
ಕೊಪ್ಪಳ(ಸೆ.30): ಪತಿಗಾಗಿ ಮೊದಲ ಹಾಗೂ ಎರಡನೇ ಪತ್ನಿಯರು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಕೊಪ್ಪಳದ ಬೆಂಕಿನಗರದಲ್ಲಿ ನಡೆದಿದೆ. ವಿಜಯಶ್ರೀ ಹಾಗೂ ಶಿಲ್ಪಾ ಹೊಡೆದಾಡಿಕೊಂಡ ಮಹಿಳೆಯರು.
ಶಿವಮೊಗ್ಗ ಜಿಲ್ಲೆಯ ಅಟ್ಟಿ ಮಂಜುನಾಥನನ್ನು 2013 ರಲ್ಲಿ ವಿಜಯಶ್ರೀಯನ್ನು ವಿವಾಹವಾಗಿದ್ದ. ನಂತರ ಮೂರು ವರ್ಷದ ಸಂಸಾರ ನಡೆಸಿದ ಮಂಜುನಾಥ 2016 ರ ಅಕ್ಟೋಬರ್ ರಲ್ಲಿ ಮನೆ ಎದುರಿನ ಶಿಲ್ಪಾರನ್ನು ಎರಡನೇ ಮದುವೆಯಾದ. ಶಿಲ್ಪಾಳನ್ನು ಮದುವೆಯಾದ ಮಂಜುನಾಥ ಮೊದಲ ಪತ್ನಿ ವಿಜಯಶ್ರೀ ಹೊಡೆದು ಮನೆಯಿಂದ ಹೊರ ಹಾಕಿದ್ದ. ಇದರಿಂದ ಕಂಗಾಲಾದ ವಿಜಯಶ್ರೀ ಇಂದು ಶಿಲ್ಪಾ ಮನೆಗೆ ನುಗ್ಗಿ ಆಕೆ , ಆಕೆ ತಾಯಿಗೆ ಹೊಡೆದಿದ್ದಾರೆ.
ಇಬ್ಬರು ಪತ್ನಿಯರು ಪರಸ್ಪರ ಜಡೆ ಹಿಡಿದು ಬಡಿದಾಡಿಕೊಂಡರು. ಹೆಂಡತಿಯರ ಜಗಳದಿಂದ ಸ್ಥಳೀಯರಿಗೆ ಮಾತ್ರ ಭರ್ಜರಿ ಮನರಂಜನೆ ದೊರೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.