
ನವದೆಹಲಿ(ಮಾ.21): ಕೊರೋನಾ ವೈರಸ್ ಹರಡದಂತೆ ತಡೆಯಲು ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ ಎಂದು ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಅದರಲ್ಲೂ ವಿದೇಶಗಳಿಂದ ಮರಳುವವರು, ವಿದೇಶಕ್ಕೆ ತೆರಳುವವರು 14 ದಿನ ಸ್ವಯಂ ದಿಗ್ಬಂಧನಕ್ಕೆ ಒಳಗಾಗವುದು ಸೂಕ್ತ ಎಂದಿದೆ. ಆದರೆ ಬಾಕ್ಸಿಂಗ್ ಪಟು ಮೇರಿ ಕೋಮ್ ಈ ಸೂಚನೆ ಮೀರಿದ್ದಾರೆ. ಮೇರಿ ಕೋಮ್ ನಡೆ ಇದೀಗ ರಾಷ್ಚ್ರಪತಿ ಭವನಕ್ಕೆ ಕೊರೋನಾ ಭೀತಿ ಆವರಿಸಿದೆ.
ಭಾರತ ಮೇರಿ ಕೋಮ್, ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಕ್ಕಾಗಿ ಜೋರ್ಡಾನ್ಗೆ ತೆರಳಿದ್ದರು. ಜೋರ್ಡಾನ್ನಿಂದ ವಾಪಸ್ ಆದ ಮೇರಿ ಕೋಮ್ ಕನಿಷ್ಠ 14 ದಿನ ಸ್ವಯಂ ದಿಗ್ಬಂಧನದಲ್ಲಿರಬೇಕಿತ್ತು. ಆದರೆ ಈ ಸೂಚನೆ ಉಲ್ಲಂಘಿಸಿದ ಮೇರಿ ಕೋಮ್, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಎಂಪಿಗಳಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಮೇರಿ ಕೋಮ್ ಪಾಲ್ಗೊಂಡಿದ್ದಾರೆ.
ಆದರೆ ಕುರಿತು ಪ್ರತಿಕ್ರಿಯೆ ನೀಡಿರುವ ಮೇರಿ ಕೋಮ್, ಜೋರ್ಡಾನ್ನಿಂದ ಆಗಮಿಸಿದ ಬಳಿಕ 14 ದಿನ ಮನಯೆಲ್ಲೇ ಇದ್ದೆ. ಬಳಿಕವೆ ತೆರಳಿದ್ದೇನೆ, ಸೂಚನೆ ಮೀರಿಲ್ಲ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.