ಏಷ್ಯಾ ಟೀಂ ಬ್ಯಾಡ್ಮಿಂಟನ್‌: ಭಾರತ ಕಂಚಿಗೆ ತೃಪ್ತಿ

Suvarna News   | Asianet News
Published : Feb 16, 2020, 11:20 AM IST
ಏಷ್ಯಾ ಟೀಂ ಬ್ಯಾಡ್ಮಿಂಟನ್‌: ಭಾರತ ಕಂಚಿಗೆ ತೃಪ್ತಿ

ಸಾರಾಂಶ

ದಿಟ್ಟ ಹೋರಾಟ ನೀಡದರೂ ಭಾರತ ಬ್ಯಾಡ್ಮಿಂಟನ್ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಏಷ್ಯಾ ಟೀಂ ಬ್ಯಾಡ್ಮಿಂಟನ್‌ ಟೂರ್ನಿಯ ಹೈಲೈಟ್ಸ್ ಇಲ್ಲಿದೆ. 

ಮನಿಲಾ(ಫಿಲಿಪೈನ್ಸ್‌)(ಫೆ.15 : ಯುವ ಶಟ್ಲರ್‌ ಲಕ್ಷ್ಯ ಸೆನ್‌ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ತಂಡ, ಏಷ್ಯಾ ಟೀಮ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಇಂಡೋನೇಷ್ಯಾ ಎದುರು 2-3 ರಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. 

ಇದನ್ನೂ ಓದಿ: ಪಿಬಿಎಲ್‌: ಬೆಂಗ್ಳೂರಿಗೆ ಸತತ 2ನೇ ವರ್ಷ ಪ್ರಶಸ್ತಿ

ಶನಿವಾರ ನಡೆದ ಸೆಮಿಫೈನಲ್‌ ಹಂತದ ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ, ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜೋನಾಥನ್‌ ಕ್ರಿಸ್ಟ್‌ ವಿರುದ್ಧ 21-18, 22-20 ಗೇಮ್‌ಗಳಲ್ಲಿ ಜಯ ಪಡೆದರು. ಶುಭಾಂಕರ್‌ ಡೇ, ವಿಶ್ವ ನಂ.20 ಶೇಸರ್‌ ಹಿರೆನ್‌ ವಿರುದ್ಧ 21-17, 21-15 ಗೇಮ್‌ಗಳಲ್ಲಿ ಗೆದ್ದರು. 

ಇದನ್ನೂ ಓದಿ: ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ!

ಬಿ. ಸಾಯಿ ಪ್ರಣೀತ್‌, ಆ್ಯಂಟೋನಿ ಗಿಂಟಿಂಗ್‌ ಎದುರಿನ ಪಂದ್ಯದ ವೇಳೆ ಗಾಯದಿಂದ ಹಿಂದೆ ಸರಿದರು. ಡಬಲ್ಸ್‌ನಲ್ಲಿ ಅರ್ಜುನ್‌-ಧೃವ್‌ ಜೋಡಿ, ಮೊಹಮದ್‌ ಅಸನ್‌, ಹೆಂದ್ರಾ ಸೆಟಿವಾನ್‌ ಜೋಡಿ ವಿರುದ್ಧ 10-21, 21-14, 21-23 ಗೇಮ್‌ಗಳಲ್ಲಿ ಸೋತಿತು.

ಎರಡು ಸಿಂಗಲ್ಸ್‌ ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಇಂಡೋನೇಷ್ಯಾ 1 ಸಿಂಗಲ್ಸ್‌ ಹಾಗೂ 1 ಡಬಲ್ಸ್‌ ಪಂದ್ಯದಲ್ಲಿ ಗೆದ್ದು 2-2 ರಿಂದ ಸಮಬಲ ಸಾಧಿಸಿತ್ತು. 2ನೇ ಡಬಲ್ಸ್‌ ಪಂದ್ಯದಲ್ಲಿ ಚಿರಾಗ್‌ ಶೆಟ್ಟಿ-ಲಕ್ಷ್ಯ ಸೆನ್‌ ಜೋಡಿ, ವಿಶ್ವ ನಂ.1 ಮಾರ್ಕಸ್‌ ಫೆರ್ನಾಲ್ಡಿ-ಕೆವಿನ್‌ ಸಂಜಯ ಜೋಡಿ ವಿರುದ್ಧ 6-21, 13-21 ಗೇಮ್‌ಗಳಲ್ಲಿ ಪರಾಭವ ಹೊಂದಿತು. ಇಂಡೋನೇಷ್ಯಾ ಈ ಜಯದೊಂದಿಗೆ ಫೈನಲ್‌ಗೇರಿದರೆ, ಭಾರತ ಕಂಚಿನ ಪದಕ ಗೆದ್ದಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!