ಬಿಜೆಪಿ ಲೂಟಿ ಹೊಡೆದದ್ದೇ ಹೆಚ್ಚು: ಪ್ರಿಯಾಂಕಾ ಗಾಂಧಿ

Published : Apr 27, 2023, 06:46 AM IST
ಬಿಜೆಪಿ ಲೂಟಿ ಹೊಡೆದದ್ದೇ ಹೆಚ್ಚು: ಪ್ರಿಯಾಂಕಾ ಗಾಂಧಿ

ಸಾರಾಂಶ

ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರತಿಯೊಂದು ವಿಷಯದಲ್ಲಿ ಜನರಿಗೆ ಮೋಸ ಮಾಡಿದೆ. ಆಮಿಷಗಳನ್ನು ಒಡ್ಡಿ, ಶಾಸಕರನ್ನು ಖರೀದಿಸಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಒಡೆದು ರಚನೆಯಾದ ಸರ್ಕಾರ ಇದಾಗಿದೆ ಎಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ. 

ಹಿರಿಯೂರು/ಬಾಳೆಹೊನ್ನೂರು(ಏ.27): ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಕೆಲಸ ಮಾಡಿದ್ದಕ್ಕಿಂತ ಲೂಟಿ ಹೊಡೆದದ್ದೇ ಹೆಚ್ಚು. ಗುತ್ತಿಗೆದಾರರ ಬಳಿ 40 ಪರ್ಸಂಟೇಜ್‌ ಕಮಿಷನ್‌ ಹೊಡೆದ ಸರ್ಕಾರ ಮತ್ತೆಂದೂ ಅಧಿಕಾರಕ್ಕೆ ಬರಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರತಿಯೊಂದು ವಿಷಯದಲ್ಲಿ ಜನರಿಗೆ ಮೋಸ ಮಾಡಿದೆ. ಆಮಿಷಗಳನ್ನು ಒಡ್ಡಿ, ಶಾಸಕರನ್ನು ಖರೀದಿಸಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಒಡೆದು ರಚನೆಯಾದ ಸರ್ಕಾರ ಇದಾಗಿದೆ ಎಂದರು.

ರಕ್ತದ ಪತ್ರ ಬೇಡ, ಡಿಕೆಶಿಗೆ ರಕ್ತ ಕಮ್ಮಿ ಆಗುತ್ತೆ: ಎಚ್‌ಡಿಕೆ

ಕೆಎಂಎಫ್‌ಗೆ ಪ್ರಿಯಾಂಕಾ ಬೆಂಬಲ

ನಂದಿನಿಯಂಥ ಸಹಕಾರಿ ಸಂಸ್ಥೆ ಕಟ್ಟಿದ್ದು ಯಾರು? ಇಲ್ಲಿ ಉತ್ಪತ್ತಿಯಾದ ಹಾಲು ಶಾಲೆಗಳು ಸೇರಿ ವಿವಿಧೆಡೆಗೆ ಕೊಡಲಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ಕ್ಷೀರಭಾಗ್ಯ ಕಾರ್ಯಕ್ರಮ ಮಾಡಿತ್ತು. ಆದರೆ ಈಗ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ ಎನ್ನುತ್ತಿದ್ದಾರೆ. ಹಾಲು ಉತ್ಪಾದನೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಗುಜರಾತ್‌ ಹಾಲನ್ನು ಕರ್ನಾಟಕಕ್ಕೆ ತರಲು ಭೂಮಿಕೆ ಸಿದ್ಧ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು.

ಇಂದಿರಾಗಾಂಧಿ, ಚಿಕ್ಕಮಗಳೂರು ಸ್ಮರಿಸಿದ ಪ್ರಿಯಾಂಕಾ

ಬಾಳೆಹೊನ್ನೂರು: ಈಗ ನಮ್ಮ ಪರಿವಾರ ಸಂಘರ್ಷದ ಸಮಯ ಎದುರಿಸುತ್ತಿದೆ. 1978-79ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಈ ಪ್ರದೇಶಕ್ಕೆ ಬಂದಾಗಲೂ ಸಂಘರ್ಷದ ಸಂದರ್ಭವಿತ್ತು. ಈಗ ನಾನು ಮತ್ತೊಂದು ಸಂಘರ್ಷದ ಸಮಯದಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಪ್ರಿಯಾಂಕಾಗಾಂಧಿ ಹೇಳಿದರು.

Karnataka election 2023: ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸ​ರಾ​ಜು

ಅಂದು ಕೂಡ ಇದೇ ರೀತಿಯ ಮಳೆಯ ವಾತಾವರಣವಿತ್ತು. ಮಳೆ ಎಂದರೆ ಶುಭ ಸಂಕೇತ, ಅಂದು ನನ್ನ ಅಜ್ಜಿ ಬಂದಾಗ ಯಾವ ವಾತಾವರಣವಿತ್ತೋ ಅದೇ ರೀತಿ ವಾತಾವರಣದಲ್ಲಿ ನಾನು ಇಂದು ನಿಮ್ಮ ಮುಂದೆ ನಿಲ್ಲುವ ಅವಕಾಶ ಸಿಕ್ಕಿದೆ. ಇದು ದೇವರ ಆಶೀರ್ವಾದ, ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು.

ನನ್ನ ಅಜ್ಜಿ ಇಂದಿರಾ ಗಾಂಧಿಯವರಿಗೆ ಅಂದು ಚಿಕ್ಕಮಗಳೂರು ಜನ ಆಶೀರ್ವಾದ ಮಾಡಿ ಹರಸಿದರು. ಇದಕ್ಕಾಗಿ ನಮ್ಮ ಕುಟುಂಬ ಸದಾ ನಿಮಗೆ ಆಭಾರಿ. ಅವರ ವಿರುದ್ಧವೂ ಲೋಕಸಭೆಯಲ್ಲಿ ಒಂದು ಕೇಸ್‌ ಹಾಕಿ ಸಂಸತ್‌ನಿಂದ ಹೊರಗಿಡಲಾಗಿತ್ತು. ಅವರನ್ನು ಮತ್ತೆ ನೀವು ಲೋಕಸಭೆಗೆ ವಾಪಸ್‌ ಕಳುಹಿಸಿಕೊಟ್ಟಿರಿ. ಅವತ್ತು ನಮಗೆ ನೀವು ಆತ್ಮವಿಶ್ವಾಸ ತುಂಬಿದ್ದೀರಿ. ನಮ್ಮ ಅಜ್ಜಿ ಇಂದಿರಾಗಾಂಧಿ ಅವರು ನೀವಿಟ್ಟವಿಶ್ವಾಸಕ್ಕೆ ಯಾವತ್ತೂ ಭಂಗ ತರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈಗ ಅವರ ಮೊಮ್ಮಗನಾದ ರಾಹುಲ್‌ ಗಾಂಧಿ ಮೇಲೆ ಸುಳ್ಳು ಕೇಸ್‌ ಹಾಕಿ ಅದೇ ರೀತಿ ಲೋಕಸಭೆಯಿಂದ ಹೊರ ಕಳುಹಿಸಿರುವ ಸಂದರ್ಭದಲ್ಲಿ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ