
ಬೆಂಗಳೂರು(ಜ.07): ಪತಿಯ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡ ಪತ್ನಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಮಲಾನಗರದಲ್ಲಿ ನಡೆದಿದೆ.
ಅನಸೂಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಗೃಹಿಣಿ ಕಳೆದ 15 ವರ್ಷಗಳ ಹಿಂದೆ ಕನಕಪುರದ ಸಿದ್ದರಾಜು ಜೊತೆಗೆ ಅನಸೂಯರ ಮದುವೆಯಾಗಿತ್ತು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಸಿದ್ದರಾಜು ಕಳೆದ 10 ವರ್ಷಗಳಿಂದ ಹೆಸರಘಟ್ಟದ ಮೀನಾಕ್ಷಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.
ಈ ಹಿಂದೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರೂ ಸಿದ್ದರಾಜು ಕೇಳಿರಲಿಲ್ಲ. ನಿನ್ನೆ ಹೆಸರಘಟ್ಟದ ಮೀನಾಕ್ಷಿ ಮನೆಯಲ್ಲಿ ಇಬ್ಬರೂ ಜೊತೆಗಿರುವ ದೃಶ್ಯವನ್ನ ಪತ್ನಿ ಅನುಸೂರು ಪ್ರತ್ಯಕ್ಷ ಕಂಡಿದ್ದಾಳೆ. ಇದರಿಂದ ಮನನೊಂದ ಅನಸೂಯ ಸಂಬಂಧಿಕರ ಜೊತೆ ಮೊಬೈಲ್'ನಲ್ಲಿ ಮಾತನಾಡಿ ವಿಷಸೇವಿಸಿದ್ದಾಳೆ.
ಕೂಡಲೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.