ಶೆಟ್ಟರ್‌ ಆರೋಪಕ್ಕೆ ಸಿಎಂ, ಬಿಎಸ್‌ವೈ ಕಿಡಿ

Published : Apr 19, 2023, 01:30 AM IST
ಶೆಟ್ಟರ್‌ ಆರೋಪಕ್ಕೆ ಸಿಎಂ, ಬಿಎಸ್‌ವೈ ಕಿಡಿ

ಸಾರಾಂಶ

ಸಂತೋಷ್‌ ಅವರು ಕಾರಣ ಎಂಬ ಶೆಟ್ಟರ್‌ ಆರೋಪ ಸರಿಯಲ್ಲ. ನಾವೆಲ್ಲ ರಾಜ್ಯಮಟ್ಟದಿಂದ ಜಗದೀಶ್‌ ಶೆಟ್ಟರ್‌ ಹೆಸರು ಕಳಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ಮಿತಿಯಲ್ಲಿ ಮಾಡಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ 

ಬೆಂಗಳೂರು/ಬಾಗಲಕೋಟೆ(ಏ.19): ತಮಗೆ ಟಿಕೆಟ್‌ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಲವಾಗಿ ಅಲ್ಲಗಳೆದಿದ್ದಾರೆ. ಸಂತೋಷ್‌ ಅವರು ಕಾರಣ ಎಂಬ ಶೆಟ್ಟರ್‌ ಆರೋಪ ಸರಿಯಲ್ಲ. ನಾವೆಲ್ಲ ರಾಜ್ಯಮಟ್ಟದಿಂದ ಜಗದೀಶ್‌ ಶೆಟ್ಟರ್‌ ಹೆಸರು ಕಳಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ಮಿತಿಯಲ್ಲಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಅನಗತ್ಯವಾಗಿ ಸಂತೋಷ್‌ ಅವರ ಮೇಲೆ ಆರೋಪ ಮಾಡುವುದು ಶೆಟ್ಟರ್‌ ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ತಿರುಗೇಟು:

ಮಂಗಳವಾರ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ‘ಬಿಜೆಪಿ ಯಾರ ಕಪಿ ಮುಷ್ಟಿಯಲ್ಲೂ ಇಲ್ಲ. ಅದೊಂದು ವ್ಯವಸ್ಥಿತ ಪಕ್ಷ. ಯಾರಿಗೆ ಯಾರೂ ಟಿಕೆಟ್‌ ತಪ್ಪಿಸಿಲ್ಲ’ ಎಂದರು.

ಕಾಂಗ್ರೆಸ್‌ ಸೇರ್ತಿದ್ದಂತೆ ಜಗದೀಶ್‌ ಶೆಟ್ಟರ್‌ಗೆ ದೊಡ್ಡ ಜವಾಬ್ದಾರಿ, ಲಿಂಗಾಯತ ಮತಬೇಟೆಗೆ ಮೆಗಾ ಪ್ಲಾನ್‌!

‘ಶೆಟ್ಟರ್‌ ಬಿಜೆಪಿ ತೊರೆದಿದ್ದರಿಂದ ಲಿಂಗಾಯತ ಮತಗಳಿಗೆ ಪೆಟ್ಟು ಬೀಳುತ್ತಾ?’ ಎಂಬ ಪ್ರಶ್ನೆಗೆ, ‘ಯಾವುದೇ ತೊಂದರೆ ಇಲ್ಲ. ಕರ್ನಾಟಕ ರಾಜಕಾರಣದಲ್ಲಿ ಲಿಂಗಾಯತರು ಜಾಗೃತರಾಗಿದ್ದಾರೆ. ಯಾವಾಗ ಯಾವ ನಿರ್ಣಯ ತೆಗೆದುಕೊಂಡಿದ್ದಾರೋ ಸರಿಯಾಗಿಯೇ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಚುನಾವಣೆ ಬಂದ ಮೇಲೆ ಲಿಂಗಾಯತರಿಗೆ ಬಹಳ ಪ್ರೀತಿ ತೋರಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.

ಯಾರೂ ಕಾರಣರಲ್ಲ- ಬಿಎಸ್‌ವೈ:

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶೆಟ್ಟರ್‌ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರಿಗೆ ಟಿಕೆಟ್‌ ತಪ್ಪಲು ಯಾರೂ ಕಾರಣರಲ್ಲ. ಪಕ್ಷದ ನಿರ್ಧಾರ ಎಂದರು.

‘ಶೆಟ್ಟರ್‌ ಅಥವಾ ಬೇರೆ ಯಾರೋ ಪಕ್ಷ ಬಿಟ್ಟರೆ ಪಕ್ಷಕ್ಕೆ ತೊಂದರೆ ಆಗುವುದಿಲ್ಲ. ಅವರ ಜತೆ ಬಿಜೆಪಿಯ ಯಾವುದೇ ಮುಖಂಡರು ಅಥವಾ ಕಾರ್ಯಕರ್ತರು ಹೋಗಿಲ್ಲ. ಅವರು ಈ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಅವರನ್ನು ಮನವೊಲಿಸುವ ಎಲ್ಲ ಪ್ರಯತ್ನ ಮಾಡಲಾಯಿತು. ನಾವೆಲ್ಲರೂ ಇಷ್ಟೊಂದು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಇನ್ನು ಅವರ ದಾರಿ ಅವರಿಗೆ. ನಮ್ಮ ದಾರಿ ನಮಗೆ’ ಎಂದು ಖಡಕ್ಕಾಗಿ ಹೇಳಿದರು. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. 2-3 ದಿನಗಳ ಬಳಿಕ ನಾನು ಕೂಡ ಹುಬ್ಬಳ್ಳಿಗೆ ಭೇಟಿ ನೀಡುತ್ತೇನೆ’ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!