ಎಟಿ​ಆರ್‌, ಮಂಜು, ಸ್ವರೂಪ್‌ ‘ಕಾಂಗ್ರೆಸ್‌’ ಸಂಪ​ರ್ಕ​ದ​ಲ್ಲಿ​ದ್ದಾ​ರೆ: ಡಿ.ಕೆ.ಶಿವಕುಮಾರ್‌

Published : Mar 02, 2023, 01:00 AM IST
ಎಟಿ​ಆರ್‌, ಮಂಜು, ಸ್ವರೂಪ್‌ ‘ಕಾಂಗ್ರೆಸ್‌’ ಸಂಪ​ರ್ಕ​ದ​ಲ್ಲಿ​ದ್ದಾ​ರೆ: ಡಿ.ಕೆ.ಶಿವಕುಮಾರ್‌

ಸಾರಾಂಶ

ಟಿಕೆ​ಟ್‌​ಗಾಗಿ ಮಾಜಿ ಸಚಿವ ಎ.ಮಂಜು ಜೆಡಿ​ಎಸ್‌ ಜತೆಗೆ ರಾಜಿ​ಯಾ​ಗಿ​ದ್ದರೂ ಅವರು ನಮ್ಮ ಜತೆಗೂ ಸಂಪ​ರ್ಕ​ದ​ಲ್ಲಿ​ದ್ದಾರೆ. ಶಾಸಕ ಎ.ಟಿ.​ರಾ​ಮ​ಸ್ವಾಮಿ, ಹಾಸನದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಅವರ ಜತೆಗೂ ಮಾತ​ನಾ​ಡಿ​ದ್ದೇವೆ. 

ಹಾಸನ (ಮಾ.02): ಟಿಕೆ​ಟ್‌​ಗಾಗಿ ಮಾಜಿ ಸಚಿವ ಎ.ಮಂಜು ಜೆಡಿ​ಎಸ್‌ ಜತೆಗೆ ರಾಜಿ​ಯಾ​ಗಿ​ದ್ದರೂ ಅವರು ನಮ್ಮ ಜತೆಗೂ ಸಂಪ​ರ್ಕ​ದ​ಲ್ಲಿ​ದ್ದಾರೆ. ಶಾಸಕ ಎ.ಟಿ.​ರಾ​ಮ​ಸ್ವಾಮಿ, ಹಾಸನದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಅವರ ಜತೆಗೂ ಮಾತ​ನಾ​ಡಿ​ದ್ದೇವೆ. ಹಾಸನ ಜಿಲ್ಲೆಯ ಕಾಂಗ್ರೆಸ್‌ ಟಿಕೆಟ್‌ ಮಾ.8ರ ನಂತರ ಘೋಷ​ಣೆ ಮಾಡಲಾಗುವುದು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ​ದ​ರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಪ್ರಜ್ವಲ್‌ ರೇವ​ಣ್ಣಗೆ ಸಂಬಂಧಿ​ಸಿದ ಕೇಸ್‌ ಹೈಕೋರ್ಚ್‌ನಲ್ಲಿರುವುದರಿಂದ ಎ.ಮಂಜುಗೆ ಜೆಡಿಎಸ್‌ನವರು ಟಿಕೆಟ್‌ ಘೋಷಿಸಿ​ದ್ದಾರೆ. ರೇವಣ್ಣ ಮತ್ತು ಅವರ ಕುಟುಂಬ, ಮಕ್ಕಳು ಎ.ಮಂಜು ಜೊತೆ ಮಾತನಾಡುತ್ತಿದ್ದಾರೆ. ಎ.ಮಂಜು ಟಿಕೆ​ಟ್‌​ಗಾಗಿ ಈ ಕೇಸಲ್ಲಿ ರಾಜಿಯಾಗಿದ್ದಾರೆ. ಆದರೂ ಅಧಿ​ಕೃತವಾಗಿ ಆ ಕೇಸ್‌ ವಾಪಸ್‌ ಪಡೆಯಲು ಆಗುವುದಿಲ್ಲ ಎಂದು ಡಿ.ಕೆ.​ಶಿ​ವ​ಕು​ಮಾರ್‌ ಅಭಿ​ಪ್ರಾ​ಯ​ಪ​ಟ್ಟ​ರು.

ರಾಜ್ಯ ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಏನೂ ಇಲ್ಲ: ಡಿ.ಕೆ.ಶಿವಕುಮಾರ್‌

ಎ.ಮಂಜು ನನ್ನ ಸ್ನೇಹಿತ. ನಾನು ಪಕ್ಷದ ಅಧ್ಯಕ್ಷಾಗಿ ಅವರ ಜೊತೆ ಮಾತನಾಡಿದ್ದೇನೆ. ರಾಜಕೀಯದಲ್ಲಿ ಚರ್ಚೆ ಸಾಮಾನ್ಯ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಕೂಡ ಮಾತನಾಡಿದ್ದಾರೆ. ಅವರ ಪಕ್ಷ ಸೇರ್ಪಡೆ ಬಗ್ಗೆಯೂ ನಿರ್ಧಾರ ಮಾಡಲಾಗುತ್ತದೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಅವರು ಸೇರ್ಪಡೆಗೊಳ್ಳಲಿದ್ದಾರೆ. ಹಾಸನ ಕ್ಷೇತ್ರದ ಜೆಡಿಎಸ್‌ ಮುಖಂಡ ಎಚ್‌.ಪಿ.ಸ್ವರೂಪ್‌ ಜೊತೆ ಕೂಡ ಮಾತುಕತೆ ನಡೆಸುತ್ತಿದ್ದೇವೆ. ಅವರು ಕೂಡ ಶೀಘ್ರ ನಿರ್ಧಾರ ತಿಳಿಸಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ವಿಚಾರವಾಗಿ ಇದೇ ತಿಂಗಳು 7 ಮತ್ತು 8ರಂದು ಸ್ಕ್ರೀನಿಂಗ್‌ ಕಮಿಟಿ ಸಭೆ ಇದೆ. ಸಭೆ ಬಳಿಕ ಪಟ್ಟಿಬಿಡುಗಡೆ ಮಾಡಲಾಗುವುದು ಎಂದರು.

ಭಾವ​ನಾ​ತ್ಮಕ ಮಾತು ನಿಲ್ಲಿ​ಸ​ಲಿ: ಪ್ರಧಾನಿ ಮೋದಿ ಅವರು ನಿಜಲಿಂಗಪ್ಪ ವಿಚಾರವಾಗಿ ಮತನಾಡುವುದಕ್ಕಿಂತ ಮೊದಲು ಆಡ್ವಾ​ಣಿ, ಮುರುಳಿ ಮನೋಹರ ಜೋಷಿ ಯಾರು? ಅವರಿಂದ ಮೇಲೆ ಬಂದು ಕೊನೆಗೆ ಅವರಿಗೆ ಏನು ಮಾಡಿದೆ ಎಂಬು​ದನ್ನು ಮೊದಲು ತಿಳಿ​ದು ಮಾತ​ನಾ​ಡ​ಲಿ. ವೀರೇಂದ್ರ ಪಾಟೀಲ್‌ ಕುಟುಂಬಕ್ಕೆ ಕಾಂಗ್ರೆಸ್‌ ಪಕ್ಷ ಸಹಕಾರ ಮಾಡಿದೆ ಎಂದ ಡಿ.ಕೆ.​ಶಿ​ವ​ಕು​ಮಾರ್‌, ವೀರಶೈವ ಲಿಂಗಾಯತ ಮತ ಪಡೆಯುವ ದೃಷ್ಟಿಯಿಂದ ಪ್ರಧಾನಿ ಪಾಟೀಲ್‌, ನಿಜ​ಲಿಂಗಪ್ಪ ಕುರಿತು ಹೇಳಿಕೆ ಕೊಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಉದ್ಯೋಗ, ಆದಾಯ ಹೆಚ್ಚಳದ ಬಗ್ಗೆ ಮಾತನಾಡಲಿ. ಭಾವನಾತ್ಮಕ ಮಾತುಗಳನ್ನು ನಿಲ್ಲಿಸಲಿ ಎಂದರು.

ಮೋದಿಯಿಂದ ದಲಿತ ಮುಖಂಡನಿಗೆ ಅವಮಾನ: ಪ್ರಧಾನಿ ಮೋದಿ ಅವರು ದಲಿತ ನಾಯಕ ಮಲ್ಲಿ​ಕಾ​ರ್ಜುನ ಖರ್ಗೆ ಅವ​ರಿಗೆ ಅವ​ಮಾನ ಮಾಡಿ​ದ್ದಾರೆ. ಎಐಸಿಸಿ ಅಧ್ಯಕ್ಷರಾಗಿ​ರುವ ಖರ್ಗೆ ಅವ​ರನ್ನು ರಬ್ಬರ್‌ ಸ್ಟ್ಯಾಂಪ್‌ ಎಂದು ಕರೆದು ಒಬ್ಬ ರಾಷ್ಟ್ರೀಯ ಪಕ್ಷ​ದ ಅಧ್ಯಕ್ಷರಿಗೆ ಅವ​ಹೇ​ಳನ ಮಾಡಿ​ದ್ದಾರೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಆರೋ​ಪಿ​ಸಿ​ದ​ರು.

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

ಬುಧ​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ನೆಹರೂ, ಇಂದಿರಾಗಾಂಧಿ​, ರಾಜೀವ್‌ ಗಾಂಧಿ​, ರಾಹುಲ್‌ ಗಾಂ​ಧಿ ಇನ್ನಿತರ ಮಹಾನ್‌ ನಾಯಕರು ಕೂತ ಜಾಗದಲ್ಲಿ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಈಗ ಆಸೀ​ನ​ರಾ​ಗಿ​ದ್ದಾ​ರೆæ. ದಲಿತ ನಾಯಕರಾಗಿ, ಗುಲ್ಬರ್ಗ ಮುನ್ಸಿಪಲ್‌ ಸದಸ್ಯರಾಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ, 9 ಬಾರಿ ಶಾಸಕರು, 2 ಬಾರಿ ಸಂಸದರಾಗಿ, ಪ್ರಸ್ತುತ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸ್ವಂತ ಸಾಮರ್ಥ್ಯದಿಂದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಅವ​ರು ವರ್ಚ​ಸ್ಸಿ​ನಲ್ಲಿ ತಮಗೆ ಪೈಪೋಟಿ ನೀಡು​ತ್ತಿ​ದ್ದಾ​ರೆಂಬ ಕಾರ​ಣ​ಕ್ಕಾಗಿ ಅವರ ವಿರುದ್ಧ ಮಾತನಾಡಿರುವುದು ಖಂಡ​ನೀಯ ಎಂದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಘೋಷಣೆ
ದಾವಣಗೆರೆ ಮಾಜಿ ಸಂಸದ ಸಿದ್ದೇಶ್ವರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್; ಅಜಯ್‌ ಕುಮಾರ್ ಮನವೊಲಿಕೆ!