ನಿಲ್ಲದ ಧರ್ಮಯುದ್ಧ: ಇಬ್ಭಾಗವಾಗಲಿದೆಯಾ ವೀರಶೈವ ಮಹಾಸಭಾ?

Published : Aug 10, 2017, 08:39 AM ISTUpdated : Apr 11, 2018, 01:12 PM IST
ನಿಲ್ಲದ  ಧರ್ಮಯುದ್ಧ: ಇಬ್ಭಾಗವಾಗಲಿದೆಯಾ ವೀರಶೈವ ಮಹಾಸಭಾ?

ಸಾರಾಂಶ

ವೀರಶೈವ ಮಹಾಸಭಾ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅವಕಾಶ ನೀಡದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವ ಬರುವ ಸಾಧ್ಯತೆ ಹೆಚ್ಚಿದೆ. ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಇವತ್ತು ನಡೆಯಲಿರುವ ಮಹತ್ವದ ಸಭೆಯಲ್ಲಿ ತೀರ್ಮಾನವಾಗಲಿದೆ.

ಬೆಂಗಳೂರು(ಆ.10): ವೀರಶೈವ ಮಹಾಸಭಾ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅವಕಾಶ ನೀಡದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವ ಬರುವ ಸಾಧ್ಯತೆ ಹೆಚ್ಚಿದೆ. ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಇವತ್ತು ನಡೆಯಲಿರುವ ಮಹತ್ವದ ಸಭೆಯಲ್ಲಿ ತೀರ್ಮಾನವಾಗಲಿದೆ.

ಇಬ್ಭಾಗವಾಗಲಿದೆಯಾ ವೀರಶೈವ ಮಹಾಸಭಾ?

ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಜೋರಾಗಿದೆ. ಲಿಂಗಾಯತರ ಒಂದು ಗುಂಪು ವೀರಶೈವ ಮತ್ತು ಲಿಂಗಾಯತ ಸೇರಿ ಪ್ರತ್ಯೇಕ ಧರ್ಮ ಮಾಡುವುದಾದರೆ ಸರಿ ಇಲ್ಲವಾದಲ್ಲಿ ಪ್ರತ್ಯೇಕ ಧರ್ಮವೇ ಬೇಡ ಅಂತಾ ಹೇಳಿದ್ದಾರೆ. ಇದೇ ವೇಳೆ, ವೀರಶೈವರನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮದ ಘೋಷಣೆಯಾಗಬೇಕು ಅಂತಾ ಇನ್ನೂ ಕೆಲವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಉಭಯ ಬಣಗಳಲ್ಲಿ ಈ ಸಂಬಂಧ ಕಾರ್ಯ ಚಟುವಟಿಕೆಗಳು ಜೋರಾಗಿ ನಡೆದಿದ್ದು, ವೀರಶೈವ ಮಹಾಸಭಾ ಇಬ್ಭಾಗದತ್ತ ಸಾಗಿದಂತಾಗಿದೆ..

ಅಸ್ತಿತ್ವಕ್ಕೆ ಬರಲಿದೆಯಾ ಪ್ರತ್ಯೇಕ ಲಿಂಗಾಯತ ಮಹಾಸಭಾ?

ಒಂದು ವೇಳೆ ವೀರಶೈವ ಮಹಾಸಭಾ, ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಬೆಂಬಲಿಸಬೇಕು. ಯಾಕೆಂದರೆ ಈ ಹಿಂದೆ ವೀರಶೈವ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರ ಎರಡು ಬಾರಿ ತಿರಸ್ಕರಿಸಿದೆ. ಇದೀಗ ಮತ್ತೆ ನಾವು ವೀರಶೈವ ಲಿಂಗಾಯತ ಧರ್ಮದ ಬೇಡಿಕೆ ಇಟ್ಟರೆ ಸಾವಿರ ವರ್ಷವಾದರೂ ಪ್ರತ್ಯೇಕ ಧರ್ಮದ ಸ್ಥಾನ-ಮಾನ ಸಿಗಲ್ಲ ಅನ್ನೋ ಅಸಮಾಧಾನವನ್ನ ಲಿಂಗಾಯತ ಮುಖಂಡರು ಹೊರಹಾಕಿದ್ದಾರೆ. ಆದ್ರಿಂದ ವೀರಶೈವ ಹೊರತುಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒಪ್ಪಿದರೆ ಸರಿ ಇಲ್ಲವಾದಲ್ಲಿ ವೀರಶೈವ ಮಹಾಸಭಾದಿಂದ ಹೊರಬಂದು ಪ್ರತ್ಯೇಕ ಲಿಂಗಾಯತ ಮಹಾಸಭಾ ಅಸ್ಥಿತ್ವಕ್ಕೆ ಬರಲಿದೆ ಅನ್ನೋ ಮಾತು ಕೇಳಿ ಬಂದಿವೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಇವತ್ತು ಮಹತ್ವದ ಸಭೆ

ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹಾಗೂ ಲಿಂಗಾಯತ ಮಹಾಸಭಾವನ್ನು ಹುಟ್ಟುಹಾಕುವ ಬಗ್ಗೆ ಇವತ್ತು ನಡೆಯಲಿರುವ ಲಿಂಗಾಯತ ಮುಖಂಡರ ಮತ್ತು ಮಠಾಧೀಶರ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳಲಿದೆ. ಒಟ್ಟಿನಲ್ಲಿ ಪ್ರತ್ಯೇಕ ಧರ್ಮದ ಹೆಸರಲ್ಲಿ ವೀರಶೈವ ಮಹಾಸಭಾ ಅಸ್ಥಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರೆ, ಲಿಂಗಾಯತ ಮಹಾಸಭಾ ಉದಯದ ಕನಸು ಕಾಣುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ