ಮಂಡ್ಯದಲ್ಲಿ ಗಲಾಟೆ ಎಬ್ಬಿಸಿದ್ದೇ ಜೆಡಿಎಸ್‌: ಸಿಎಂ ಸಿದ್ದರಾಮಯ್ಯ

Published : Jan 31, 2024, 04:43 AM IST
ಮಂಡ್ಯದಲ್ಲಿ ಗಲಾಟೆ ಎಬ್ಬಿಸಿದ್ದೇ ಜೆಡಿಎಸ್‌: ಸಿಎಂ ಸಿದ್ದರಾಮಯ್ಯ

ಸಾರಾಂಶ

ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರವಾ?. ಇಂತಹ ಕಾನೂನು ಬಾಹಿರ ಕೆಲಸ ಮಾಡಿದವರ ಪರವಾಗಿ, ಅವರನ್ನು ಸಮರ್ಥಿಸಿಕೊಂಡು ರಾಜಕಾರಣ ಮಾಡಲು ಹೋಗಿರುವವರು ಯಾರು?. ಅವರಿಂದಲೇ ಅಶಾಂತಿ, ಗಲಾಟೆ ಸೃಷ್ಟಿಯಾಗಿರುವುದು ಎಂದು ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಜ.31):  ಮಂಡ್ಯದ ಕೆರಗೋಡಿನಲ್ಲಿ ಗಲಾಟೆ ಎಬ್ಬಿಸಿದ್ದು, ಶಾಂತಿಗದಡಿದ್ದೇ ಜೆಡಿಎಸ್‌ನವರು. ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾರಿಸುವುದಾಗಿ ಮುಚ್ಚಳಿಕೆ ಬರೆದು ಕೊಟ್ಟು ಭಗವಾಧ್ವಜ ಹಾರಿಸಿದ್ದು ತಪ್ಪಲ್ಲವಾ?. ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರಾನಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಸರ್ಕಾರ ಜನರನ್ನು ಪ್ರಚೋದಿಸುತ್ತಿದೆ, ಅಶಾಂತಿ ಸೃಷ್ಟಿಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. 

ಮಂಡ್ಯದಲ್ಲಿ ಬೆಂಕಿ ಹಚ್ಚಿದ್ದೇ ಸರ್ಕಾರ: ಕುಮಾರಸ್ವಾಮಿ ವಾಗ್ದಾಳಿ

ಅಲ್ಲಿ ಗಲಾಟೆ, ಅಶಾಂತಿ ಸೃಷ್ಟಿಸಿದ್ದೇ ಜೆಡಿಎಸ್‌. ಇಲ್ಲಿ ಯಾರದ್ದು ತಪ್ಪು ಅನ್ನೋದಕ್ಕಿಂತ ಮುಚ್ಚಳಿಕೆಯಲ್ಲಿ ಏನಿದೆ ಅನ್ನೋದು ಮುಖ್ಯ. ಸ್ಥಳೀಯ ಪಂಚಾಯಿತಿಯವರಿಗೆ ರಾಷ್ಟ್ರಧ್ವಜ, ನಾಡಧ್ವಜ ಹಾರಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಭಗವಾಧ್ವಜ ಹಾರಿಸಿದರೆ ಅದು ಅಶಾಂತಿ, ಗಲಾಟೆ ನಿರ್ಮಾಣ ಮಾಡಿದಂಗೆ ಅಲ್ವಾ?. ಸರ್ಕಾರಿ ಜಾಗದಲ್ಲಿ ಯಾವ ಧ್ವಜವನ್ನಾದರೂ ಹಾರಿಸಲು ಅವಕಾಶ ಇದೆಯಾ?. ಸರ್ಕಾರಿ ಜಾಗ ರಕ್ಷಿಸುವುದು, ಅದಕ್ಕೆ ಚ್ಯುತಿ ಬಂದಾಗ ಕ್ರಮ ಜರುಗಿಸುವುದು ಸರ್ಕಾರದ ಕರ್ತವ್ಯ ಅಲ್ಲವಾ?. ಅದನ್ನು ನಾವು ಮಾಡಿದ್ದೇವೆ. ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಭಗವಾಧ್ವಜ ಹಾರಿಸಿದವರ ಪರವಾ?. ಇಂತಹ ಕಾನೂನು ಬಾಹಿರ ಕೆಲಸ ಮಾಡಿದವರ ಪರವಾಗಿ, ಅವರನ್ನು ಸಮರ್ಥಿಸಿಕೊಂಡು ರಾಜಕಾರಣ ಮಾಡಲು ಹೋಗಿರುವವರು ಯಾರು?. ಅವರಿಂದಲೇ ಅಶಾಂತಿ, ಗಲಾಟೆ ಸೃಷ್ಟಿಯಾಗಿರುವುದು ಎಂದು ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!