ಉಪಚುನಾವಣೆ ಕಣದಲ್ಲಿಯೇ ಆರ್. ಶಂಕರ್‌ಗೆ ಸಿಎಂ BSY ಅಡ್ವಾನ್ಸ್ ಗಿಫ್ಟ್!

Published : Nov 29, 2019, 01:21 PM IST
ಉಪಚುನಾವಣೆ ಕಣದಲ್ಲಿಯೇ ಆರ್. ಶಂಕರ್‌ಗೆ ಸಿಎಂ BSY ಅಡ್ವಾನ್ಸ್ ಗಿಫ್ಟ್!

ಸಾರಾಂಶ

ರಾಣೇಬೆನ್ನೂರಿನಲ್ಲಿ ಬಿಜೆಪಿ ಪ್ರಚಾರ/ ಆರ್. ಶಂಕರ್ ಗೆ ಸೂಕ್ತ ಸ್ಥಾನ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಣೆ/ ನೇಕಾರರು, ರೈತರ ಹಿತ ಕಾಯಲು ಸರ್ಕಾರ ಬದ್ಧ/ 

ಹಾವೇರಿ(ನ.29)  ರಾಣೆಬೆನ್ನೂರು ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಫುಲ್ ಬ್ಯುಸಿಯಾಗಿದ್ದಾರೆ. ತುಮ್ಮಿನಕಟ್ಟೆಯಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರುವ ಬಿಎಸ್ ಯಡಿಯೂರಪ್ಪ ಆರ್ . ಶಂಕರ್ ಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಸರ್ಕಾರದ ಖಜಾನೆ ತುಂಬಿದೆ. 3.5 ವರ್ಷದಲ್ಲಿ ಎಲ್ಲರಿಗೂ ಸೂರು ಎಲ್ಲರಿಗೂ ಸೂರು ಕಲ್ಪಿಸಲು ಖಜಾನೆಯಲ್ಲಿ ಹಣ ಇದೆ. ಆರ್.ಶಂಕರ್ ಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಮೀಕ್ಷೆಗಳ ಪ್ರಕಾರ ಯಾರು ಎಷ್ಟು ಸ್ಥಾನ ಗೆಲ್ಲಬಹುದು?

ನೇಕಾರರು, ರೈತರು ನನ್ನ ಎರಡು ಕಣ್ಣು. ಅಧಿಕಾರಕ್ಕೆ ಬಂದಾಕ್ಷಣ ನೇಕಾರರ ಸಾಲ ಮನ್ನ ಮಾಡಿದ್ದೇನೆ. ರಾಷ್ಟ್ರೀಯ ಬ್ಯಾಂಕ್ ನಲ್ಲಿ ನೇಕಾರರ ಸಾಲ ಮನ್ನಾ ಆಗಿಲ್ಲ ಎನ್ನುತ್ತಿದ್ದಾರೆ. ಅದನ್ನ ಪರಿಶೀಲನೆ ಮಾಡ್ತಿನಿ ನೇಕಾರರ ಸಮುದಾಯಕ್ಕೆ ಏನು ಬೇಕು ಆ ಸಹಾಯ ಮಾಡ್ತಿನಿ ಎಂದು ಹೇಳೀದ್ದಾರೆ.

ಉದ್ಯೋಗ ಸೃಜನೆ, ರೈತರಿಗೆ ವೈಜ್ಞಾನಿಕ ಬೆಲೆ ಸೇರಿದಂತೆ ಇತರೆ ಯೋಜನೆಗೂ ಗಮನ ನೀಡಿದ್ದೇವೆ.  ಕುರುಬ, ನೇಕಾರ, ಎಸ್ಸಿ-ಎಸ್ಟಿ ಸಮುದಾಯದ ಹಿತ ಕಾಯಲು ಬದ್ಧರಾಗಿದ್ದೇವೆ ಎಂದರು.

3.5 ವರ್ಷದಲ್ಲಿ ರಾಜ್ಯವನ್ನ ಮಾದರಿ ರಾಜ್ಯ ಮಾಡುತ್ತೇವೆ. ಲೋಕಸಭೆಯಲ್ಲಿ 22 ಕ್ಷೇತ್ರ ಗೆಲ್ತಿವಿ ಅದಾಗ ಮಾಧ್ಯಮದವ್ರು, ವಿರೋಧ ಪಕ್ಷದವ್ರು ನಕ್ಕರು. ಆದರೆ, 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ ಎಂದರು.

ನೀವು ಪೂಜೆ ಮಾಡುವಾಗ ಅರುಣ್ ಕುಮಾರ್ ಗೆ , ಯಡಿಯೂರಪ್ಪಗೆ ಒಳ್ಳೆಯದಾಗಲಿ, ಸರ್ಕಾರ ಸುಭದ್ರವಾಗಿರಲಿ ಅಂತ ಎರಡು ಹೂವು ಹಾಕಿ ಅಂತ  ಬಿಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!