
ನವದೆಹಲಿ (ಜ.04): ಯೋಗಿ ಸರ್ಕಾರದಿಂದ ಮುಸ್ಲಿಮರ ರಂಜಾನ್ ಹಬ್ಬದ ರಜೆಗೆ ಕತ್ತರಿ ಹಾಕಲು ನಿರ್ಧರಿಸಿದೆ. ರಾಜ್ಯದ ಮದರಸಾಗಳಿಗೆ ನೀಡುತ್ತಿದ್ದ 92 ರಜೆಗಳನ್ನು 86 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಈ ಪೈಕಿ ರಂಜಾನ್ ರಜೆಯನ್ನು 46 ರಿಂದ 42 ಕ್ಕೆ ಇಳಿಸಲಾಗಿದೆ. ಮದರಸಾಗಳಲ್ಲಿ ಹಿಂದೂ ಹಬ್ಬಗಳಿಗೆ ರಜೆ ನೀಡಬೇಕು ಎಂದು ಆದೇಶಿಸಲಾಗಿದೆ. ಮುಸ್ಲಿಂ ಧಾರ್ಮಿಕ ವಿಧ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ನಿರ್ಧಾರವನ್ನು ಸ್ವಾಗತಿದ್ದಾರೆ. ಆದರೆ ಆರೆಸ್ಸೆಸ್ ಶಾಲೆಗಳಲ್ಲಿ ಕೂಡ ಮುಸ್ಲಿಂ ಹಬ್ಬಗಳ ಬಗ್ಗೆ ಕಲಿಕೆಗೆ ಅವಕಾಶವಿರಲಿ ಎಂದು ಅವರು ಒತ್ತಾಯಿಸಿದ್ದಾರೆ. ರಕ್ಷಾಬಂಧನ, ಬುದ್ಧ ಪೂರ್ಣಿಮಾ ಮತ್ತು ಮಹಾವೀರ ಜಯಂತಿ ಮುಂತಾದ ಹತ್ತು ರಜೆಗಳನ್ನು ಹೆಚ್ಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.