
ಬ್ಯಾಂಕಾಕ್(ಜ.30): ಭಾರತದ ಶಟ್ಲರ್ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮಹಿಳಾ ಸಿಂಗಲ್ಸ್ ಗುಂಪು ಹಂತದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸಿಂಧು, ಥಾಯ್ಲೆಂಡ್ನ ಪೊರ್ನ್ಪಾವಿ ಚೊಚುವಾಂಗ್ ವಿರುದ್ಧ 21-18, 21-15 ಗೇಮ್ಗಳಲ್ಲಿ ಜಯಿಸಿದರು. ಮೊದಲೆರಡು ಪಂದ್ಯಗಳಲ್ಲಿ ಸೋಲುಂಡಿದ್ದ ಕಾರಣ ಸಿಂಧು ಸೆಮೀಸ್ಗೇರುವಲ್ಲಿ ವಿಫಲರಾದರು.
ವಿಶ್ವ ಟೂರ್ ಫೈನಲ್ಸ್: ಸೆಮೀಸ್ ರೇಸ್ನಿಂದ ಸಿಂಧು, ಶ್ರೀಕಾಂತ್ ಔಟ್
ಇನ್ನು ಪುರುಷರ ಸಿಂಗಲ್ಸ್ ಗುಂಪು ಹಂತದ 3ನೇ ಪಂದ್ಯದಲ್ಲಿ ಶ್ರೀಕಾಂತ್, ಹಾಂಕಾಂಗ್ನ ಆ್ಯಂಗುಸ್ ಕಾ ಲಾಂಗ್ ವಿರುದ್ಧ 21-12, 18-21, 19-21 ಗೇಮ್ಗಳಲ್ಲಿ ಸೋಲುಂಡರು. ಶ್ರೀಕಾಂತ್ಗಿದು ಸತತ 3ನೇ ಸೋಲು. ಮೂರೂ ಪಂದ್ಯಗಳಲ್ಲಿ ಮೊದಲ ಗೇಮ್ ಜಯಿಸಿ ಬಳಿಕ ಪಂದ್ಯ ಬಿಟ್ಟುಕೊಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.