
ಜಕಾರ್ತ(ಜ.15): 2020ರ ಋುತುವಿನ 2ನೇ ಬ್ಯಾಡ್ಮಿಂಟನ್ ಟೂರ್ನಿಯಾದ ಇಂಡೋನೇಷ್ಯಾ ಮಾಸ್ಟರ್ಸ್ನ ಅರ್ಹತಾ ಸುತ್ತಲ್ಲಿ ಭಾರತದ ಯುವ ಶಟ್ಲರ್ಗಳಾದ ಲಕ್ಷ್ಯ ಸೆನ್, ಶುಭಾಂಕರ್ ಡೇ ಸೋಲುಂಡು ಹೊರಬಿದ್ದಿದ್ದಾರೆ.
ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು-ಸೈನಾ ಮುಖಾಮುಖಿ?
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಲ್ಲಿ ಲಕ್ಷ್ಯ, ಥಾಯ್ಲೆಂಡ್ನ ತೊಂಗ್ಸಾಕ್ ಸೆನ್ಸೊಬೂನ್ಸಕ್ ವಿರುದ್ಧ 13-21, 12-21 ಗೇಮ್ಗಳಲ್ಲಿ ಸೋಲು ಅನುಭವಿಸಿದರು. ಮತ್ತೊಂದು ಸಿಂಗಲ್ಸ್ನಲ್ಲಿ ಶುಭಾಂಕರ್, ಥಾಯ್ಲೆಂಡ್ನ ಸುಪ್ಪನ್ಯು ಅವಿಹಿಂಗ್ಸನೊನ್ ಎದುರು 16-21, 12-21 ಗೇಮ್ಗಳಲ್ಲಿ ಪರಾಭವ ಹೊಂದಿದರು.
ಪ್ರಶಸ್ತಿ ಗೆದ್ದ ಬೆನ್ನಲ್ಲೇ ವಿಶ್ವ ನಂ. 1 ಬ್ಯಾಡ್ಮಿಂಟನ್ ಆಟಗಾರನಿಗೆ ಆಕ್ಸಿಡೆಂಟ್
ಬುಧವಾರದಿಂದ ಆರಂಭವಾಗಲಿರುವ ಪ್ರಮುಖ ಸುತ್ತಿನಲ್ಲಿ ಪಿ.ವಿ. ಸಿಂಧು, ಸೈನಾ, ಕಿದಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಪ್ರಣಯ್, ಸಮೀರ್ ವರ್ಮಾ ಆಡಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.