ಉದಯನಿಧಿ ಆಯೋಗ್ಯ, ರಾಕ್ಷಸ ವಂಶಸ್ಥ: ಈಶ್ವರಪ್ಪ

Published : Sep 06, 2023, 03:30 AM IST
ಉದಯನಿಧಿ ಆಯೋಗ್ಯ, ರಾಕ್ಷಸ ವಂಶಸ್ಥ: ಈಶ್ವರಪ್ಪ

ಸಾರಾಂಶ

ಸಿದ್ದರಾಮಯ್ಯ ಬಜೆಟ್‌ ಮಂಡನೆ ಸೇರಿ ಹಲವು ಕಡೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಇಂಡಿಯಾ ಒಕ್ಕೂ​ಟ​ದ​ಲ್ಲಿ​ರುವ, ಡಿಎಂಕೆ ಸರ್ಕಾ​ರ​ದಲ್ಲಿ ಸಚಿ​ವ​ರಾ​ಗಿ​ರುವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನೆಂದು ಇಬ್ಬ​ರೂ ತಿಳಿಸಬೇಕು ಎಂದು ಆಗ್ರ​ಹಿ​ಸಿ​ದ​ ಮಾಜಿ ಉಪ ಮುಖ್ಯ​ಮಂತ್ರಿ ಕೆ.ಎಸ್‌.ಈಶ್ವರಪ್ಪ 

ತುಮಕೂರು(ಸೆ.06): ತಮಿ​ಳು​ನಾಡು ಮುಖ್ಯ​ಮಂತ್ರಿ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಒಬ್ಬ ಅಯೋಗ್ಯ. ಅವರು ರಾಕ್ಷಸ ವಂಶ​ದ​ವರು ಅಂತ ಈಗ ಗೊತ್ತಾ​ಗಿ​ದೆ ಎಂದು ಮಾಜಿ ಉಪ ಮುಖ್ಯ​ಮಂತ್ರಿ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದಿದ್ದಾರೆ. 

ನಗ​ರ​ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥ ಅಯೋಗ್ಯ ಮಂತ್ರಿ ತಮಿಳುನಾಡಿನಲ್ಲಿ ಇದ್ದಾರೆ ಅನ್ನುವುದು ಒಂದು ಹೇಳಿಕೆಯಿಂದ ಗೊತ್ತಾಗಿದೆ ಎಂದು ತಿಳಿ​ಸಿ​ದ​ರು. 

ಉದಯನಿಧಿ ಇನ್ನೂ ಬಚ್ಚಾ, ಕಣ್ಣು ತೆರೆದು ಜಗತ್ತು ನೋಡಿಲ್ಲ: ಮುತಾಲಿಕ್‌

ಕರ್ನಾಟಕದ ಮುಖ್ಯ​ಮಂತ್ರಿ ಹಾಗೂ ಉಪ ಮುಖ್ಯ​ಮಂತ್ರಿ ಇಬ್ಬರು ಬಹಳ ದೈವಭಕ್ತರು. ಇವ​ರಲ್ಲಿ ಒಬ್ಬರು ನೊಣವಿನಕೆರೆ ಸ್ವಾಮೀಜಿ ಬಳಿ ಹೋಗಿ ಅವರ ಬಳಿ ಆಶೀರ್ವಾದ ಪಡೆಯುತ್ತಾರೆ. ಡಿ.ಕೆ.​ಶಿ​ವ​ಕು​ಮಾರ್‌ ಇಡೀ ಜೀವನ ಅವರು ಹೇಳಿದಂತೆ ಕೇಳುತ್ತೇನೆ ಅಂತಾರೆ. ಸಿದ್ದರಾಮಯ್ಯ ಬಜೆಟ್‌ ಮಂಡನೆ ಸೇರಿ ಹಲವು ಕಡೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಇಂಡಿಯಾ ಒಕ್ಕೂ​ಟ​ದ​ಲ್ಲಿ​ರುವ, ಡಿಎಂಕೆ ಸರ್ಕಾ​ರ​ದಲ್ಲಿ ಸಚಿ​ವ​ರಾ​ಗಿ​ರುವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನೆಂದು ಇಬ್ಬ​ರೂ ತಿಳಿಸಬೇಕು ಎಂದು ಆಗ್ರ​ಹಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ