ತಂದೆಗೆ ಕೊಟ್ಟಂತೆ ನನಗೂ ಸಹಕಾರ ಕೊಡಿ: ವಿಜಯೇಂದ್ರ

Published : Feb 03, 2020, 08:49 AM ISTUpdated : Feb 03, 2020, 09:16 AM IST
ತಂದೆಗೆ ಕೊಟ್ಟಂತೆ ನನಗೂ ಸಹಕಾರ ಕೊಡಿ: ವಿಜಯೇಂದ್ರ

ಸಾರಾಂಶ

ತಂದೆಗೆ ಕೊಟ್ಟಂತೆ ನನಗೂ ಸಹಕಾರ ಕೊಡಿ: ವಿಜಯೇಂದ್ರ| ವೀರಶೈವ ಲಿಂಗಾಯತರ ಕಾರ್ಯಕ್ರಮದಲ್ಲಿ ಸಿಎಂ ಪುತ್ರ ಮನವಿ

ಬೆಂಗ​ಳೂ​ರು[ಫೆ.03]: ರಾಜ್ಯದ ರೈತರು ಹಾಗೂ ಜನರ ಪರವಾಗಿ ಕೆಲಸ ಮಾಡಲು ನಮ್ಮ ತಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ ಸಹಕಾರದಂತೆ ನನಗೂ ಸಹಕಾರ ನೀಡಿ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜ​ಯೇಂದ್ರ ಕೋರಿ​ದ್ದಾ​ರೆ.

ವೀರ​ಶೈವ ಲಿಂಗಾ​ಯತ ಯುವ​ಕರ ಸೇವಾ ಟ್ರಸ್ಟ್‌ ಭಾನು​ವಾರ ಕೆಂಗೇರಿ ಉಪ​ನ​ಗ​ರದ ಗಣೇಶ ದೇವ​ಸ್ಥಾ​ನದ ಮೈದಾ​ನ​ದ​ಲ್ಲಿ ಏರ್ಪ​ಡಿ​ಸಿದ್ದ ಡಾ.ಶಿವ​ಕು​ಮಾ​ರ ಸ್ವಾಮಿ​ ಸಂಸ್ಮ​ರಣೆ ಕಾರ್ಯ​ಕ್ರ​ಮ​ ಉದ್ಘಾ​ಟಿಸಿ ಅವರು ಮಾತ​ನಾ​ಡಿ​, ವರುಣಾ ಕ್ಷೇತ್ರದ ಮೂಲಕ ರಾಜ​ಕೀಯ ಅಂಬೆ​ಗಾ​ಲಿಟ್ಟನನಗೆ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಅವ​ಕಾಶ ದೊರೆ​ತಿದೆ. ಮುಂದಿನ ದಿನ​ಗ​ಳಲ್ಲಿ ತಂದೆಯಂತೆ ಸೇವೆ ಮಾಡಲು ನನಗೂ ಸಹ​ಕಾ​ರ, ಆಶೀ​ರ್ವಾ​ದ ನೀಡಿ ಎಂದು ಮನವಿ ಮಾಡಿ​ದರು.

ಬಿಎಸ್‌ವೈಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಪೂಜೆ

ಯಡಿ​ಯೂ​ರಪ್ಪ ಅವರು ಹಿಂದಿ​ನಿಂದಲೂ ಮಠ​ಗ​ಳೊಂದಿಗೆ ಉತ್ತಮ ಒಡ​ನಾಟ ಇಟ್ಟು​ಕೊಂಡವರು. ಸಮಾ​ಜಕ್ಕೆ ಪೂರಕವಾದ ಕೆಲ​ಸ​ಗ​ಳಿಗೆ ನೆರ​ವಾ​ಗುತ್ತಾ ಬಂದ​ವರು. ಇದೀಗ ರಾಜ್ಯ​ದಲ್ಲಿ ಒಂದೆಡೆ ಭೀಕರ ಬರ​ಗಾ​ಲ, ಮತ್ತೊಂದೆಡೆ ನೆರೆ ಮತ್ತು ಪ್ರವಾಹ ಪರಿ​ಸ್ಥಿತಿ ಇದೆ. ಈ ಸಂದ​ರ್ಭ​ದಲ್ಲಿ ಅವರು ಹೇಗೆ ಬಜೆಟ್‌ ಮಂಡಿ​ಸ​ಲಿ​ದ್ದಾರೆ ಎಂದು ರಾಜ್ಯದ ಜನರು ಎದುರು ನೋಡು​ತ್ತಿ​ದ್ದಾ​ರೆ. ಹಿಂದಿ​ನಂತೆ ತಂದೆ​ಯ​ವರು ಈ ಬಾರಿಯೂ ಉತ್ತಮ ಹಾಗೂ ರೈತ​ ಪರ ಬಜೆಟ್‌ ನೀಡ​ಲಿ​ದ್ದಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಶಾಸ​ಕರು ಮತ್ತು ಭಾವಿ ಮಂತ್ರಿ​ ಎಸ್‌.ಟಿ ಸೋಮ​ಶೇ​ಖರ್‌ ಅವರು ಯಾವುದೇ ಪಕ್ಷ​ದ​ಲ್ಲಿ​ದ್ದರೂ ಮಠ​ಗಳು ಹಾಗೂ ಸಮಾಜದ ಏಳಿಗೆ ಪರ ಕಾಳಜಿ ಹೊಂದಿ​ರು​ವ​ವರು. ಈ ಜನ​ಪರ ನಿಲು​ವು​ಗ​ಳಿಂದಲೇ ಅವರು ಗೆದ್ದಿ​ದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ