ಮೋದಿ ವಿರುದ್ಧ ನಿಂದನೆ ಗೊತ್ತುವಳಿ ಮಂಡಿಸಲು ಯೆಚೂರಿ ನೋಟಿಸ್

Published : Nov 24, 2016, 12:26 PM ISTUpdated : Apr 11, 2018, 12:43 PM IST
ಮೋದಿ ವಿರುದ್ಧ ನಿಂದನೆ ಗೊತ್ತುವಳಿ ಮಂಡಿಸಲು ಯೆಚೂರಿ ನೋಟಿಸ್

ಸಾರಾಂಶ

ನೋಟಿನ ಅಪಮೌಲ್ಯೀಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಖುದ್ದಾಗಿ ಬಂದು ರಾಜ್ಯಸಭೆಯಲ್ಲಿ ಸ್ಪಷ್ಟೀಕರಣ  ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.  ಕಚೇರಿಯಲ್ಲಿದ್ದೂ ಸಂಸತ್ತು ಕಲಾಪಗಳಿಗೆ ಪ್ರಧಾನಿ ಹಾಜರಾಗದಿರುವುದು ಪ್ರತಿಪಕ್ಷಗಳಿಗೆ ಸಿಟ್ಟು ತರಿಸಿದೆ.

ನವದೆಹಲಿ (ನ.24): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸತ್ತು ನಿಯಮಗಳ ನಿಂದನೆ ಗೊತ್ತುವಳಿಯನ್ನು ಮಂಡಿಸಲು ಕಮ್ಯೂನಿಸ್ಟ್ ನಾಯಕ ಸೀತರಾಮ್ ಯೆಚೂರಿ ರಾಜ್ಯಸಭೆಯಲ್ಲಿ ನೋಟಿಸ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸತ್ತು ನಿಯಮಗಳ ನಿಂದನೆ ಗೊತ್ತುವಳಿಯನ್ನು ಮಂಡಿಸುವ ವಿಚಾರದಲ್ಲಿ ಸಭಾಧ್ಯಕ್ಷರಿಗೆ ನೋಟಿಸ್ ಕೊಡಲಾಗಿದೆ. ಅವರು ಅದನ್ನು ಪರಿಗಣಿಸುವರು ಎಂಬ ವಿಶ್ವಾಸವಿದೆ, ಎಂದು ಸೀತರಾಮ್ ಯೆಚೂರಿ ಹೇಳಿದ್ದಾರೆ.

ನೋಟಿನ ಅಪಮೌಲ್ಯೀಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಖುದ್ದಾಗಿ ಬಂದು ರಾಜ್ಯಸಭೆಯಲ್ಲಿ ಸ್ಪಷ್ಟೀಕರಣ  ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.  ಕಚೇರಿಯಲ್ಲಿದ್ದೂ ಸಂಸತ್ತು ಕಲಾಪಗಳಿಗೆ ಪ್ರಧಾನಿ ಹಾಜರಾಗದಿರುವುದು ಪ್ರತಿಪಕ್ಷಗಳಿಗೆ ಸಿಟ್ಟು ತರಿಸಿದೆ.

ಇಂದು ರಾಜ್ಯಸಭೆಯಲ್ಲಿ ನೊಟು ನಿಷೇಧದ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಭೋಜನ ವಿರಾಮದ ಬಳಿಕ ಗೈರಾಗಿದ್ದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!