
ಅನಾಥ ಮಕ್ಕಳ ಪಾಲಿಗೆ ಅಮ್ಮಾನೂ ಇವ್ರೇ, ರೋಗಿಗಳ ಪಾಲಿನ ವೈದ್ಯರೂ ಇವ್ರೇ. ಹಸಿದ ಹೊಟ್ಟೆಗೆ ಅನ್ನ ಕೊಡೋ ಅನ್ನಪೂರ್ಣೆಯೂ ಇವ್ರೇ, ಅಂಧರ ಬಾಳನ್ನು ಬೆಳಗಿದ ಬೆಳಕೂ ಇವ್ರೇ.
ಹೆಸರು ಡಾ.ಸಿಬಿಲ್ ಮೇಶರಮಕರ್. ಬೀದರ್ನಲ್ಲಿ ವೇಲಮೆಗನಾ ಕಣ್ಣಿನ ಆಸ್ಪತ್ರೆ ಕಟ್ಟಿ, 1500ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯೇ ಇವರ ಮನೆ. ರೋಗಿಗಳೇ ಮಕ್ಕಳು.
ಮೂಲತಃ ಮಂಗಳೂರು, ಬಂದಿದ್ದು ಬೀದರ್’ಗೆ. 17 ವರ್ಷಗಳಿಂದ ಬಡ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡ್ತಿದ್ದಾರೆ.. 25ಕ್ಕೂ ಹೆಚ್ಚು ಮಕ್ಕಳಿಗೆ ಮಕ್ಕಳಿಗೂ ಆಶ್ರಯ ನೀಡಿದ್ದಾರೆ.
ಇವರ ಸೇವೆಯನ್ನು ಕಂಡು, ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಬೀದರ್ ಜಿಲ್ಲಾಡಳಿತ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಂಥಾ ಸಾಧಕಿಗೆ, ಈಗ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದ ಮಹಿಳಾ ಪ್ರಶಸ್ತಿಯ ಗರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.