100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ: ಹಬ್ಬದ ಸಂಭ್ರಮದ ಮಧ್ಯೆ ಸಮಾಜ ತಲೆತಗ್ಗಿಸುವ ಕಾರ್ಯ

Published : Sep 30, 2017, 09:09 AM ISTUpdated : Apr 11, 2018, 12:45 PM IST
100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ: ಹಬ್ಬದ ಸಂಭ್ರಮದ ಮಧ್ಯೆ ಸಮಾಜ ತಲೆತಗ್ಗಿಸುವ ಕಾರ್ಯ

ಸಾರಾಂಶ

ರಾಜ್ಯ ಸರಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದೆ. ಆದರೆ ಇಲ್ಲಿ ಕೇಸರಿ ಧ್ವಜ ಹಾರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ 100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ಕುಟುಂಬಗಳು ನೀರು, ಕರೆಂಟ್​, ಊಟವಿಲ್ಲದೇ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದು ಎಲ್ಲಿ ಅಂತೀರಾ ಹಾಗಿದ್ದರೆ ಈ ವರದಿ ನೋಡಿ.

ವಿಜಯಪುರ(ಸೆ.30): ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮವಿದ್ರೆ, ವಿಜಯಪುರದ  ಬಸವನಬಾಗೇವಾಡಿ  ತಾಲೂಕಿನ ಮಟ್ಯಾಳ ಗ್ರಾಮದ 100 ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬಗಳಿಗೆ ಸವರ್ಣಿಯರು ಬಹಿಷ್ಕಾರ ಹಾಕಿದ್ದಾರೆ.

ಮಟ್ಯಾಳ ಗ್ರಾಮದಲ್ಲಿನ ವೃತ್ತಕ್ಕೆ  ಬಸವೇಶ್ವರ, ಅಂಬೇಡ್ಕರ್ ಹಾಗೂ ಬುದ್ಧ ವೃತ್ತವೆಂದು ಘೋಷಿಸಲಾಗಿತ್ತು. ಆದರೆ ಆ ವೃತ್ತದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. .ಇದನ್ನ ಪ್ರಶ್ನಿಸಿದ 100 ದಲಿತ ಕುಟುಂಬಗಳಿಗೆ  ಬಹಿಷ್ಕಾರದ ಶಿಕ್ಷೆ ನೀಡಿದ್ದಾರೆ. ದಿನಸಿ ಅಂಗಡಿಗೆ ಹೋಗುವಂತಿಲ್ಲ. ದೇವಸ್ಥಾನಕ್ಕೂ ಪ್ರವೇಶವಿಲ್ಲ. ಗಿರಣಿ, ಪಡಿತರ ಅಂಗಡಿಗೂ ನಿರ್ಬಂಧ ಹೇರಿದ್ದಾರೆ. ದಲಿತರ ಕೇರಿಗೆ  ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಸಿದ್ದಾರಂತೆ. ಹೀಗಾಗೆ ನೊಂದ ದಲಿತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗೆ ಡಿಸಿ ಕಚೇರಿ ಎದುರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ದಲಿತರ ಮೇಲಿನ ದೌರ್ಜನ್ಯಕ್ಕೆ ಇತಿಶ್ರೀ ಹಾಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!