ಕಾಂಗ್ರೆಸ್‌ನಿಂದ ಕೆಟ್ಟೆ ಎಂದು ಎಚ್‌ಡಿಕೆಗೆ ಸಿಟಿ ರವಿ ಸಲಹೆ ಜತೆಗೆ ಕಿವಿಮಾತು..!

Published : Dec 05, 2020, 03:22 PM ISTUpdated : Dec 05, 2020, 03:32 PM IST
ಕಾಂಗ್ರೆಸ್‌ನಿಂದ ಕೆಟ್ಟೆ ಎಂದು ಎಚ್‌ಡಿಕೆಗೆ ಸಿಟಿ ರವಿ ಸಲಹೆ ಜತೆಗೆ ಕಿವಿಮಾತು..!

ಸಾರಾಂಶ

ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿಗೆ ಸಿ.ಟಿ. ರವಿ ಅವರು  ಗಾದೆ ಮಾತು ಮೂಲಕ ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿ, (ಡಿ.05): ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನವರ ಸಹವಾಸ ಮಾಡಿ ನಾವು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಟೀಂ ನನ್ನ 12 ವರ್ಷಗಳ ಗುಡ್ ವಿಲ್ ನ್ನು ಹಾಳು ಮಾಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

'ದೇವೇಗೌಡ್ರ ಭಾವನಾತ್ಮಕ, ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್‌ನಿಂದ ನಾನು ಟ್ರ್ಯಾಪ್ ಆಗಿದ್ದೇನೆ'

ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿಯವರು ಬಿಜೆಪಿ ಜೊತೆಗಿದ್ದರೆ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದರು.

ಕುಮಾರಸ್ವಾಮಿ ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ. ಚಂಚಲ ಮನಸ್ಸು ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಉರಿಯುವ ಮನೆ ಅಂತಾ ಬಹಳ ದಿನಗಳ ಹಿಂದೆ ಅಂಬೇಡ್ಕರ್ ಹೇಳಿದ್ರು. ಕೆಟ್ಟ ಮೇಲೆಯಾದರೂ ನಿಮಗೆ ಬುದ್ದಿ ಬಂದಿದೆ ಇನ್ಮೇಲೆ ಎಂದಿಗೂ ಅವರ ಸಹವಾಸ ಮಾಡಬೇಡಿ, ನಿಮ್ಮವರಿಗೂ ಹೇಳಿ ಎಂದು ಸಲಹೆ ನೀಡಿದರು.

ಈ ನಿಲುವು ಸದಾಕಾಲ ಇರಲಿ. ಚಂಚಲ ಮನಸ್ಥಿತಿಗೊಳಗಾಗಲ್ಲ ಅಂದುಕೊಂಡಿದೀನಿ. ನಮ್ಮದು ರಾಷ್ಟ್ರವಾದಿ ಪಕ್ಷ. ಯಾರ ಬಗ್ಗೆಯೂ ಪೂರ್ವಾಗ್ರಹ ಅತಿಪ್ರೇಮ ಇಲ್ಲ. ದೇಶದ ಪರವಾಗಿ ಕೆಲಸ ಮಾಡುತ್ತೇವೆ. ಭಾರತ ಮಾತಾ ಕಿ ಜೈ ಎಂದು ನಮ್ಮ ಜೊತೆ ಬಂದ್ರೆ ಎಲ್ಲರೂ ನಮ್ಮವರೇ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?