವ ನಾರಾಯಣ್
  • ಸಲೀಂ ಅಹ್ಮದ್
  • ರೆಹಮಾನ್ ಖಾನ್
  • ಮಾರ್ಗ್ರೆಟ್ ಆಳ್ವಾ
  • ಕೆ ಜೆ ಜಾರ್ಜ್
  • ಯು ಟಿ ಖಾದರ್
  • ಕೆ ಗೋವಿಂದರಾಜ್
  • ಹೆಚ್ ಸಿ ಮಹದೇವಪ್ಪ
  • ಚೆಲುವ ರಾಯ ಸ್ವಾಮಿ
  • ಬಸವರಾಜ್ ರಾಯರೆಡ್ಡಿ
  • ಬಿ ಕೆ ಸುರೇಶ್
  • ಎಲ್ ಹನುಮಂತಯ್ಯ
  • ನಾಸಿರ್ ಹುಸೇನ್
  • ಎಂ ಆರ್ ಸೀತರಾಮ್
  • ಶಿವರಾಜ್ ತಂಗಡಗಿ
  • ವಿನಯ್ ಕುಲಕರ್ಣಿ
  • ವಿ ಎಸ್ ಉಗ್ರಪ್ಪ
  • ಬೋಸ್ ರಾಜ್
  • ವಿನಯ್ ಕುಮಾರ್ 
  • ಶರಣಪ್ಪ 
  • ಜಿ ಪದ್ಮಾವತಿ
  • ಶಾಮನೂರ್ ಶಿವಶಂಕ್ರಪ್ಪ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!