ಪಾರ್ಲಿಮೆಂಟ್‌ನಲ್ಲಿ ಸಂಸದರ ಆಕ್ಸಿಡೆಂಟ್‌: 2 ಎಂಪಿಗಳು ಆಸ್ಪತ್ರೆಗೆ, ರಾಹುಲ್‌ ಗಾಂಧಿ ಮೇಲೆ ಕೇಸ್‌!

Published : Dec 20, 2024, 04:41 AM IST
ಪಾರ್ಲಿಮೆಂಟ್‌ನಲ್ಲಿ ಸಂಸದರ ಆಕ್ಸಿಡೆಂಟ್‌: 2 ಎಂಪಿಗಳು ಆಸ್ಪತ್ರೆಗೆ, ರಾಹುಲ್‌ ಗಾಂಧಿ ಮೇಲೆ ಕೇಸ್‌!

ಸಾರಾಂಶ

ಸಂಸದರಿಗೆ ಹಲ್ಲೆ ಆರೋಪ ಸಂಬಂಧ ರಾಹುಲ್ ಮೇಲೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಕೂಡ ಬಿಜೆಪಿ ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ನಡುವೆ, ಮಹಿಳಾ ಬಿಜೆಪಿ ಸಂಸದರೊಬ್ಬರು ಕೂಡ ರಾಹುಲ್ ತಮ್ಮ ದೇಹ ತಾಗುವಂತೆ ನಿಂತು ಅಸಭ್ಯವಾಗಿ ವರ್ತಿಸಿದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.  

ನವದೆಹಲಿ(ಡಿ.20): ಆಡಳಿತ- ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ, ರಾಜಕೀಯ ಸಮರಕ್ಕೆ ಸದಾ ಸಾಕ್ಷಿಯಾಗುವ  ಭವನ ಗುರುವಾರ ಕಂಡುಕೇಳರಿಯದ ಹಿಂದೆಂದೂ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ನೀಡಿದ್ದ ಹೇಳಿಕೆ ಪರ-ವಿರುದ್ಧವಾಗಿ ಗುರುವಾರ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ತಳ್ಳಾಡಿಕೊಂಡು ದೈಹಿಕ ಸಂಘರ್ಷ ನಡೆಸಿದ್ದಾರೆ. 

ಈ ಘಟನೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರನ್ನು ಬಲವಾಗಿ ತಳ್ಳಿದಾಗ ಇಬ್ಬರು ಸಂಸದರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪ ತಳ್ಳಿಹಾಕಿರುವ ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ, 'ಬಿಜೆಪಿ ಸದಸ್ಯರೇ ನಮ್ಮನ್ನು ತಳ್ಳಿ ಸದನ ಪ್ರವೇಶಕ್ಕೆ ಅಡ್ಡಿಪಡಿಸಿದರು. ಅಂಬೇಡ್ಕರ್‌ಗೆ ಅಮಿತ್ ಶಾ ಮಾಡಿದ ಅವಮಾನ ಪ್ರಕರಣದ ದಿಕ್ಕು ತಪ್ಪಿಸಲು ದಾಳಿಯ ನೆಪ ಹೆಣೆಯಲಾಗಿದೆ' ಎಂದು ಪ್ರತ್ಯಾರೋಪ ಮಾಡಿದ್ದಾರೆ. 

ಅಂಬೇಡ್ಕರ್‌ ಬಿಟ್ಟು ದೇವರ ಜಪ ಮಾಡಿ: ಅಮಿತ್‌ ಶಾ ಹೇಳಿಕೆಗೆ ಭಾರೀ ಆಕ್ರೋಶ

ಈ ನಡುವೆ, ಸಂಸದರಿಗೆ ಹಲ್ಲೆ ಆರೋಪ ಸಂಬಂಧ ರಾಹುಲ್ ಮೇಲೆ ಪೊಲೀಸರು ಎಫ್‌ಐಆ‌ರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಕೂಡ ಬಿಜೆಪಿ ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ನಡುವೆ, ಮಹಿಳಾ ಬಿಜೆಪಿ ಸಂಸದರೊಬ್ಬರು ಕೂಡ ರಾಹುಲ್ ತಮ್ಮ ದೇಹ ತಾಗುವಂತೆ ನಿಂತು ಅಸಭ್ಯವಾಗಿ ವರ್ತಿಸಿದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಇದರ ನಡುವೆಯೇ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಕೊಲೆ ಯತ್ನ ಹಾಗೂ ಹಲ್ಲೆ ದೂರು ನೀಡಿದೆ. ಆಗಿದ್ದೇನು?: ಸಂಸತ್ತಿನ ಹೊರಗಿನ ಮಕರ ದ್ವಾರದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆ‌ರ್. ಅಂಬೇಡ್ಕ‌ರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯ ಪರ-ವಿರುದ್ಧ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. 

ಕಾಂಗ್ರೆಸ್ ಸಂಸದರು ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ಸದಸ್ಯರು ಕಾಂಗ್ರೆಸ್ ಸಂವಿಧಾನ ವಿರೋಧಿ ಎಂದು ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದರು. ಪ್ರತಿಭಟನೆ ಬರೀ ದ್ವಾರಕ್ಕೆ ಸೀಮಿತವಾ ಗಿರದೇ ಪಕ್ಕದಲ್ಲಿದ್ದ ಎತ್ತರದ ಕಟ್ಟೆ ಹತ್ತಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಉಭಯ ಪಕ್ಷಗಳ ಸಂಸದರು ಎದುರು ಬದುರಾದಾಗ ಗಲಾಟೆ ತೀವ್ರಗೊಂಡಿದೆ. ಸಂಸತ್ತಿನ ಮಕರದ್ವಾರಕ್ಕೆ ಅಡ್ಡ ನಿಂತು ಸಂಸದರು ಪ್ರತಿಭಟನೆ ನಡೆಯುವಾಗ ರಾಹುಲ್ ಗಾಂಧಿ ಅವರು ಸಂಸತ್ತಿನ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಅವರನ್ನು ಬಿಜೆಪಿಯ ಕೆಲವು ಸಂಸದರು ತಳ್ಳಿ, ಸಂಸತ್ ಭವನದ ಒಳಗೆ ಹೋಗಲು ಅಡ್ಡಿಪಡಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಕೂಡ ಬಿಜೆಪಿಗರನ್ನು ತಳ್ಳಿದರು ಎನ್ನಲಾಗಿದ್ದು, ಬಿಜೆಪಿ ಸಂಸದ ಮುಕೇಶ್ ರಜಪೂತ್ ಅವರು ಆಯತಪ್ಪಿ ಒಡಿಶಾದ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಮೇಲೆ ಬಿದ್ದಿದ್ದಾರೆ. ಸಾರಂಗಿ ಅವರ ತಲೆಗೆ ಆಗ ಗಾಯಗಳಾಗಿವೆ. ಅವರನ್ನು ಹಾಗೂ ರಜಪೂತ್ ಅವರನ್ನು ಆ ಆಸತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಾರಂಗಿ ತಲೆಗೆ ಸ್ಟಿಚ್ ಹಾಕಲಾಗಿದೆ. 

ರಾಹುಲ್ ತಳ್ಳಿದರು- ಸಾರಂಗಿ: 

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ 69 ವರ್ಷದ ಸಾರಂಗಿ, 'ನಮ್ಮನ್ನು ರಾಹುಲ್ ಗಾಂಧಿ ತಳ್ಳಿದರು.ಬಿದ್ದು ತಲೆಗೆ ಏಟಾಗಿದೆ' ಎಂದರು. ರಜಪೂತ್ ಮಾತನಾಡಿ, 'ನನ್ನನ್ನು ರಾಹುಲ್ ತಳ್ಳಿದಾಗ ನಾನು ಸಾರಂಗಿ ಮೇಲೆ ಬಿದ್ದೆ. ಆಗ ಸಾರಂಗಿ ಕೂಡ ಬಿದ್ದ ಕಾರಣ ಅವರ ತಲೆಗೆ ಪೆಟ್ಟಾಯಿತು' ಎಂದರು. 

ಬಿಜೆಪಿ ಮಹಿಳಾ ಸಂಸದೆ ಫಾಂಗೋನ್ ಕೊನ್ಯಾಕ್ ಮಾತನಾಡಿ, 'ರಾಹುಲ್ ಬಲವಂತವಾಗಿ ಬಿಜೆಪಿಗರ ಗುಂಪಿನಲ್ಲಿ ನುಗ್ಗಿ ನನ್ನ ದೇಹ ತಾಗುವಂತೆ ನಿಂತರು. ಇದರಿಂದ ನನ್ನ ಗೌರವಕ್ಕೆ ಭಂಗ ಬಂದಿದೆ' ಎಂದರು, ಇನ್ನೂ ಕೆಲವು ಕೇಂದ್ರ ಸಚಿವರು ರಾಹುಲ್ ದುರ್ವತ್ರನೆ ತೋರಿದರು ಎಂದು ಆರೋಪಿಸಿದರು. 

ತಳ್ಳಿದ್ದು ಬಿಜೆಪಿಗರು- ರಾಗಾ: 

ಆದರೆ ಆರೋಪ ನಿರಾಕರಿಸಿದರ ರಾಹುಲ್, 'ನಾನು ಸಂಸದ. ನನಗೆ ಸಂಸತ್ ಭವನದಲ್ಲಿ ಪ್ರವೇಶಿಸುವ ಹಕ್ಕಿದೆ. ಪ್ರತಿಭಟನೆ ವೇಳೆ ಮಕರದ್ವಾರಕ್ಕೆ ಅಡ್ಡ ನಿಂತು ನನ್ನ ಪ್ರವೇಶವನ್ನು ಬಿಜೆಪಿಗರು ತಡೆದರು ಹಾಗೂ ತಳ್ಳಿದರು. ಆಗ ಪರಸ್ಪರ ತಳ್ಳಾಟ ನೂಕಾಟ ನಡೆಯಿತು' ಎಂದರು. 

ನನ್ನನ್ನೂ ತಳ್ಳಿದರು- ಖರ್ಗೆ: 

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದು, 'ನನ್ನನ್ನೂ ಬಿಜೆಪಿ ಸದಸ್ಯರು ತಳ್ಳಿದರು. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದ್ದು, ನಾನು ನಿಲ್ಲುವ ಬದಲು ಕುಳಿತು ಪ್ರತಿಭಟನೆ ನಡೆಸಿದೆ. ಇದು ನನ್ನ ಮೇಲೆ ಮಾತ್ರವಲ್ಲ, ವಿರೋಧ ಪಕ್ಷದ ನಾಯಕ, ರಾಜ್ಯಸಭೆ ಮತ್ತು ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ' ಎಂದು ಲೋಕಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. 

ಪ್ರಧಾನಿಯಿಂದ ಆರೋಗ್ಯ ವಿಚಾರಣೆ: 

ಪ್ರಧಾನಿ ನರೇಂದ್ರ ಮೋದಿ ಅವರು ಗಾಯಾಳು ಸಂಸದರಾದ ಸಾರಂಗಿ ಹಾಗೂ ರಜಪೂತ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಏಕ ಚುನಾವಣೆಯ ಮಸೂದೆ ಮಂಡನೆ, ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಿಪಕ್ಷ ಕಿಡಿ

ಬಿಜೆಪಿಗರಿಂದಾಗಿ ನನ್ನ ಕಾಲಿಗೆ ಗಾಯ: ಖರ್ಗೆ 

ಬಿಜೆಪಿಗರು ತಳ್ಳಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನನ್ನ ಮೊಣಕಾಲಿಗೆ ಗಾಯ ಆಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿ ಕಾರ್ಜುನ ಖರ್ಗೆ ಅವರು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ.

ರಾಹುಲ್‌ ತಾಗಿಸಿದರು ದೇಹ: ರಾಗಾ ನಡತೆ ಬಗ್ಗೆ ಸಂಸದೆ ಸಂದೇಹ

ಸಂಸತ್ ಪ್ರವೇಶ ವೇಳೆ ರಾಹುಲ್ ಗಾಂಧಿ ನನ್ನ ಜತೆ ಅಸಭ್ಯವಾಗಿ ನಡೆದು ಕೊಂಡರು. ನನ್ನ ದೇಹಕ್ಕೆ ತಾಗಿಕೊಂಡು ಅಸಭ್ಯವಾಗಿ ನಿಂತು ಘೋಷಣೆಗಳನ್ನು ಕೂಗದಂತೆ ಎಚ್ಚರಿಸಿದರು. ನನಗೆ ತಾಗಿಕೊಂಡು ನಿಂತಿದ್ದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ ಎಂದು ನಾಗಾಲ್ಯಾಂಡ್‌ನ ಬಿಜೆಪಿಯ ದಲಿತ ಸಂಸದೆ ಫಾಂಗ್ವಾನ್ ಕೊನ್ಯಾಕ್ ಆರೋಪಿಸಿದ್ದಾರೆ. ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದೆ. 

ಸಂಸತ್ ದ್ವಾರದಲ್ಲಿ ಪ್ರತಿಭಟನೆ ನಿಷೇಧ ಸಂಸತ್ ದ್ವಾರದಲ್ಲಿ ಗುರುವಾರ ಬಿಜೆಪಿ-ಕಾಂಗ್ರೆಸ್ ಸದಸ್ಯರ ಘರ್ಷಣೆ ನಡೆದ ಕಾರಣ, ಇನ್ನು ಮುಂದೆ ಸಂಸತ್ತಿನ ದ್ವಾರದಲ್ಲಿ ಪ್ರತಿಭಟನೆ ನಿಷೇಧಿಸಿ ಲೋಕಸಭೆ ಸ್ಪೀಕ‌ರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!