NRI
ಅಮೆರಿಕದಲ್ಲಿ ನಾವಿಕ ಸಮ್ಮೇಳನಕ್ಕೆ ಭರ್ಜರಿ ಸಿದ್ದತೆ| ಸಪ್ತ ಸಾಗರದಾಚೆ ಕೇಳಲಿದೆ ಕನ್ನಡಿಗರ ಕಲರವ| ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್1 ರಂದು ಸಿನ್ಸಿನಾಟಿಯಲ್ಲಿ ನಾವಿಕ ಸಮ್ಮೇಳನ| ನಾವಿಕ ಸಮ್ಮೇಳನಕ್ಕೆ ಬರಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್| ಹೆಚ್ಚಿನ ಮಾಹಿತಿಗಾಗಿ ನಾವಿಕ ಸಮ್ಮೇಳನದ ವೆಬ್ಸೈಟ್ಗೆ ಭೇಟಿ ನೀಡಬಹುದು
ಸಿನ್ಸಿನಾಟಿ(ಫೆ.13): ಬಹು ನಿರೀಕ್ಷಿತ ನಾವಿಕ ಸಮ್ಮೇಳನವನ್ನುಈ ಬಾರಿ ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಭರದ ಸಿದ್ಧತೆಗಳು ಆರಂಭಗೊಂಡಿದ್ದು, ಸಾಗರದಾಚೆ ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡತನವನ್ನು ಗಟ್ಟಿಗೊಳಿಸಲು ಇಲ್ಲಿನ ಉತ್ಸಾಹಿ ಕನ್ನಡಿಗರು ಟೊಂಕಕಟ್ಟಿ ನಿಂತಿದ್ದಾರೆ.
ಅಮೆರಿಕ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ 2 ವರ್ಷಗಳಿಗೊಮ್ಮೆ ಸಮ್ಮೇಳನವನ್ನುಆಯೋಜಿಸಲಾಗುತ್ತಿದೆ. ಅದರಂತೆ ನಾವಿಕ 5 ನೇ ವಿಶ್ವ ಕನ್ನಡ ಸಮಾವೇಶ ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್1ರಂದು ಮೂರು ದಿನಗಳ ಕಾಲ ಸಿನ್ಸಿನಾಟಿ ನಗರದ ಡ್ಯೂಕ್ ಎನರ್ಜಿ ಕನ್ವೆನ್ಷನ್ ಸೆಂಟರಿನಲ್ಲಿ ನಡೆಯಲಿದೆ.
ಸಮ್ಮೇಳನಕ್ಕೆ ಬೇಕಾದ ನಾನಾ ಸಮಿತಿಗಳು ಈಗಾಗಲೇ ರಚನೆಗೊಂಡಿದ್ದು, ಆಯಾ ಸಮಿತಿಗಳು ತಮ್ಮ ತಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಹಲವುಸುತ್ತಿನ ಸಭೆಗಳನ್ನು ನಡೆಸಿವೆ.
ಅಮೆರಿಕದ ನಾನಾ ಭಾಗಗಳಲ್ಲಿರುವ ಸಂಘಟನಾ ನೈಪುಣ್ಯತೆ ಹೊಂದಿರುವ ಅನುಭವಿ ಕನ್ನಡಿಗರು ಈ ಎಲ್ಲ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿರುವುದು ವಿಶೇಷ.
ಮೂರು ದಿನಗಳ ಕಾರ್ಯಕ್ರಮಗಳಿಗಾಗಿ ಹೊಟೇಲ್ ಗಳನ್ನುಕಾಯ್ದಿರಿಸುವುದು, ಊಟೋಪಚಾರ, ಅಮೆರಿಕದ ಮೂಲೆ ಮೂಲೆಗಳಿಗೆ ಸಮ್ಮೇಳನದ ಬಗ್ಗೆಮಾಹಿತಿ ರವಾನಿಸಲು ಪ್ರಚಾರಕಾರ್ಯ ಈಗಾಗಲೇ ಆರಂಭವಾಗಿದೆ.
ಸ್ಥಳೀಯ ಹಾಗೂ ಭಾರತದಿಂದ ಕರೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ನ್ನುಪ್ರದರ್ಶಿಸುವ ಕಲಾವಿದರ ಪಟ್ಟಿ ತಯಾರಿಕೆ, ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಅಗತ್ಯ ಮಾಹಿತಿಗಳನ್ನು ನೀಡುವುದಕ್ಕಾಗಿ ಸ್ವಾಗತ ಸಮಿತಿ ರಚನೆ, ಖರ್ಚು ವೆಚ್ಚ ನಿರ್ವಹಣೆಗಾಗಿ ಹಣಕಾಸು ಸಮಿತಿ ರಚನೆ ಹೀಗೆ ಏಕಕಾಲಕ್ಕೆ ಸಕಲ ಕಾರ್ಯಗಳು ಆರಂಭಗೊಂಡಿವೆ.
ಇನ್ನು ಸಿನಿತಾರೆ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಇವರ ಆಗಮನ ಬಹುತೇಕ ಖಚಿತವಾಗಿದೆ ಎಂದುನಾವಿಕದ ಸಂಚಾಲಕರಾದ ವಲ್ಲೀಶಶಾಸ್ತ್ರೀ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದಕ್ಕಾಗಿ ಭಾರತದ ಕೆಲವು ಗಾಯಕ ಗಾಯಕಿಯರನ್ನೂ ಆಹ್ವಾನಿಸಲಾಗಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ವಲ್ಲೀಶಶಾಸ್ತ್ರೀ ತಿಳಿಸಿದ್ದಾರೆ. ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಖ್ಯಾತ ನೃತ್ಯ ಜೋಡಿ ನಿರುಪಮ-ರಾಜೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು,ಅವರು ಕಾಯಕ್ರಮನೀಡಲು ಒಪ್ಪಿಕೊಂಡಿದ್ದಾರೆ.
ಅದರಂತೆ ಸಮ್ಮೇಳನದ ಬಗೆಗಿನ ಸಂಪೂರ್ಣ ಮಾಹಿತಿಯು https://navika.org/ಈ ವೆಬ್ಸೈಟಿನಲ್ಲಿದೆ. ಈಗಾಗಲೇ ನೋಂದಣಿ ಶುರುವಾಗಿದ್ದು, ಮುಂಗಡವಾಗಿ ಟೆಕೆಟ್ ಕೊಳ್ಳುವವರಿಗಾಗಿವಿಶೇಷ ರಿಯಾಯಿತಿಯನ್ನೂ ನೀಡಲಾಗಿದೆ.
ಇನ್ನು ಸಮ್ಮೇಳನಾಧ್ಯಕ್ಷ ಡಾ.ಮನಮೋಹನ್ ಕಟಪಾಡಿ, ಸಮ್ಮೇಳನ ಉಪಾಧ್ಯಕ್ಷ ಡಾ.ಸುರೇಶ್ ಶ್ರಾಫ್, ಸಹ ಸಂಚಾಲಕ ಶ್ರೀಅರುಣ್ ಕುಮಾರ್, ಪುಷ್ಮಲತಾ ನವೀನ್ ಮತ್ತುಅರುಡಿ ರಾಜಗೋಪಾಲ್ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದಾರೆ.