ಬಿಜೆಪಿ ನಾಯಕರ ಷಡ್ಯಂತ್ರದಿಂದ ಜೈಲು ಪಾಲಾದೆ ಎಂದು ಕಣ್ಣೀರಿಟ್ಟ ಶಾಸಕ ನಾಗೇಂದ್ರ!

By Girish GoudarFirst Published Oct 17, 2024, 6:27 PM IST
Highlights

ಮುಂದಿನ ದಿನಗಳಲ್ಲಿ ನೀವು ನೋಡ್ತಿರಿ, ಈ ಹಗರಣ ಅಂತ ಬಿಜೆಪಿಯ ಯಾರು ಯಾರು ಮಾಡ್ತಿದಾರಲ್ಲ ಅವರನ್ನು ಸುತ್ತಿಕೊಳ್ಳುತ್ತದೆ. ಅವರೆಲ್ಲರ ಹೆಸರನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲು ಆಗ್ತಾರೆ ನೋಡ್ತಾ ಇರಿ ಎಂದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ 
 

ಬಳ್ಳಾರಿ(ಅ.17):  ನಗರದಲ್ಲಿ ಇಂದು(ಗುರುವಾರ) ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಭಾವುಕತೆಯ ಕಣ್ಣೀರು ಹಾಕಿದ್ದಾರೆ. ನಾನು ತಪ್ಪೇ ಮಾಡಿಲ್ಲ, ಇದೆಲ್ಲಾ ಸುಳ್ಳು ಆರೋಪ, ಸಣ್ಣ ದೋಷ ಇಲ್ಲದೇ ಹೊರ ಬರುವೆ ಎಂದು ಕಣ್ಣೀರು ಹಾಕಿದ್ದಾರೆ. 

ಪರಪ್ಪನ ಅಗ್ರಹಾರದ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ ಎಂದು ಶಾಸಕ ಬಿ. ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿರುವೆ ಎಂದು ಕೆಲವರು ನಂಬಿದ್ದಾರೆ. ಇದು ಸುಳ್ಳು ಎಂದು ನಾನು ಯಾರನ್ನೂ ನಂಬಿಸಬೇಕಿಲ್ಲ. ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ‌ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ‌. ನಾನು ಹಲವು ಬಾರಿ ಜೈಲು‌ ನೋಡಿದ್ದೇನೆ. ಅವನಮ್ಮನ್, ನಿಮ್ಮ ನಾಯಕ, ಇಂತ ಜೈಲಿಗೆ ಯಾವುದಕ್ಕೂ ಹೆದರಿ ಬೀಳಲ್ಲ. ಆದರೇ ಒಂದು ಸುಳ್ಳು ತಗೊಂಡು ಬಂದು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. 

Latest Videos

ಜೈಲಿಂದ ನಾಗೇಂದ್ರ ರಿಲೀಸ್‌: ಬಳ್ಳಾರಿಯ ಕನಕ ದುರ್ಗಮ್ಮ ದೇವಿಗೆ 101 ತೆಂಗಿನಕಾಯಿ ಒಡೆದು ಅಭಿಮಾನಿಗಳ ಸಂಭ್ರಮ!

ಮುಂದಿನ ದಿನಗಳಲ್ಲಿ ನೀವು ನೋಡ್ತಿರಿ, ಈ ಹಗರಣ ಅಂತ ಬಿಜೆಪಿಯ ಯಾರು ಯಾರು ಮಾಡ್ತಿದಾರಲ್ಲ ಅವರನ್ನು ಸುತ್ತಿಕೊಳ್ಳುತ್ತದೆ. ಅವರೆಲ್ಲರ ಹೆಸರನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲು ಆಗ್ತಾರೆ ನೋಡ್ತಾ ಇರಿ ಎಂದು ಹೇಳಿದ್ದಾರೆ. 

click me!