ಡಿಕೆಶಿಗೆ ಮತ್ತೆ ಐಟಿ ಶಾಕ್!: ಇಂಧನ ಸಚಿವರ ಬ್ಯಾಂಕ್ ಅಕೌಂಟ್'ಗಳು ಸೀಜ್.!

Published : Aug 10, 2017, 08:24 AM ISTUpdated : Apr 11, 2018, 12:38 PM IST
ಡಿಕೆಶಿಗೆ ಮತ್ತೆ  ಐಟಿ ಶಾಕ್!: ಇಂಧನ ಸಚಿವರ ಬ್ಯಾಂಕ್ ಅಕೌಂಟ್'ಗಳು ಸೀಜ್.!

ಸಾರಾಂಶ

ಐಟಿ ದಾಳಿಯ ಸುಳಿಯಲ್ಲಿ ಸಿಲುಕಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್​​ಗೆ ಮತ್ತೊಂದು ನೋಟಿಸ್​ ಜಾರಿಯಾಗಿದೆ. ಡಿಕೆಶಿ ನೀಡಿದ್ದ ಉತ್ತರಕ್ಕೆ ಸಮಾಧಾನಗೊಳ್ಳದ ಆದಾಯ ತೆರಿಗೆ ಅಧಿಕಾರಿಗಳು ಮತ್ತೆ ಬುಲಾವ್​​ ನೀಡಿದ್ದಾರೆ. ಅಲ್ಲದೆ, ಡಿಕೆಶಿವಕುಮಾರ್​​ ಮತ್ತವರ ಕುಟುಂಬಸ್ಥರ ಬ್ಯಾಂಕ್​ ಅಕೌಂಟ್​​'ಗಳನ್ನು ಲಾಕ್​ ಮಾಡಿ ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು(ಆ.10): ಐಟಿ ದಾಳಿಯ ಸುಳಿಯಲ್ಲಿ ಸಿಲುಕಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್​​ಗೆ ಮತ್ತೊಂದು ನೋಟಿಸ್​ ಜಾರಿಯಾಗಿದೆ. ಡಿಕೆಶಿ ನೀಡಿದ್ದ ಉತ್ತರಕ್ಕೆ ಸಮಾಧಾನಗೊಳ್ಳದ ಆದಾಯ ತೆರಿಗೆ ಅಧಿಕಾರಿಗಳು ಮತ್ತೆ ಬುಲಾವ್​​ ನೀಡಿದ್ದಾರೆ. ಅಲ್ಲದೆ, ಡಿಕೆಶಿವಕುಮಾರ್​​ ಮತ್ತವರ ಕುಟುಂಬಸ್ಥರ ಬ್ಯಾಂಕ್​ ಅಕೌಂಟ್​​'ಗಳನ್ನು ಲಾಕ್​ ಮಾಡಿ ತನಿಖೆ ಚುರುಕುಗೊಳಿಸಿದ್ದಾರೆ.

ಡಿ.ಕೆ.ಶಿವಕುಮಾರ್​​​ಗೆ ಐಟಿಯಿಂದ ಮತ್ತೊಂದು ನೋಟಿಸ್​​​

ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್​ ಮನೆ ಸೇರಿ 39 ಕಡೆ ದಾಳಿ ನಡೆಸಿ ಸೀಜ್​​ ಮಾಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್​ ನೀಡಿದ್ದಾರೆ. ಈಗಾಗಲೇ ನೋಟಿಸ್​​ ಜಾರಿ ಮಾಡಿದ್ದು 2 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಇವತ್ತು ಐಟಿ ಅಧಿಕಾರಿಗಳ ಮುಂದೆ ಹಾಜರಾಗಲೇ ಬೇಕಾದ ಅನಿವಾರ್ಯತೆ ಡಿಕೆಶಿಗೆ ಎದುರಾಗಿದೆ. ಸೋಮವಾರ ವಿಚಾರಣೆ ವೇಳೆ ಡಿಕೆಶಿವಕುಮಾರ್​ ನೀಡಿದ್ದ ಉತ್ತರಗಳಿಗೆ ಸಮಾಧಾನಗೊಳ್ಳದ ಅಧಿಕಾರಿಗಳು ಮತ್ತಷ್ಟು ಪ್ರಶ್ನೆಗಳನ್ನು ಸಿದ್ದಪಡಿಕೊಂಡು ವಿಚಾರಣೆಗೆ ತಯಾರಿ ನಡೆಸಿಕೊಂಡಿದ್ದಾರೆ.

ಡಿಕೆಶಿ ಮಾವ ತಮ್ಮಯ್ಯ ಕೂಡ ವಿಚಾರಣೆಗೆ ಹಾಜರು ಸಾಧ್ಯತೆ

ಡಿ.ಕೆ.ಶಿವಕುಮಾರ್​ ಮಾವ ತಮ್ಮಯ್ಯ ಅವರ ಮೈಸೂರಿನ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿತ್ತು. ಇವತ್ತು ಡಿ.ಕೆ.ಶಿವಕುಮಾರ್​ ಜೊತೆ ಮಾವ ತಮ್ಮಯ್ಯ ಹಾಗೂ ಶರ್ಮಾ ಟ್ರಾವೆಲ್ಸ್​​ ಮಾಲೀಕ ಸುನೀಲ್​​ ಶರ್ಮಾ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್​​ ಬ್ಯಾಂಕ್​ ಅಕೌಂಟ್​ಗಳು ಸೀಜ್​​.!

ಡಿಕೆ ಶಿವಕುಮಾರ್​ ಮನೆ ಹಾಗೂ ಇತರೆಡೆ ದಾಳಿ ವೇಳೆ 300 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅಲ್ಲದೆ, 15 ಕೋಟಿ  ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್​, ಪತ್ನಿ ಉಷಾ ಶಿವಕುಮಾರ್​ ಹಾಗೂ ಮಕ್ಕಳ ಬ್ಯಾಂಕ್​ ಅಕೌಂಟ್'​ಗಳನ್ನು ಸೀಜ್​ ಮಾಡಲಾಗಿದೆ. ಖಾತೆಗಳ ವಹಿವಾಟುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಐಟಿ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ