ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

Published : Aug 04, 2021, 08:13 PM ISTUpdated : Aug 04, 2021, 10:04 PM IST
ನೂತನ ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ ಸಿಎಂ: ಯಾವ ಜಿಲ್ಲೆ, ಯಾರ ಹೆಗಲಿಗೆ?

ಸಾರಾಂಶ

* ನೂತನ ಸಚಿವರಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ ಸಿಎಂ * 29 ನೂತನ ಸಚಿವರಿಗೆ ಜಿಲ್ಲೆಗಳನ ಜವಾಬ್ದಾರಿ ನೀಡಿದ ಬೊಮ್ಮಾಯಿ * ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

ಬೆಂಗಳೂರು, (ಆ.04): ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಯಾಬಿನೆಟ್ ರಚನೆಯಾಗಿದ್ದು, ಇಂದು (ಆ.04) 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಳಿಕ ಬಸವರಾಜ ಬೊಮ್ಮಯಿ ಅವರು ವಿಧಾನಸೌಧದಲ್ಲಿ ನೂತನ ಸಚಿವರ ಜೊತೆ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಗೆಳಿಗೆ ತೆರಳುವಂತೆ ನೂತನ ಸಚಿವರಿಗೆ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ.

ಸಭೆ ಅಂತ್ಯ: ಮೊದಲ ಸಭೆಯಲ್ಲಿಯೇ ನೂತನ ಸಚಿವರಿಗೆ ಮಹತ್ವ ಸೂಚನೆ ಕೊಟ್ಟ ಸಿಎಂ

ಅದರಂತೆ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ಪರಿಶೀಲನೆಗೆ ಹೋಗುವಂತೆ ಸಚಿವರುಗಳಿಗೆ ಜಿಲ್ಲೆಗಳನ್ನ ಹಂಚಿಕೆ ಮಾಡಿದ್ದಾರೆ. ಈ ಕೆಳಕಂಡ ಜಿಲ್ಲೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಹಾಗಾದ್ರೆ ಯಾರಿಗೆ ಯಾವ ಜಿಲ್ಲೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

* ಗೋವಿಂದ ಕಾರಜೋಳ - ಬೆಳಗಾವಿ
* ಕೆ.ಎಸ್​.ಈಶ್ವರಪ್ಪ- ಶಿವಮೊಗ್ಗ
* ಆರ್​.ಅಶೋಕ್​- ಬೆಂಗಳೂರು ನಗರ
 * ಬಿ.ಶ್ರೀರಾಮುಲು- ಚಿತ್ರದುರ್ಗ
* ವಿ.ಸೋಮಣ್ಣ- ವಿ ಸೋಮಣ್ಣ
* ಉಮೇಶ್ ಕತ್ತಿ-ಬಾಗಲಕೋಟೆ
* ಎಸ್. ಅಂಗಾರ- ದಕ್ಷಿಣ ಕನ್ನಡ
* ಜೆ.ಸಿ.ಮಾಧುಸ್ವಾಮಿ- ತುಮಕೂರು
* ಡಾ. ಅಶ್ವಥ ನಾರಾಯಣ- ರಾಮನಗರ
 * ಸಿ.ಸಿ.ಪಾಟೀಲ್​ - ಗದಗ
* ಆನಂದ್​ ಸಿಂಗ್- ಬಳ್ಳಾರಿ, ವಿಜಯನಗರ 
* ಕೋಟಾ ಶ್ರೀನಿವಾಸ ಪೂಜಾರಿ- ಕೊಡಗು
 * ಪ್ರಭು ಚೌಹ್ವಾಣ್​- ಬೀದರ್
 * ಮುರುಗೇಶ್​ ನಿರಾಣಿ- ಕಲಬುರಗಿ
 * ಶಿವರಾಮ್​ ಹೆಬ್ಬಾರ್- ಉತ್ತರ ಕನ್ನಡ​
 * ಎಸ್​.ಟಿ. ಸೋಮಶೇಖರ್​- ಮೈಸೂರು, ಚಾಮರಾಜನಗರ
 * ಬಿ.ಸಿ.ಪಾಟೀಲ್- ಹಾವೇರಿ
* ಬಸವರಾಜ ಬೈರತಿ- ದಾವಣಗೆರೆ
, * ಡಾ.ಕೆ.ಸುಧಾಕರ್​- ಚಿಕ್ಕಬಳ್ಳಾಪುರ
* ಗೋಪಾಲಯ್ಯ- ಹಾಸನ
* ಶಶಿಕಲಾ ಜೊಲ್ಲೆ- ವಿಜಯಪುರ
* ಎಂಟಿಬಿ ನಾಗರಾಜ್​- ಬೆಂಗಳೂರು ಗ್ರಾಮಾಂತರ
* ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
* ಸುನಿಲ್  ಕುಮಾರ್- ಉಡುಪಿ
* B C ನಾಗೇಶ್- ಯಾದಗಿರಿ
* ಹಾಲಪ್ಪ ಆಚಾರ್- ಕೊಪ್ಪಳ
* ಶಂಕರ್  ಪಾಟೀಲ್  ಮುನೇನಕೊಪ್ಪ- ಧಾರವಾಡ
* ಮುನಿರತ್ನ-ಕೋಲಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!