Rajya Sabha Elections: ನವಾಬ್ ಮಲ್ಲಿಕ್ ಮತ್ತು ದೇಶ್‌ಮುಖ್ ಮತದಾನ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Published : Jun 10, 2022, 12:45 PM ISTUpdated : Jun 10, 2022, 01:18 PM IST
Rajya Sabha Elections: ನವಾಬ್ ಮಲ್ಲಿಕ್ ಮತ್ತು ದೇಶ್‌ಮುಖ್ ಮತದಾನ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಸಾರಾಂಶ

ರಾಜ್ಯಸಭೆ ಚುನಾವಣೆ ನಡೆಯುವ ಉದ್ಧವ್ ಠಾಕ್ರೆ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಜೈಲಿನಲ್ಲಿರುವ  ಮಾಜಿ ಮಂತ್ರಿಗಳಾದ  ನವಾಬ್ ಮಲಿಕ್ ಹಾಗೂ ಅನಿಲ್ ದೇಶ್‌ಮುಖ್ ಅವರಿಗೆ ಒಂದು ದಿನದ ಮಟ್ಟಿಗೆ ಜಾಮೀನು ನೀಡಲು ಮಹಾರಾಷ್ಟ್ರ ಹೈಕೋರ್ಟ್ ನಿರಾಕರಿಸಿದೆ.

ನವದೆಹಲಿ(ಜೂ.10): ರಾಜ್ಯಸಭೆ ಚುನಾವಣೆ ನಡೆಯುವ  ದಿನ ಉದ್ಧವ್ ಠಾಕ್ರೆ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಜೈಲಿನಲ್ಲಿರುವ  ಮಾಜಿ ಮಂತ್ರಿಗಳಾದ  ನವಾಬ್ ಮಲಿಕ್ ಹಾಗೂ ಅನಿಲ್ ದೇಶ್‌ಮುಖ್ ಅವರಿಗೆ ಒಂದು ದಿನದ ಮಟ್ಟಿಗೆ ಜಾಮೀನು ನೀಡಿ, ಜೈಲಿನಿಂದ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.  ಈ ಮೂಲಕ ಮತದಾನ ಮಾಡಲು ಅವಕಾಶಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ನಿನ್ನೆಯಷ್ಟೆ ಮತದಾನ ಮಾಡುವ ಅರ್ಜಿಯನ್ನು ಇಡಿ ಕೋರ್ಟ್ ವಜಾ ಮಾಡಿತ್ತು. ಪಿಎಮ್ ಎಲ್ ಎ ಪ್ರಕರಣದಡಿ ಇಬ್ಬರು ಮಾಜಿ ಸಚಿವರು ಜೈಲಿನಲ್ಲಿದ್ದಾರೆ. 

ನವಾಬ್ ಮಲಿಕ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದೇ ರೀತಿಯ ಆರೋಪದಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಕೂಡ ಜೈಲಿನಲ್ಲಿದ್ದಾರೆ. ಹೀಗಾಗಿ  ಜಾರಿ ನಿರ್ದೇಶನಾಲಯ ಕೈದಿಗಳಿಗೆ ಮತದಾನ ಇಲ್ಲ ಎಂದು ವಾದ ಮಂಡಿಸಿತ್ತು ಮತ್ತು ಅರ್ಜಿ ವಜಾ ಮಾಡಿತ್ತು.  ಪಿಎಂಎಲ್‌ಎ ನಿರ್ಬಂಧ ಹೇರಿದ್ದಕ್ಕೆ ಇಬ್ಬರೂ ರಾಜಕಾರಣಿಗಳು ಈ ನಿರ್ಧಾರವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲೂ ಈಗ ಹಿನ್ನಡೆಯಾಗಿದೆ. 

Karnataka Politics: ಸಿದ್ದು ಪತ್ರ ನಾಚಿಕೆಗೇಡು: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಮಲಿಕ್ ಅವರ ವಕೀಲರು ತುರ್ತು ವಿಚಾರಣೆಯನ್ನು ಕೋರಿದರೆ, ದೇಶಮುಖ್ ಅವರ ವಕೀಲರು ಅದನ್ನು ಮಾಡಲಿಲ್ಲ. ಪಿಎಂಎಲ್‌ಎ ನ್ಯಾಯಾಲಯವು  ರಾಜ್ಯಸಭೆಗೆ ಮತ ಚಲಾಯಿಸಲು ರಾಜ್ಯ ವಿಧಾನಸಭೆಗೆ ಹೋಗಲು ನಾಯಕರಿಗೆ "ಮತ ಹಾಕಲು ಅರ್ಹತೆ ಇಲ್ಲ" ಮತ್ತು "ಹಕ್ಕು ಪಡೆಯಲು ಸಾಧ್ಯವಿಲ್ಲ" ಎಂದು ಹೇಳಿದೆ. 

ED ಮೇಲ್ಮನೆಯಲ್ಲಿ ಮತ ಚಲಾಯಿಸಲು ವಿಚಾರಣೆಯಲ್ಲಿರುವ ವ್ಯಕ್ತಿಗಳಿಗೆ ಯಾಕೆ ಹಕ್ಕು ಇಲ್ಲ ಎಂಬುದನ್ನು ವಾದಿಸಿದರೆ.  NCP ನಾಯಕರು ಎಲ್ಲಾ ಸಾಧ್ಯತೆ ಬಗ್ಗೆ ವಾದ ಮಂಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ  ವಿಚಾರಣೆಯ ಕೈದಿಗಳ ಮತದಾನದ ಹಕ್ಕುಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ಉಚ್ಚ ನ್ಯಾಯಾಲಯಗಳಲ್ಲಿ ವಿಭಿನ್ನ ದೃಷ್ಟಿಕೋನಗಳಿವೆ ಎಂಬುದು ನಿಜ. ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ, ಆದರೆ ಶಾಸನಬದ್ಧ ಹಕ್ಕು ಮತ್ತು ಮಿತಿಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿತು.

ರಾಜ್ಯಸಭೆ ಟಿಕೆಟ್: ಪ್ರಭಾವಿಗಳಿಗೂ ಮೋದಿ ಅರ್ಧಚಂದ್ರ

ಈ ವೇಳೆ ಇಬ್ಬರು ನಾಯಕರ ಪರ ವಕೀಲರು 2017 ರ ರಾಷ್ಟ್ರಪತಿ  ಚುನಾವಣೆ ವೇಳೆ ಎನ್‌ಸಿಪಿ ನಾಯಕ ಛಗನ್ ಭುಜಬಲ್ ( Chhagan Bhujbal) ಅವರನ್ನು ಜೈಲಿನಲ್ಲಿದ್ದಾಗ ಮತ ಚಲಾಯಿಸಲು ಅನುಮತಿಸಿದ ಪ್ರಕರಣವನ್ನು ಉಲ್ಲೇಖಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಾಲಯ ರಾಷ್ಟ್ರಪತಿ ಚುನಾವಣೆಗೂ ರಾಜ್ಯಸಭಾ ಚುನಾವಣೆಗೂ ಮತದಾನದ ನಡುವೆ ವ್ಯತ್ಯಾಸವಿದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ರಾಷ್ಟ್ರಪತಿ  ಚುನಾವಣೆಗಳ ಕಾಯಿದೆಯು ಅಧ್ಯಕ್ಷೀಯ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆ, 1952 ರ ಮೂಲಕ ನಿಯಂತ್ರಿಸಲ್ಪಡುತ್ತದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ಅಂಡರ್ಟ್ರಯಲ್ ಅನ್ನು ನಿಷೇಧಿಸಲು ಕಾಯಿದೆಯಡಿಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿತು.

ಈ ಇಬ್ಬರೂ ನಾಯಕರ ಮತಗಳು  ಶಿವಸೇನಾ ನೇತೃತ್ವದ ಮೈತ್ರಿಕೂಟಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ಬಹುಮುಖ್ಯ ಮತಗಳಾಗಿವೆ.  ಮಹಾರಾಷ್ಟ್ರದಲ್ಲಿ ಆರು ರಾಜ್ಯಸಭೆ ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಏಳು ಮಂದಿ ಅಭ್ಯರ್ಥಿಗಳಿದ್ದಾರೆ. ಎರಡು ದಶಕಗಳಿಗೂ ಹೆಚ್ಚಿನ ಸಮಯದ ಬಳಿಕ ಮೊದಲ ಬಾರಿಗೆ ಇಲ್ಲಿ ಸ್ಪರ್ಧೆ ನಡೆಯುತ್ತಿದೆ. ಶಿವಸೇನಾದಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಸಂಜಯ್ ರಾವತ್ ಮತ್ತು ಸಂಜಯ್ ಪವಾರ್ ಸ್ಪರ್ಧಿಸುತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಹೆಸರಿಸಿದೆ. ಕೇಂದ್ರ ಸಚಿವ ಪಿಯೂಶ್ ಗೋಯಲ್, ಅನಿಲ್ ಬೊಂಡೆ ಮತ್ತು ಧನಂಜಯ್ ಮಹಾದಿಕ್ ಕಣದಲ್ಲಿದ್ದಾರೆ. ಆಡಳಿತಾರೂಢ ಮೈತ್ರಿಯ ಎನ್‌ಸಿಪಿ ಮತ್ತು ಕಾಂಗ್ರೆಸ್ ತಲಾ ಒಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿವೆ. ಪ್ರಫುಲ್ ಪಟೇಲ್ ಹಾಗೂ ಇಮ್ರಾನ್ ಪ್ರತಾಪಗಡಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯಸಭೆ ಸೀಟು ಗೆಲ್ಲಲ್ಲು ಯಾವುದೇ ಅಭ್ಯರ್ಥಿ 42 ಮತಗಳನ್ನು ಪಡೆಯಬೇಕಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!