'ಇದೊಂದು ಥರ ಲಜ್ಜೆ ಗೆಟ್ಟ ಸರ್ಕಾರ, ಸದನವನ್ನ ನಡೆಸೋಕೆ ಆಸಕ್ತಿಯಿಲ್ಲ'

Published : Jul 20, 2019, 11:27 AM ISTUpdated : Jul 20, 2019, 12:03 PM IST
'ಇದೊಂದು ಥರ ಲಜ್ಜೆ ಗೆಟ್ಟ ಸರ್ಕಾರ, ಸದನವನ್ನ ನಡೆಸೋಕೆ ಆಸಕ್ತಿಯಿಲ್ಲ'

ಸಾರಾಂಶ

ಕೊನೆಗಾಣುತ್ತಿಲ್ಲ ರಾಜಕೀಯ ಪ್ರಹಸನ| ವಿಶ್ವಾಸಮತ ಯಾಚಿಸದ ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನ ಕಿಡಿ| ನೈತಿಕತೆ ಇದ್ರೆ ವಿಶ್ವಾಸಮತ ಯಾಚಿಸಿ

ಬೆಂಗಳೂರು[ಜು.20]: ಎರಡು ವಾರಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಸದನದಲ್ಲಿ ವಿಶ್ವಾಸಮತ ಮಂಡಿಸದಿರುವ ಸರ್ಕಾರದ ವಿರುದ್ಧ ಸದ್ಯ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಕಲಾಪ ಸೋಮವಾರಕ್ಕೆ ಮುಂದೂಡಿದ ಬಳಿಕ ಸದ್ಯ ಮೂರೂ ಪಕ್ಷದ ಶಾಸಕರು ರೆಸಾರ್ಟ್ ಗಳಿಗೆ ಶಿಫ್ಟ್ ಆಗಿದ್ದಾರೆ. ಹೀಗಿರುವಾಗ ರಮಡ ರೆಸಾರ್ಟ್ ನಲ್ಲಿರುವ  ಯಲಹಂಕ ಶಾಸಕ ಎಸ್‌. ಆರ್ ವಿಶ್ವನಾಥ್ ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಸದನ ಕಲಾಪ ಕುರಿತಾಗಿ ಪ್ರತಿಕ್ರಿಯಿಸಿರುವ ಶಾಸಕ ಎಸ್‌. ಆರ್ ವಿಶ್ವನಾಥ್ 'ಇದೊಂದು ಥರ ಲಜ್ಜೆ ಗೆಟ್ಟ ಸರ್ಕಾರ ಸದನವನ್ನು ನಡೆಸಲು ಆಸಕ್ತಿಯಿಲ್ಲ. ಅತೃಪ್ತರು ಬರುವವರೆಗೆ ನಾವು ಸದನವನ್ನು ನಡೆಸಲ್ಲ ಎಂಬ ದೋಸ್ತಿಗಳ ಧೋರಣೆ ಸರಿಯಿಲ್ಲ. ಅವರು ಬರುವಂತಿದ್ದರೆ ಕರೆತಂದು ವಿಶ್ವಾಸ ಮತ ಯಾಚನೆ ಮಾಡಲಿ. ಆದರೆ ಕಾಲಹರಣ ಮಾಡೋದು ಸರಿ ಇಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ದೋಸ್ತಿ ನಾಯಕರಿಗೆ ಎಚ್ಚರಿಸಿರುವ ವಿಶ್ವನಾಥ್ 'ಸಭಾಧ್ಯಕ್ಷರು ಸೋಮವಾರ ಮತಯಾಚನೆ ಮಾಡಿ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ವಿಶ್ವಾಸ ಇದೆ. ಅತೃಪ್ತರನ್ನು ಮನವೊಲಿಸ್ತಾರೋ ಏನು ಮಾಡ್ತಾರೋ ನಮಗೆ ಗೊತ್ತಿಲ್ಲ, ಆದರೆ ವಿಶ್ವಾಸ ಮತ ಯಾಚನೆ ಮಾಡಿ. ಜನರು ಈ ಎಲ್ಲಾ ಆಟವನ್ನು ನೋಡುತ್ತಿದ್ದಾರೆ. ನೈತಿಕತೆ ಇದ್ರೆ ವಿಶ್ವಾಸ ಮತಯಾಚನೆ ಮಾಡಿ. ಸುಮ್ಮನೆ ಕಾಲ ಹರಣ ಮಾಡೋದು ಸರಿಯಲ್ಲ' ಎಂದಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ