ಕಾಂಗ್ರೆಸ್‌ನಿಂದ ಬಂದಿದ್ದಾರೆ ಅಂತ ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಚಿವ

By Suvarna NewsFirst Published Mar 6, 2021, 3:48 PM IST
Highlights

ನಮ್ಮ ಅವಶ್ಯಕತೆಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ, ಹೋಗಬಾರದು ಅಂತ ಕಾನೂನಿನಲ್ಲಿ‌ ಇದ್ಯಾ?|ಏನೂ ತೊಂದರೆ ಆಗಬಾರದು ಅಂತ ನ್ಯಾಯಾಲಯಕ್ಕೆ ಹೋಗಿದ್ದೇವೆ| ಆಪಾದನೆ ಮಾಡೋರು ಏನಾದರೂ ಇದ್ದರೆ ತೋರಿಸಲಿ: ಸಚಿವ ಬೈರತಿ ಬಸವರಾಜ್| 

ಮಂಗಳೂರು(ಮಾ.06): ನಮ್ಮ ಕೈ ಬಾಯಿ ಎಲ್ಲವೂ ಶುದ್ಧವಾಗಿವೆ, ಮುಂಬೈನಲ್ಲಿ ಏನೂ ನಡೆದಿಲ್ಲ. ಏನಾದರೂ ನಡೆದಿದ್ದರೆ ದಾಖಲೆ ಏನಾದರೂ ಇದ್ದರೆ ಬಿಡುಗಡೆ ಮಾಡಲಿ. ನಾವೆಲ್ಲರೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ. ವಿರೋಧ ಪಕ್ಷದವರು ನಮ್ಮನ್ನ ಗುರಿಯಾಗಿಸಿದ್ದಾರೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. 

6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೊರೆ ಹೋದ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅವಶ್ಯಕತೆಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ, ಹೋಗಬಾರದು ಅಂತ ಕಾನೂನಿನಲ್ಲಿ‌ ಇದ್ಯಾ? ಎಂದು ಪ್ರಶ್ನಿಸಿದ್ದಾರೆ. 

'ನಾವು ರಾಜೀನಾಮೆ ಕೊಟ್ಟು ಬಂದವರು, ನಮ್ಮ ಮೇಲೆ ಬಹಳಷ್ಟು ಜನ ಹಗೆ ಸಾಧಿಸ್ತಿದ್ದಾರೆ'

ಕಾಂಗ್ರೆಸ್ ಪಕ್ಷದಿಂದ ಬಂದಿದ್ದಾರೆ ಅಂತ ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾಳೆ ಏನೂ ತೊಂದರೆ ಆಗಬಾರದು ಅಂತ ನ್ಯಾಯಾಲಯಕ್ಕೆ ಹೋಗಿದ್ದೇವೆ. ಆಪಾದನೆ ಮಾಡೋರು ಏನಾದರೂ ಇದ್ದರೆ ತೋರಿಸಲಿ ಎಂದು ಬಹಿರಂಗವಾಗಿಯೇ ಸವಾಲ್‌ ಹಾಕಿದ್ದಾರೆ. 
 

click me!