
ಮೈಸೂರು (ಜೂ.10): ಜಾತಿ ಮತ್ತು ಧರ್ಮವನ್ನು ಮೀರಿದ ಸಮಾಜ ನಿರ್ಮಿಸಿದರೆ ಜಾತಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ಜಾತಿಯ ಶ್ರೇಷ್ಠತೆ ಅಳಿಯದಿದ್ದರೆ ಜಾತಿ ಎಂದಿಗೂ ವಿನಾಶವಾಗದು ಎಂದರು.
ಬಸವಣ್ಣನವರು ಕಂಡ ಕನಸಿನಂತೆ ಸುಖಿ ರಾಜ್ಯದ ಕಲ್ಪನೆಯಲ್ಲಿ ಸಿದ್ಧರಾಮಯ್ಯ ಅವರು ಆಡಳಿತ ನಡೆಸುತ್ತಿದ್ದಾರೆ. ಬಸವ ಜಯಂತಿ ಎಂದರೆ ಜನರ ಜಯಂತಿ, ಜಾತಿ ವಿನಾಶದ ಜಯಂತಿ, ವೈಜ್ಞಾನಿಕ, ವೈಚಾರಿಕತೆ ಮೂಡಿಸುವ ಜಯಂತಿಯಾಗಿದೆ ಎಂದು ಅವರು ಹೇಳಿದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಮೂಲಕ ವೈದಿಕ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ಜನರಲ್ಲಿ ಜಾಗೃತಿ ಮೂಡಿಸಿದರು. ಬಸವಣ್ಣನವರ ಹಾದಿಯಲ್ಲಿಯೇ 20ನೇ ಶತಮಾನದಲ್ಲಿ ಅಂಬೇಡ್ಕರ್ ಮುಂದುವರಿಸಿದರು. ಇಂದಿನ ಸಂಸತ್ತು ಬಸವಣ್ಣ ಅವರ ಅನುಭವ ಮಂಟಪವಾಗಿದೆ ಎಂದರು.
ಬಿಜೆಪಿ ಮೈತ್ರಿಯಿಂದ ಜೆಡಿಎಸ್ಗೆ ಭರ್ಜರಿ ಲಾಭ: ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ
ಹಲವು ಕಾರಣಗಳಿಂದ ಜಾತೀಯತೆ ಪಾರುಪತ್ಯ ಆಗಿದೆ. ಬಸವಣ್ಣ ಜಾತೀಯತೆ ತೊಡೆದು ಹಾಕಲು ನಾನು ಮಾದರ ಚನ್ನಯ್ಯನ ಮಗನೆಂದು ಹೇಳಿದರು. ಆದರೆ, ಇಂದು ಜಾತಿ ಗಟ್ಟಿಗೊಳಿಸುವ ಕೆಲಸ ಆಗುತ್ತಿರುವುದು ಮನಸ್ಸಿಗೆ ಬೇಸರವಾಗುತ್ತಿದೆ ಎಂದು ಅವರು ಹೇಳಿದರು. ಚರಿತ್ರೆ ಗೊತ್ತಿಲ್ಲದವರಿಗೆ ಇತಿಹಾಸದ ದಿನಗಳನ್ನು ತಿಳಿಸಬೇಕು. ಬಸವಣ್ಣ ಧರ್ಮವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯದರು. ಮಾನವ ಧರ್ಮ ಸಾರಿದರು. ಇಂದು ಅದೇ ಮಾನವ ಧರ್ಮದಂತೆ ನಾವೆಲ್ಲರೂ ಸಾಗಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.