ನನ್ನ ಮೇಲಿನ ದೌರ್ಜನ್ಯ ಯಾರಿಗೆ ಹೇಳಲಿ?: ಸ್ಪೀಕರ್

Published : Feb 18, 2017, 01:00 PM ISTUpdated : Apr 11, 2018, 01:07 PM IST
ನನ್ನ ಮೇಲಿನ ದೌರ್ಜನ್ಯ ಯಾರಿಗೆ ಹೇಳಲಿ?: ಸ್ಪೀಕರ್

ಸಾರಾಂಶ

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಹುಮತ ಸಾಬೀತುಪರೀಕ್ಷೆ ವೇಳೆ ಸ್ಪೀಕರ್ ಕೂರುವ ಜಾಗಕ್ಕೆ ನುಗ್ಗಿದ್ದ ಡಿಎಂಕೆ ಶಾಸಕರು, ಮೇಜು ಮುರಿದುಹಾಕಿದ್ದರು.

ಚೆನ್ನೈ(ಫೆ.18): ‘ವಿಧಾನಸಭೆಯಲ್ಲಿ ನಡೆದ ಗದ್ದಲದ ಸಂದರ್ಭದಲ್ಲಿ ಡಿಎಂಕೆ ಶಾಸಕರು ನನ್ನ ಅಂಗಿ ಹರಿದರು. ನನ್ನ ಮೇಲಾದ ಈ ದೌರ್ಜನ್ಯವನ್ನು ಯಾರ ಬಳಿ ಹೇಳಿಕೊಳ್ಳಲಿ?’ ಎಂದು ತಮಿಳುನಾಡು ಸ್ಪೀಕರ್ ಪಿ. ಧನಪಾಲ್ ಗೋಳು ತೋಡಿಕೊಂಡಿದ್ದಾರೆ.

ಕಾನೂನುಬದ್ಧವಾಗಿ ನಾನು ನನ್ನ ಕೆಲಸ ಮಾಡುತ್ತಿದ್ದರೂ, ಡಿಎಂಕೆ ಶಾಸಕರು ಅಡ್ಡಿಪಡಿಸಿ ಅಂಗಿ ಹರಿಯುವ ಮೂಲಕ ನನಗೆ ಅವಮಾನ ಮಾಡಿದ್ದಾರೆ ಎಂದು ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ಬಹುಮತ ಸಾಬೀತುಪರೀಕ್ಷೆ ವೇಳೆ ಸ್ಪೀಕರ್ ಕೂರುವ ಜಾಗಕ್ಕೆ ನುಗ್ಗಿದ್ದ ಡಿಎಂಕೆ ಶಾಸಕರು, ಮೇಜು ಮುರಿದುಹಾಕಿದ್ದರು. ಅಲ್ಲದೆ ಧನಪಾಲ್ ಅವರನ್ನು ತಳ್ಳಿದ್ದರು. ನಂತರ ಸ್ಪೀಕರ್ ಆಸನದಲ್ಲಿ ಕೂರುವ ಮೂಲಕ ಉದ್ಧಟತನ ತೋರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ