
ಬ್ಯಾಡಗಿ (ಏ.23) : ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸುವ ದೃಢ ನಿರ್ಧಾರದಿಂದ ದೇಶದಲ್ಲಿ ಎಸ್ಸಿ-ಎಸ್ಟಿಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಿ ಬಾಬಾಸಾಹೇಬ್ ಅಂಬೇಡ್ಕರ್ ಆಶಯ ಈಡೇರಿಸಿದೆ ಎಂದು ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಹೀಗಾಗಿ ಈ ಎರಡು ಸಮುದಾಯಗಳು ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ಕಲ್ಲೇದೇವರ, ಛತ್ರ, ಅಳಲಗೇರಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. ಆರು ದಶಕಗಳಿಂದ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಎಸ್ಸಿ-ಎಸ್ಟಿಜನಾಂಗಕ್ಕೆ ನ್ಯಾಯ ಕೊಡಸಲಿಲ್ಲ. ಹೀಗಾಗಿ ಎರಡು ಸಮುದಾಯಗಳಿಗೆ ಸಾಮಾಜಿಕ ನ್ಯಾಯದಡಿ ಇಂದಿಗೂ ಯಾವುದೇ ಸೌಲಭ್ಯಗಳು ಸಿಗದೇ ಪರದಾಡುವಂತೆ ಮಾಡಿದರು. ಆದರೆ ಬಿಜೆಪಿ ಜನಸಂಖ್ಯೆಗೆ ಆಧಾರವಾಗಿ ಎರಡು ಸಮುದಾಯಗಳಿಗೆ ಸಿಗಬೇಕಾದ ಮೀಸಲಾತಿ ಸೌಲಭ್ಯ ಕಲ್ಪಿಸಿದೆ ಎಂದರು.
ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ
ಎಸ್ಸಿ-ಎಸ್ಟಿಕಾಲನಿಗಳಿಗೆ ಭೇಟಿ ನೀಡಿದ ಬಳ್ಳಾರಿ, ಬಿಜೆಪಿ ಸರ್ಕಾರ ನಿಮ್ಮಗೆ ಎಲ್ಲ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದೆ. ತಮ್ಮ ಕಾಲನಿಗಳು ಮೊದಲು ಹೇಗಿದ್ದವು. ಇದೀಗ ಹೇಗಾಗಿವೆ. ಇವೆರಡನ್ನೂ ತುಲಾನಾತ್ಮಕವಾಗಿ ಅಳೆದು ತೂಗಿ ನೋಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಶಿವಬಸಣ್ಣ ಕುಳೇನೂರ, ನಾಗರಾಜ ಬಳ್ಳಾರಿ, ವಿಜಯಭರತ್ ಬಳ್ಳಾರಿ, ಈರಣ್ಣ ಬಳ್ಳಾರಿ, ವೈ.ಎನ್. ಕರೇಗೌಡ್ರ, ದ್ಯಾಮನಗೌಡ ಪೂಜಾರ, ಸುರೇಶ ಉದ್ಯೋಗಣ್ಣನವರ, ಎಸ್.ಎನ್. ಯಮನಕ್ಕನವರ, ಸಂತೋಷ ದೊಡ್ಮನಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.