
ಬೆಂಗಳೂರು(ನ.21): ಕೊರೋನಾ ವೈರಸ್ ಹೆಮ್ಮಾರಿಯ ಭೀತಿಯಿಂದಾಗಿ ಲಾಕ್ಡೌನ್ ಆಗಿ ಬರೋಬ್ಬರಿ 8 ತಿಂಗಳ ಬಳಿಕ ರಾಜ್ಯದಲ್ಲಿ ಒಂದೊಂದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದೆ.
ಹೌದು, ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಇದರ ಬಳಿಕ ಇದೀಗ ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ (ಕೆಎಸ್ಎಲ್ಟಿಎ) ಶುಕ್ರವಾರ (ನ.20) ದಿಂದ ರಾಷ್ಟ್ರೀಯ ಶ್ರೇಯಾಂಕಿತ 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಟೆನಿಸ್ ಟೂರ್ನಿಯನ್ನು ಆಯೋಜಿಸಿದೆ. ಭಾನುವಾರದವರೆಗೂ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ 32 ಆಟಗಾರರು ಭಾಗವಹಿಸಲಿದ್ದು, ಸಿಂಗಲ್ಸ್ ವಿಭಾಗದ ಪಂದ್ಯಗಳು ಮಾತ್ರ ನಡೆಯಲಿವೆ.
10 ಟಿ20 ಪಂದ್ಯವನ್ನಾಡಿದ ಆಟಗಾರರಿಗೆ ಬಿಸಿಸಿಐನಿಂದ ಕೇಂದ್ರ ಗುತ್ತಿಗೆ.?
ಬಾಲಕರ ಮೊದಲ ಸುತ್ತಿನ ಪಂದ್ಯಗಳಲ್ಲಿ ಅದಿತ್, ಮಂದೀಪ್, ರಿಷಿ ವಂದನ್, ಅಶ್ವಿನ್, ಜಾಸನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸುಹಿತಾ, ಕಶಿಶ್, ಸುರಭಿ, ಸಾಯಿ ಜಾನವಿ, ಪ್ರೇಶಾ, ಅತ್ಮಿಕಾ, ಗಂಗಾ, ವನ್ಯಾ ಗೆಲುವು ಪಡೆದು ಮುಂದಿನ ಸುತ್ತಿಗೇರಿದರು. ಶನಿವಾರ ಕ್ವಾರ್ಟರ್ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.