ರಾಜ್ಯಸಭೆಯಲ್ಲಿ ಸಚಿವರೊಬ್ಬರ ಪಂಚ್ ಲೈನ್ ಗೆ ಮೋದಿ ಜೇಟ್ಲಿ ಫುಲ್ ಖುಷ್!

Published : Nov 24, 2016, 11:35 AM ISTUpdated : Apr 11, 2018, 01:06 PM IST
ರಾಜ್ಯಸಭೆಯಲ್ಲಿ ಸಚಿವರೊಬ್ಬರ ಪಂಚ್ ಲೈನ್ ಗೆ ಮೋದಿ ಜೇಟ್ಲಿ ಫುಲ್ ಖುಷ್!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ಕಲಾಪದಲ್ಲಿ ಭಾಗವಹಿಸಿದ್ದರಿಂದ ಅವರ ವಿರುದ್ಧ ಟೀಕೆ, ಪ್ರಶ್ನೆಗಳ ಸುರಿಮಳೆ, ಗದ್ದಲ ಉಂಟಾಯಿತು. ಏತನ್ಮದ್ಯೆ ಸಮಾಜವಾದಿ ಪಕ್ಷದ ನರೇಶ್ ಅಗರ್'ವಾಲ್ ಕಟ್ ಮಾಡಿದ ಜೋಕಿಗೆ ಪ್ರಧಾನಿ ಸೇರಿದಂತೆ ಇಡೀ ಸದನವೇ ಒಮ್ಮೆ ನಗೆಗಡಲಲ್ಲಿ ಮುಳುಗಿತು.

ನವದೆಹಲಿ (ನ.24): ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ಕಲಾಪದಲ್ಲಿ ಭಾಗವಹಿಸಿದ್ದರಿಂದ ಅವರ ವಿರುದ್ಧ ಟೀಕೆ, ಪ್ರಶ್ನೆಗಳ ಸುರಿಮಳೆ, ಗದ್ದಲ ಉಂಟಾಯಿತು. ಏತನ್ಮದ್ಯೆ ಸಮಾಜವಾದಿ ಪಕ್ಷದ ನರೇಶ್ ಅಗರ್'ವಾಲ್ ಕಟ್ ಮಾಡಿದ ಜೋಕಿಗೆ ಪ್ರಧಾನಿ ಸೇರಿದಂತೆ ಇಡೀ ಸದನವೇ ಒಮ್ಮೆ ನಗೆಗಡಲಲ್ಲಿ ಮುಳುಗಿತು.

ಪ್ರತಿಪಕ್ಷಗಳು ನೋಟು ನಿಷೇಧ ವಿಚಾರವಾಗಿ ಪ್ರಧಾನಿ ವಿರುದ್ಧ ಹರಿಹಾಯುತ್ತಿರುವಾಗ ಸಮಾಜವಾದಿ ಪಕ್ಷದ ನರೇಶ್ ಅಗರ್ ವಾಲ್, "ನೋಟು ನಿಷೇಧ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ವಿತ್ತ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಕೆಲವರು ಹೇಳುತ್ತಾರೆ. ಒಂದು ವೇಳೆ ಜೇಟ್ಲಿಜಿಗೆ  ಈ ವಿಚಾರ ಮೊದಲೇ ಗೊತ್ತಿದ್ದರೆ ನಮ್ಮ ಬಳಿ ಪಿಸುಗುಡುತ್ತಿದ್ದರು" ಎಂದು ತಮಾಷೆ ಮಾಡಿದರು. ಆಗ ಮೋದಿ ಮತ್ತು ಜೇಟ್ಲಿ ಜೋರಾಗಿ ನಕ್ಕರು.

ಇಷ್ಟಕ್ಕೆ ಸುಮ್ಮನಾಗದ ಅಗರ್ ವಾಲ್, ಉತ್ತರ ಪ್ರದೇಶದಲ್ಲಿ ನಿಮ್ಮ ಪಕ್ಷದ ಸೆಫ್ಟಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ
ಪ್ರಧಾನಿ ಮೋದಿ ಕೂರಿಸಿ ಜೋರ್ಡಾನ್‌ ಪ್ರಿನ್ಸ್‌ ಕಾರು ಚಾಲನೆ!